Home » ಲೈವ್ ನ್ಯೂಸ್ » 10 ವರ್ಷ ಗುತ್ತಿಗೆ ನೌಕರರಾಗಿ ಸೇವೆ ಮಾಡಿದ್ರೆ ‘ಖಾಯಂ’ ಭಾಗ್ಯ – ಹೈಕೋರ್ಟ್ !

10 ವರ್ಷ ಗುತ್ತಿಗೆ ನೌಕರರಾಗಿ ಸೇವೆ ಮಾಡಿದ್ರೆ ‘ಖಾಯಂ’ ಭಾಗ್ಯ – ಹೈಕೋರ್ಟ್ !

Facebook
X
WhatsApp
Telegram

ಬೆಂಗಳೂರು.07.ಜನವರಿ.26: ರಾಜ್ಯ ಹಾಗೂ ಕೇಂದ್ರ ಸರ್ಕಾರಿ ವಿಧಗದಲ್ಲಿ ಗುತ್ತಿಗೆ ನೌಕರರಾಗಿ 10 ವರ್ಷ ಸೇವೆ ಮಾಡಿದ್ರೆ ಸರ್ಕಾರಿ ಕೆಲಸ ಖಾಯಂ : ನೀವು ಅಥವಾ ನಿಮ್ಮ ಮನೆಯವರು ಸರ್ಕಾರಿ ಕಚೇರಿಗಳಲ್ಲಿ ದಿನಗೂಲಿ ಅಥವಾ ಗುತ್ತಿಗೆ ಆಧಾರದ ಮೇಲೆ ವರ್ಷಗಟ್ಟಲೆ ಬೆವರಿಳಿಸಿ ದುಡಿಯುತ್ತಿದ್ದೀರಾ? ಪ್ರತಿ ದಿನವೂ “ನನ್ನ ಕೆಲಸ ಎಂದು ಖಾಯಂ ಆಗುತ್ತೋ ಏನೋ, ನನ್ನ ಭವಿಷ್ಯವೇನು?” ಎಂಬ ಆತಂಕ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ, ನಿಮ್ಮ ಮೊಗದಲ್ಲಿ ಮಂದಹಾಸ ಮೂಡಿಸುವ ಅತಿದೊಡ್ಡ ಸಿಹಿ ಸುದ್ದಿಯೊಂದು ಇಲ್ಲಿದೆ.

ಸರ್ಕಾರಗಳು ತಮಗೆ ಬೇಕಾದಾಗ ನಿಮ್ಮನ್ನು ಬಳಸಿಕೊಂಡು, ಕೆಲಸ ಖಾಯಂ ಮಾಡುವ ಸಮಯ ಬಂದಾಗ ಕೈತೊಳೆದುಕೊಳ್ಳುವಂತಿಲ್ಲ! ಗುತ್ತಿಗೆ ನೌಕರರ ಪರವಾಗಿ ಹೈಕೋರ್ಟ್ ಈಗ ಬಲವಾದ ಚಾಟಿ ಬೀಸಿದೆ. ಏನಿದು ತೀರ್ಪು? ಇದು ನಿಮಗೆ ಹೇಗೆ ನೆರವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ, ಕೊನೆಯವರೆಗೂ ಓದಿ.

ನ್ಯಾಯಾಲಯ ಹೇಳಿದ್ದೇನು? “ಯಾವುದೇ ನೌಕರರು 10 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರೆ, ಅಂತಹವರನ್ನು ಸರ್ಕಾರ ಕಡ್ಡಾಯವಾಗಿ ಖಾಯಂಗೊಳಿಸಲೇಬೇಕು ” ಎಂದು ನ್ಯಾಯಮೂರ್ತಿ ಸಂದೀಪ್ ಮೌದ್ಗಿಲ್ ಅವರ ಪೀಠ ಖಡಕ್ ಆದೇಶ ನೀಡಿದೆ.

ನೌಕರರಿಂದ ದಶಕಗಳ ಕಾಲ ಕಡಿಮೆ ಸಂಬಳಕ್ಕೆ ಕೆಲಸ ಮಾಡಿಸಿಕೊಂಡು, ವಯಸ್ಸಾದ ಮೇಲೆ ಅವರನ್ನು ಖಾಯಂ ಮಾಡಲು ನಿರಾಕರಿಸುವುದು ಘೋರ ಅನ್ಯಾಯ ಮತ್ತು ಶೋಷಣೆ” ಎಂದು ಕೋರ್ಟ್ ಸರ್ಕಾರಕ್ಕೆ ಚುರುಕು ಮುಟ್ಟಿಸಿದೆ. 1994ರಿಂದಲೂ ತಾತ್ಕಾಲಿಕವಾಗಿ ದುಡಿಯುತ್ತಿರುವವರನ್ನು ಇನ್ನೂ ಖಾಯಂ ಮಾಡದಿರುವುದಕ್ಕೆ ಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.

