ಹೊಸ ದೆಹಲಿ.08.ಜನವರಿ.26: ಸೇವೆಯಲ್ಲಿರುವ ಸೈನಿಕ. ಮಾಜಿ ಸೈನಿಕ ಹಾಗೂ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಮತ್ತು ಅವಲಂಬಿತರಿಗೆ ಕ್ರೀಡಾ ವಿದ್ಯಾರ್ಥಿವೇತನ ನೀಡಲು ಅರ್ಹ ಅಭ್ಯರ್ಥಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರೀಯ ಸೈನಿಕ ಬೋರ್ಡ್ (KSB) ವಿದ್ಯಾರ್ಥಿವೇತನವು ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಸ್ಕೀಮ್ (PMSS) ಮೂಲಕ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಮಕ್ಕಳಿಗೆ ಉನ್ನತ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುತ್ತದೆ, ಇದಕ್ಕಾಗಿ buddy4study.com/scholarship/prime-minister-scholarship-scheme ವೆಬ್ಸೈಟ್ನಂತೆ, ಅರ್ಹತೆ, ಅರ್ಜಿ ಸಲ್ಲಿಕೆ ಮತ್ತು ವಿದ್ಯಾರ್ಥಿವೇತನದ ವಿವರಗಳಿಗಾಗಿ KSB.GOV.IN ನ PMSS ವಿಭಾಗವನ್ನು ಪರಿಶೀಲಿಸಬಹುದು. ವಿದ್ಯಾರ್ಥಿವೇತನದ ಮೊತ್ತವು ಕೋರ್ಸ್ ಮತ್ತು ಲಿಂಗದ ಆಧಾರದ ಮೇಲೆ ಬದಲಾಗುತ್ತದೆ ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಯೋಜನೆ ಮತ್ತು ಉದ್ದೇಶ:
ಯೋಜನೆ: ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಸ್ಕೀಮ್ (PMSS).
ಉದ್ದೇಶ: ಮಾಜಿ ಸೈನಿಕರು/ಮಾಜಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಮತ್ತು ಅವರ ವಿಧವೆಯರ ಅವಲಂಬಿತ ವಾರ್ಡ್ಗಳಿಗೆ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು.
ಅರ್ಹ ಕೋರ್ಸ್ಗಳು:
BE, B.Tech, BDS, MBBS, B.Ed, BBA, BCA, B.Pharma, BA+LLB, MBA, MCA ನಂತಹ ಮೊದಲ ವೃತ್ತಿಪರ ಪದವಿ ಮತ್ತು ಕೆಲವು ಸ್ನಾತಕೋತ್ತರ ಕೋರ್ಸ್ಗಳು.
ದೂರ ಶಿಕ್ಷಣ ಅಥವಾ ವೃತ್ತಿಪರ ಕೋರ್ಸ್ಗಳಿಗೆ ಅವಕಾಶವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
ಆನ್ಲೈನ್ ಅರ್ಜಿ: ksb.gov.in/how-apply-scholarship.htm ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು; ಹಾರ್ಡ್ ಕಾಪಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಒಬ್ಬ ವಿದ್ಯಾರ್ಥಿಯು ಒಂದೇ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ:
ವೆಬ್ಸೈಟ್: ksb.gov.in ನಲ್ಲಿ PMSS ವಿಭಾಗದಲ್ಲಿ ವಿವರಗಳನ್ನು ಪರಿಶೀಲಿಸಬಹುದು.
ಅರ್ಜಿ ನಮೂನೆ ಮತ್ತು ಬ್ರೋಷರ್: desw.gov.in ನಿಂದ ಡೌನ್ಲೋಡ್ ಮಾಡಬಹುದು.
ವಿದ್ಯಾರ್ಥಿವೇತನ ನೀಡುವ ಪ್ರಕ್ರಿಯೆಯು ಪ್ರತಿ ವರ್ಷ ಎಪ್ರಿಲ್ ತಿಂಗಳಲ್ಲಿ ಪ್ರಾರಂಭ.
ಅರ್ಹ ಮಾಜಿ ಸೈನಿಕರು ಮಕ್ಕಳು, ಅವಲಂಬಿತರು ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೆ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಜ್ಞಾನಿಕ ಪದ್ದತಿಯಿಂದ ಗೋಡಂಬಿ ಬೆಳೆಯ ಕುರಿತು ಉಚಿತ ತರಬೇತಿಗೆ ನೋಂದಣಿ ಪ್ರಾರಂಭ
ಧಾರವಾಡ ” ಧಾರವಾಡ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ (ಕುಂಬಾಪುರ ಫಾರ್ಮ)ವು ವೈಜ್ಞಾನಿಕ ಪದ್ದತಿಯಿಂದ ಗೋಡಂಬಿ ಬೆಳೆಯ ಕುರಿತು ಉಚಿತ ತರಬೇತಿ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜನವರಿ 19, 2026 ರಂದು ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಗೋಡಂಬಿ ಬೆಳೆಗೆ ಸಂಬಂಧಿಸಿದ ಸುಧಾರಿತ ತಂತ್ರಜ್ಞಾನಗಳು, ತಳಿಗಳ ಆಯ್ಕೆ, ತೋಟ ನಿರ್ವಹಣೆ, ಪೋಷಕಾಂಶ ನಿರ್ವಹಣೆ, ಕೀಟ-ರೋಗ ನಿಯಂತ್ರಣ ಹಾಗೂ ಕೋಯ್ಲುತ್ತರ ತಂತ್ರಜ್ಞಾನದ ಕುರಿತು ನುರಿತ ಹಾಗೂ ಅನುಭವವುಳ್ಳ ತಜ್ಞರಿಂದ ತಾಂತ್ರಿಕ ಮಾಹಿತಿಯನ್ನು ನೀಡಲಾಗುತ್ತದೆ.
ಆಸಕ್ತ ರೈತರು ಧಾರವಾಡ ತೋ.ವಿ.ಶಿ.ಕೇಂದ್ರ, ಪ್ರಾ.ತೋ.ಸಂ.ವಿ.ಕೇಂದ್ರದ ಮುಖ್ಯಸ್ಥೆ ಡಾ. ಪಲ್ಲವಿ ಜಿ. ಮೊಬೈಲ್ ನಂ: 7892770955 ಗೆ ಜನವರಿ 17, 2026 ರೊಳಗಾಗಿ ನೊಂದಾಯಿಸಕೊಳ್ಳಬೇಕೇಂದು ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಪ್ರಕಟಣೆ ತಿಳಿಸಿದೆ.






Any questions related to ಕೇಂದ್ರೀಯ ಸೈನಿಕ ಬೋರ್ಡ್ ವತಿಯಿಂದ ವಿದ್ಯಾರ್ಥಿವೇತನಕೆ ಅರ್ಜಿ ಆಹ್ವಾನ.?