ಶಿಕ್ಷಣ ತಜ್ಞರು ಅತಿಥಿ ಉಪನ್ಯಾಸಕರನ್ನು ಉನ್ನತ ಶಿಕ್ಷಣದ “ಬೆನ್ನೆಲುಬು” ಎಂದು ಪರಿಗಣಿಸುತ್ತಾರೆ. ಅವರು ಪರಿಣಿತ ವಿಷಯ ಜ್ಞಾನ ಮತ್ತು ಬೋಧನಾ ಅನುಭವವನ್ನು ತರುತ್ತಾರೆ, ಆದರೆ ಉದ್ಯೋಗ ಭದ್ರತೆಯ ಕೊರತೆ ಮತ್ತು ಕಡಿಮೆ ವೇತನದಂತಹ ಸವಾಲುಗಳನ್ನು ಎದುರಿಸುತ್ತಾರೆ. ಇತ್ತೀಚಿನ ನಿಯಮಗಳ ಪ್ರಕಾರ, ಇವರಿಗೆ ಯುಜಿಸಿ ಅರ್ಹತೆ ಪಡೆಯಲು ಕಾಲಮಿತಿ ನೀಡಿ, ಸೇವೆಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ
ದೇಶದ ಭವಿಷ್ಯ ಶಾಲಾ ಅಥವಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮುಖ್ಯ ಪಾತ್ರ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಅಲ್ಲಿಯ ಶೈಕ್ಷಣಿಕ ಸ್ಥಿತಿಗತಿಯ ಪಾತ್ರ ಮಹತ್ವದ್ದು, ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಶಿಕ್ಷಕರು, ಉಪನ್ಯಾಸಕರ ಪಾತ್ರ ಹಿರಿದು. ಆದರೆ ಸುಭದ್ರ ರಾಷ್ಟ್ರ ಕಟ್ಟುವಲ್ಲಿ ಶಿಲ್ಪಿಗಳೆ ಅಭದ್ರರಾಗಿದ್ದಲ್ಲಿ ಎಂಥ ರಾಷ್ಟ್ರ ನಿರ್ಮಾಣ ಸಂಧ್ಯ?
ರಾಜ್ಯದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಸರ್ಕಾರ ತಳೆಯುತ್ತಿರುವ ಧೋರಣೆ ಇಂಥದೊಂದು ಪ್ರಶ್ನೆಯನ್ನು ಹುಟ್ಟು ಹಾಕುವಂತೆ ಮಾಡುತ್ತದೆ. ಅದರಲ್ಲೂ ಪದವಿ ಶಿಕ್ಷಣ ತೀರ ಅನಾದರಕ್ಕೆ ಒಳಗಾಗುತ್ತಿದೆ. ರಾಜ್ಯದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಕಳೆದ 18 ವರ್ಷಗಳಿಂದ ಅರೆಕಾಲಿಕ ಉಪನ್ಯಾಸಕರ ಸೇವಾ ವಿಲೀನವಾದ ನಂತರ ಅತಿಥಿ ಉಪನ್ಯಾಸಕ ಎಂಬ ಪದವನ್ನು ಸೃಷ್ಟಿಸಿ ನಮ್ಮನ್ನಾಳುವ ಸರ್ಕಾರಗಳು, ಅಧಿಕಾರಿಗಳು ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವುದು ಅಮಾನವೀ ಯವಾಗಿದೆ. NOF ಉಪನ್ಯಾಸಕರನ್ನೇ ನೇಮಿಸಿಕೊಳ್ಳುತ್ತಾ ಪಾಠ ಪ್ರವಚನ ಮಾಡಿಸಿಕೊಳ್ಳುವುದು, ಸೆಮಿಸ್ಟರ್ ಮುಗಿದ ಮೇಲೆ ಅವರನ್ನು ಸೇವೆಯಿಂದ ಹೊರಗಡೆ ಹಾಕುವುದೊಂದೇ ಅದರ ಮುಖ್ಯ ಗುರಿಯಾಗಿದೆ.
ಇದು ಆಧುನಿಕ ಭಾರತದಲ್ಲಿ ಪ್ರತಿಭಾವಂತರ ಶಿಕ್ಷಕರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿರುವ ಶೋಷಣೆಯ ಪ್ರತೀಕವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಿರುವ ಸರ್ಕಾರಗಳು ಮಾನವೀಯತೆಯನ್ನು ಮೆರೆದಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಅಂತಹ ಯಾವುದೇ ಆಶಾದಾಯಕ ಪ್ರಕ್ರಿಯೆಗಳು ನಡೆಯುತ್ತಿಲ್ಲ.
ಅಧಿಕಾರದಲ್ಲಿದ್ದಾಗ ಒಂದು ರೀತಿಯಲ್ಲಿ ಮಾತನಾಡುವ ರಾಜಕೀಯ ನಾಯಕರು, ಅಧಿಕಾರಕ್ಕೆ ಬಂದಾಗ ಅದಕ್ಕೆ ತದ್ವಿರುದ್ಧವಾಗಿ ಮಾತನಾಡುವ ಎರಡು ನಾಲಗೆಯುಳ್ಳ ರಾಜಕೀಯ ನಾಯಕರು ಕರ್ನಾಟಕದಲ್ಲಿ ಇದ್ದಾರೆ. ಇವರು ಮೇಲಾಗಿ ತಾವು ಸಮಾಜವಾದಿಗಳು, ಅಹಿಂದ ಪರ ಎಂದು ಸಾಬೀತು ಪಡಿಸಿದೆ. ಹೇಳಿಕೊಂಡು ಮತಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಹೊರತು ಯಾವುದೇ ರೀತಿಯಲ್ಲಿ ಶೋಷಿತರ ಪರ ಇಲ್ಲವೆಂಬುದು ಈ ಬಾರಿಯ 2026-27ನೇ ಬಜೆಟ್
ಒಂದೆಡೆ ನಾಲ್ಕು ಸಾವಿರಕ್ಕೂ ಅಧಿಕ ನಾನ್ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ನಾನ್ ಯುಜಿಸಿಯಿಂದಲೇ ಹಲವಾರು
ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಹೀಗೆ ರೂಪಿಸಿಕೊಳ್ಳಲು ಉತ್ತಮ ವಾಠ ಪ್ರವಚನ ಮಾಡಿದವರು ನಾನ್ ಯುಜಿಸಿಯವರು ಎಂದರೆ ತಪ್ಪಾಗಲಾರದು. ಅತ್ಯಂತ ಕಡಿಮೆ ಗೌರವಧನಕ್ಕೆ 15-20 ವರ್ಷಗಳಿಂದ ದುಡಿದು ಮೂಲೆ ಸೇರಿಕೊಂಡಿರುವ ಅತಿಥಿ ಉಪನ್ಯಾಸಕರ ಗೋಳು ಕೇಳುವವರಿಲ್ಲ. ಆರಂಭದಲ್ಲಿ ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಗೆ ಏನೋ ಉಪಕಾರ ಮಾಡಿಬಿಡುತ್ತೇನೆ ಎಂಬುದು ಸರ್ಕಾರದ ಸಚಿವರು ಹೇಳಿದರು. ಕೊನೆ ಕೊನೆಗೆ ಐಎಎಸ್ ಅಧಿಕಾರಿಗಳ ಮೂಲಕ ಆದೇಶಗಳನ್ನು ಜಾರಿಗೊಳಿಸಿ ಅವರನ್ನು ಬೀದಿಗೆ ಬೀಳುವಂತೆ ಮಾಡಿದರು.
ಈ ರೀತಿಯ ಶೋಷಣೆ ಪ್ರಕ್ರಿಯೆ ಬ್ರಿಟಿಷರ ಅವಧಿಯಲ್ಲೂ ಇರಲಿಲ್ಲವೆನಿಸುತ್ತದೆ. ಯಾವ ವಿಷಯದಲ್ಲಿ ಯುಜಿಸಿ ಅರ್ಹತೆ ಇಲ್ಲದ ಅತಿಥಿ ಉಪನ್ಯಾಸಕರು ಸಿಗದಿದ್ದ ಪಕ್ಷದಲ್ಲಿ ನಾನ್ ಯುಜಿಸಿ ಯವರನ್ನೇ ಮತ್ತೆ ನೇಮಕ ಮಾಡಿಕೊಳ್ಳುವ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ. ಬೇಕಾದ ಇಟ್ಟುಕೊಳ್ಳುವುದು ಬೇಡವಾದಾಗ ಅತಿಥಿ ಉಪನ್ಯಾಸಕರನ್ನು ಕಿತ್ತಾಕುವುದು ಸರ್ಕಾರದ ಶೋಷಣೆಯ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಇದಕ್ಕೆ ಕಾರಣ ಪ್ರತಿಭಾವಂತರಾದ ಅತಿಥಿ ಅತಿಥಿ ಉಪನ್ಯಾಸಕರನ್ನು ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ.
ಇವರಲ್ಲಿ ನಾಯಕತ್ವದ ಕೊರತೆ ಉಂಟಾಗಿದೆ. ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡರೂ ಅವರಿಗೆ ನೀಡುವ ಗೌರವಧನದಲ್ಲಿ ಯಾವುದೇ ಏರಿಕೆಯಾಗಿಲ್ಲ. ಮತ್ತೆ ಅದೇ ಹಳೇ ಸಂಭಾವನೆಯನ್ನು ನೀಡುತ್ತಿದೆ. ಅರ್ಹತೆಗೆ ತಕ್ಕಂತೆ ಗೌರವಧನ ನೀಡಬೇಕಾದ ಸರ್ಕಾರ ಕಡಿಮೆ ಗೌರವಧನ ನೀಡಿ ಮತ್ತಷ್ಟು ಶೋಷಣೆಗೆ ಈಡು ಮಾಡುತ್ತಿದೆ ಎಂದು ಅತಿಥಿ ಉಪನ್ಯಾಸಕರು ದೂರುತ್ತಿದ್ದಾರೆ.
ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನು ಪಾಠ ಮಾಡಲು ವಿದ್ಯಾರ್ಥಿಗಳ ಮುಂದೆ ನಡುಗುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರಿಗೆ ಬೋಧನಾ ಅನುಭವದ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಬೋಧನೆಯಾಗುತ್ತಿಲ್ಲ ಎಂಬ ದೂರು ವಿದ್ಯಾರ್ಥಿ ವಲಯದಿಂದ ಕೇಳಿಬಂದಿದೆ. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯಂತೂ ಇಲ್ಲವೇ ಇಲ್ಲ. ಕೆಲಸದ ಹೊರೆ ಜಾಸ್ತಿ, ಪದವಿ ಶಿಕ್ಷಣದ ಆಧಾರ ಸ್ತಂಭಗಳಾಗಿರುವ ಅತಿಥಿ ಉಪನ್ಯಾಸಕರಿಗೆ ಸೂಕ್ತ ಗೌರವಧನ ಹಾಗೂ ಪ್ರೋತ್ಸಾಹ ಯೋಜನೆಗಳನ್ನು ರೂಪಿಸುವ ಮತ್ತು ಹಂತ ಹಂತವಾಗಿ ಸೇವಾ ಭದ್ರತೆಯನ್ನು ನೀಡಿ ಅವರಿಗೆ ಆರ್ಥಿಕ ಭದ್ರತೆಯನ್ನು ನೀಡಬೇಕಾಗಿದೆ. ಇಲ್ಲವಾದರೆ ನಿವೃತ್ತಿಯಾದ
ಮಾನಸಿಕ ಶೋಭೆ, ತೊಳಲಾಟಗಳಲ್ಲಿ ಸಿಲುಕಿ ತೊಂದರೆಗೆ ಈಡಾಗುತ್ತಾರೆ. ಆದ್ದರಿಂದ ಉನ್ನತ ಶಿಕ್ಷಣ ಇಲಾಖೆ ಇವರ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕು, ಸರ್ಕಾರಕ್ಕೆ ಇಷ್ಟರ ಮಟ್ಟಿಗೆ ಪ್ರಜ್ಞೆ ಇರದಿದ್ದರೆ ಏನು ಪ್ರಯೋಜನ ಇದೇನು ಪ್ರಜಾಪ್ರಭುತ್ವವೋ ಅಥವಾ ಶೋಷಣೆಯ ಪ್ರಭುತ್ವವೋ ಎಂದು ಪ್ರಶ್ನೆ ಮಾಡಬೇಕಾಗುತ್ತದೆ. ಪದವೀಧರರು ಸಮಾಜಕ್ಕೆ ಮಾದರಿಯಾಗಬೇಕು.
ವಿಶ್ವವಿದ್ಯಾಲಯಗಳು ನೀಡುವ ಪದವಿಗಳು ವ್ಯಕ್ತಿಗೆ ಸಮಾಜದಲ್ಲಿ ಗೌರವ ತಂದು ಕೊಡಬೇಕು. ಆದರೆ ಅದು ಆಗುತ್ತಿಲ್ಲ. ವಿಶ್ವವಿದ್ಯಾಲಯಗಳಿಂದ ಹೊರಬರುವವರು ನಿರುದ್ಯೋಗಿ ಗಳಾಗುತ್ತಿದ್ದಾರೆ. ಅವರಿಗೆ ಮಾರ್ಗ ದರ್ಶನದ ಕೊರತೆ ಇದೆ, ಕಾಲೇಜುಗಳಲ್ಲಿ ನಡೆಯುವ ಉದ್ಯೋಗ ಮೇಳಗಳು.
ಕೌಶಲ್ಯ ಮೇಳಗಳು ಕೇವಲ ಕಾಟಾಚಾರದ ಮೇಳಗಳಾಗಿವೆ. ಇವು ಬರೀ ಕಾಗದದ ಮೇಲಷ್ಟೇ ಇವೆ. ಮತ್ತೊಂದೆಡೆ ಸರ್ಕಾರದ ಆದೇಶಗಳಿಂದ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ಜೀವನ ಆಭದ್ರತೆಯಿಂದ ಹಾಳಾಗಿದ್ದು ಸರ್ಕಾರ ನಾನ್ ಯುಜಿಸಿಯವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಅವರಿಗೆ ಸೇವಾ ಭದ್ರತೆಯನ್ನು ನೀಡಬೇಕಾಗಿದೆ.
ಕಾಲ ಹರಣ ಮಾಡಿದ ಸಿಎಂ ಕಳೆದ ಆರು ತಿಂಗಳಿಂದ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಹನುಮಂತ ಗೌಡ ಕಲ್ಮನಿ ಅವರು ಬಸವರಾಜ ಹೊರಟ್ಟಿ ಮತ್ತು ಹೆಚ್.ಕೆ.ಪಾಟೀಲ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಯಾದಾಗಲೆಲ್ಲಾ ನಿಮಗೆ ಒಳ್ಳೇದು ಆಗುತ್ತದೆ.
ಹೋಗಿ ಎಂದು ಹೇಳುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ಹೋರಾಟಗಳನ್ನು ಹತ್ತಿಕ್ಕುತ್ತಾ ಬಂದಿದ್ದಾರೆ ಹೋರಾಟದಲ್ಲಿ ಭಾಗವಹಿಸಲು ಆಗದೇ ಅತಿಥಿ ಉಪನ್ಯಾಸಕರು ಈಗ ಕೂಲಿ ಹೋಗಲು ಸಾಧ್ಯವಾಗುತ್ತಿಲ್ಲ.
ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಸದಾ ಲವಲವಿಕೆಯಿಂದ FD ಕಾಲೇಜುಗಳಲ್ಲಿ ಉಪನ್ಯಾಸವನ್ನು ಮಾಡಿ ಬದುಕು ಕಟ್ಟಿಕೊಳ್ಳಬೇಕೆಂದು ಅಂದು ಕೊಂಡಿದ್ದವರೆಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ. ತಾವು ಕಾಲೇಜಿನ ಕಡೆಗೆ ಮುಖ ಮಾಡಲು ಸಾಧ್ಯವಾಗುತ್ತಿಲ್ಲ. ಇವರಿಗೆ ಮನೋಸ್ಥೆರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ವರದಿ: ಡಿ.ಸಿದ್ದೇಶ್ ಗುಗ್ಗರಹಟ್ಟಿ






Any questions related to ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಗೆ 4 ತಿಂಗಳಿಂದ ಗೌರವಧನ ಇಲ್ಲ ಬೀದಿಗೆ ತಳ್ಳಿದ ಉನ್ನತ ಶಿಕ್ಷಣ ಇಲಾಖೆ?