ತೀರ್ಪಿನ ಹೈಲೈಟ್ಸ್
ಯಾರಿಗೆ ಸಿಗಲಿದೆ ಲಾಭ?: ದಿನಗೂಲಿ, ಗುತ್ತಿಗೆ ಮತ್ತು ತಾತ್ಕಾಲಿಕ ನೌಕರರಿಗೆ.
ಸೇವಾ ಅವಧಿ ಎಷ್ಟು?: ಕನಿಷ್ಠ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು.
ಏನಾಗಲಿದೆ?: ಸರ್ಕಾರಿ ನೌಕರಿ ಖಾಯಂ  ಮಾಡುವುದು ಸರ್ಕಾರದ ಕರ್ತವ್ಯ.
ನಮ್ಮ ಕರ್ನಾಟಕದ ಜನರಿಗೆ ಇದರ ಉಪಯೋಗವೇನು?
“ಇದು ಹರಿಯಾಣದ ತೀರ್ಪು, ನಮಗೇನು ಲಾಭ?” ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಇಲ್ಲಿದೆ ಉತ್ತರ:

ಇದು ಬಹಳ ಮುಖ್ಯವಾದ ಪಾಯಿಂಟ್. ಈ ತೀರ್ಪು ಸದ್ಯಕ್ಕೆ ಹರಿಯಾಣ ಸರ್ಕಾರಕ್ಕೆ ನೀಡಿದ್ದರೂ, ಇದು ಇಡೀ ದೇಶದ ಕಾನೂನು ವ್ಯವಸ್ಥೆಯಲ್ಲಿ ಒಂದು ಪ್ರಬಲವಾದ ‘ನಿದರ್ಶನ’ ಆಗಿ ನಿಲ್ಲುತ್ತದೆ.

ನೌಕರ ಬಂಧುಗಳೇ, ಈಗ ನೀವೇನು ಮಾಡಬೇಕು?
ಈ ತೀರ್ಪಿನ ಲಾಭ ಪಡೆಯಲು ನೀವು ಇಂದಿನಿಂದಲೇ ಸಿದ್ಧರಾಗಬೇಕು. ಈ ಕೆಳಗಿನ ದಾಖಲೆಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳಿ:

ನೇಮಕಾತಿ ಪತ್ರ : ನೀವು ಕೆಲಸಕ್ಕೆ ಸೇರಿದ ಮೊದಲ ದಿನದ ಪತ್ರ.
ಹಾಜರಾತಿ ದಾಖಲೆ : ನೀವು 10 ವರ್ಷ ಸೇವೆ ಸಲ್ಲಿಸಿದ್ದೀರಿ ಎಂಬುದಕ್ಕೆ ಇದುವೇ ಸಾಕ್ಷಿ.
ವೇತನದ ಪುರಾವೆ : ಪ್ರತಿ ತಿಂಗಳು ನೀವು ಸಂಬಳ ಪಡೆದ ಬ್ಯಾಂಕ್ ಸ್ಟೇಟ್ಮೆಂಟ್ಸ್.
ಈ ದಾಖಲೆಗಳೇ ಮುಂದೊಂದು ದಿನ ನಿಮ್ಮ ಕೆಲಸ ಖಾಯಂ ಮಾಡಲು ಬೇಕಾಗುವ ಪ್ರಮುಖ ಅಸ್ತ್ರಗಳು.

ಮುಖ ಸೂಚನೆ/ಗಮನಿಸಿ: ಈ ತೀರ್ಪನ್ನು ಸದ್ಯ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದೆ. ಆದರೂ, ಇದು ಸುಪ್ರೀಂ ಕೋರ್ಟ್ ಅಥವಾ ದೇಶದ ಇತರೆ ಹೈಕೋರ್ಟ್‌ಗಳಲ್ಲಿ ಇದೇ ರೀತಿಯ ಪ್ರಕರಣಗಳ ವಿಚಾರಣೆಗೆ ಒಂದು ಬಲವಾದ ಕಾನೂನು ಆಧಾರ ಆಗಲಿದೆ. ಕರ್ನಾಟಕದ ಗುತ್ತಿಗೆ ನೌಕರರು ಕೂಡ ತಮ್ಮ ಹಕ್ಕಿಗಾಗಿ ನ್ಯಾಯಾಲಯದ ಮೊರೆ ಹೋದಾಗ, ಈ ತೀರ್ಪನ್ನು ಉಲ್ಲೇಖಿಸಿ ನ್ಯಾಯ ಕೇಳಲು ಇದು ದೊಡ್ಡ ಅಸ್ತ್ರವಾಗಲಿದೆ.

ಅಂತಿಮ ಮಾತು: ದಶಕಗಳಿಂದ ಕಾಯುತ್ತಿರುವ ನಿಮ್ಮ ತಾಳ್ಮೆಗೆ ಈಗ ನ್ಯಾಯ ಸಿಗುವ ಕಾಲ ಕೂಡಿ ಬಂದಿದೆ. ಈ ಮಾಹಿತಿ ನಿಮ್ಮ ಸ್ನೇಹಿತರು, ಸಂಬಂಧಿಕರಲ್ಲಿ ಯಾರೇ ಗುತ್ತಿಗೆ ನೌಕರರಿದ್ದರೂ ಅವರಿಗೆ ತಲುಪಿಸಿ, ಅವರ ಬದುಕಿನಲ್ಲಿ ಭರವಸೆ ಮೂಡಿಸಿ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology