|

ತಮ್ಮ ವಾಕ್ ಚಾತುರ್ಯದಿಂದಲೇ ಜಗತ್ತನ್ನು ಮೋಡಿ ಮಾಡಿದ ಮೋಡಿಗಾರ – ಸ್ವಾಮಿ ವಿವೇಕಾನಂದರು.

ಕಲಬುರಗಿ.12.ಜನವರಿ.26: ತಮ್ಮ ಮಾತಿನ ಮೊಡಿಯಿಂದಲೇ ಜಗತ್ತನ್ನು ಮೋಡಿ ಮಾಡಿದ ಮೋಡಿಗಾರ ಸ್ವಾಮಿ ವಿವೇಕಾನಂದರು ,ಅವರು ಒಬ್ಬ ಸನ್ಯಾಸಿ ಮಾತ್ರವಲ್ಲ ಸ್ವದೇಶಾಭಿಮಾನ,ಸ್ವಜನ ಕಾಳಜಿ ,ಶೌರ್ಯ,ಅವರಿಗೆ ಹುಟ್ಟಿನಿಂದಲೇ ಬಂದವುಗಳಾಗಿದ್ದವು ಎಂದು ಡಾ.ಮಹೇಶ ಗಂವ್ಹಾರ ಹೇಳಿದರು ಅವರು ನಗರದ ಹೆಚ್.ಕೆ.ಇ. ಬಾಲಕಿಯರ ಪದವಿ ಪೂರ್ವ ಕಾಲೇಜು ಕಲಬುರಗಿಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 164 ನೇ ಜಯಂತಿಯ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಆನಂದ ಪಾಟೀಲ,ಸವಿತಾ ಪಾಟೀಲ,ಜಾನಕಿ ಪಾಟೀಲ, ವಿಜಯಲಕ್ಚ್ಮಿ ಪಾಕಿನ, ಸರೋಜಾ ರಾಠೋಡ,ಗೀತಾ ಹಾಗೂ ವಿದ್ಯಾರ್ಥಿ ಸಂಘದ ಸಂಯೋಜಕರಾದ ಝೈಬಾ ಅಖ್ತರ ಹಾಗೂ ಅನಸುಯಾ ಗಾದಾ, ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Similar Posts

Leave a Reply

Your email address will not be published. Required fields are marked *