ಬೀದರ,04 ಡಿಸೆಂಬರ್.24 :-ಚಿಟಗುಪ್ಪಾ ತಾಲೂಕಿನ ಮುದನಾಳ ಗ್ರಾಮದ ವಿದ್ಯಾ ಭಾರತಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಕೆ.ಪಿ.ಟಿ.ಸಿ.ಎಲ್ ವತಿಯಿಂದ ವಿದ್ಯುತ್ ಅಪಘಾತ ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಅಭಿಯಾನದಲ್ಲಿ ವಿದ್ಯುತ್ನಿಂದಾಗುವ ಅಪಘಾತದ ಹಲವಾರು ರೀತಿಯ ಮಾಹಿತಿಯನ್ನು ಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಟಿಎಕ್ಯೂ ಕಲಬುರಗಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಕುಮಾರ ಬುಕ್ಕೆಗಾರ, ಹುಮನಾಬಾದ ಟಿಎಲ್ಎಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸೈಯ್ಯದ ಅಸ್ಗರ ಅಲಿ, ಹುಮನಾಬಾದ ಟಿಎಲ್ಈ ಶಾಖೆಯ ಕಿರಿಯ ಅಭಿಯಂತರರಾದ ಶ್ರೀನಿವಾಸರಾವ ಹಾಗೂ ವಿದ್ಯಾಭಾರತಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ ಸೇರಿದಂತೆ ಇತರರು ಉಪಸ್ಥಿತರಿದ್ದರು.
Source: www.prajaprabhat.com