ಔರಾದ :-ತಾಲೂಕಿನ ಪ್ರಗತಿಪರ ಹೊರಾಟಗಾರರು, ಯುವ ನಾಯಕರಾದ ಸುಧಾಕರ ಕೊಳ್ಳುರ್ ಅವರ ನೆತೃತ್ವದಲ್ಲಿ ಔರಾದ ಪಟ್ಟಣದ ವಿವಿಧ ಇಲಾಖೆಗಳಾದ ತಾಲೂಕಾ ವೈದ್ಯಾಧಿಕಾರಿಗಳ ಕಛೆರಿ, ತಾಲೂಕಾ ಪಂಚಾಯತ್, ತಾಲೂಕಾ ವಕಿಲರ ಸಂಘ, ಸಮಾಜ ಕಲ್ಯಾಣ ಇಲಾಖೆ ಅಗ್ನೀಶಾಮಕ ಕಛೆರಿ, ಪೋಲಿಸ್ ಠಾಣೆ, ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಪ್ರೌಢ ಶಾಲೆ ಹಾಗೂ ಅಮರೇಶ್ವರ ಗುರುಕುಲ ಗಳಿಗೆ ಭೇಟಿ ನೀಡಿ ಸಂವಿಧಾನ ಪಿಠಿಕೆಯ ಡಿಜಿಟಲ್ ಪ್ರತಿಗಳನ್ನು ಹಂಚಿ ಸಂವಿಧಾನ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ ಕೊಳ್ಳುರ್ ಅವರು ಭಾರತಿಯ ಸಂವಿಧಾನ ವಿಶ್ವದಲ್ಲಿಯೆ ಶ್ರೇಷ್ಠವಾದ ಸಂವಿಧಾನವಾಗಿದೆ. ಇದು ದೇಶದ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶ ಹಾಗೂ ಅಧಿಕಾರಗಳನ್ನು ನಿಡಿ ಸಮಾನತೆಯ ತತ್ವದ ಆಧಾರದ ಮೆಲೆ ವಿಶ್ವಕ್ಕೆ ಏಕತೆಯ ಸಂದೇಶವನ್ನು ನಿಡಿದೆ ಎಂದು ಹೇಳಿದರು. ಪ್ರಗತಿಪರ ಚಿಂತಕ ನಂದಾದೀಪ ಬೋರಳೆ ಅವರು ಮಾತನಾಡಿ. ಸಾವಿರಾರು ವಷ೯ದ ದಾಸ್ಯದಿಂದ ಮುಕ್ತಗೊಳಿಸಿ ದೇಶದ ಎಲ್ಲಾ ಜಾತಿ,ಧಮ೯ದ ಜನರಿಗೆ ಗೌರವಯುತ ಜೀವನ ನಡೆಸಲು ಮತ್ತು ಸ್ವಾಭಿಮಾನದಿಂದ ಬದುಕಲು ಅವಕಾಶ ನಿಡಿದ ಈ ಸಂವಿಧಾಕ್ಕೆ ಗೌರವಿಸುವುದು ನಮ್ಮೆಲ್ಲ ಭಾರತೀಯರ ಕತ೯ವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಕಾಯ೯ನಿವಾ೯ಹಕ ಅಧಿಕಾರಿಗಳಾದ ಶಿವಕುಮಾರ್ ಘಾಟೆ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳಾದ ಅನಿಲಕುಮಾರ್ ಮೆಲ್ದೋಡ್ಡಿ, ತಾಲೂಕಾ ವೈದ್ಯಾಧಿಕಾರಿಗಳ ಗಾಯತ್ರೀ ಮೆಡಮ್, ಪ್ರಕಾಶ ದೂಧಮಾಂಡೆ, ರತ್ನದೀಪ ಕಸ್ತೂರೆ, ಬಸವರಾಜ್ ಶೆಟಕಾರ್, ಸುನಿಲ್ ಮಿತ್ರಾ, ವೈಜಿನಾಥ ಒಡೆಯರ್ ಹಾಗೂ ಇನ್ನಿತರರು ಇದ್ದರು.
