27 ನವಂಬರ 24 ಸ್ವತಂತ್ರ ಉದ್ಯಾನ್ ಬಂಗಳೂರು:-ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಂದು ಎಲಾಖೆಯಲಿ ನೇಮಕಾತಿ ಬದಲಾಗಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಪದ್ಧತಿ ಮುಖಾಂತರ ನೇಮಕ ಮಾಡಿ ಕಾರ್ಮಿಕರ ಭವಿಷ್ಯ ಹಾಳು ಮಾಡುತ್ತಿದಾರೆ ಈವತ್ ಬಹಳಷ್ಟು well Qualified ಅಭ್ಯರ್ಥಿಗೆ ಉದ್ಯೋಗ ಸಿಗುತ್ತಿಲ್ಲ ಯಾಕ್ ಅಂದ್ರೆ ಹೊಸ ರಿಕ್ರೂಟ್ಮೆಂಟ್ ಮಾಡಿದ್ರೆ ಎಲ್ಲರಿಗೂ ಅವಕಾಶ ಸಿಗುತ್ತೆ ಗುತ್ತಿಗೆ 4ಅಧರ್ಮೇಲೆ ಅಧಿಕಾರಿ ಮತ್ತು ರಾಜಕೀಯ ವ್ಯಕ್ತಿ ಪ್ರಭಾವದಿಂದ ಯಾರಿಗ್ಬೇಕು ಅವರಿಗೆ ತಕೋಬಹುದು ಇದು ಸಮಾಜದಲ್ಲಿ ಘೋರ್ ಅನ್ಯಾಯ ಆಗುತಿದೆ ಇ ಕಾರಣಕ್ಕೆ ಜನಾ ಇದಕ್ಕ್ ವಿರೋಧ ಮಾಡುತ್ತಿದ್ದಾರೆ ಮತ್ತು ಎಲ್ಲ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾದ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಖರೀದಿಸಬೇಕು. ರಸಗೊಬ್ಬರಕ್ಕೆ ಸಹಾಯಧನ ನೀಡಬೇಕು’ ಎಂದೂ ಆಗ್ರಹಿಸಿದರು.
‘ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು. ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ವೇತನ ₹35 ಸಾವಿರ ಹಾಗೂ ತಿಂಗಳ ಪಿಂಚಣಿ ₹10 ಸಾವಿರ ನಿಗದಿ ಪಡಿಸಬೇಕು. ರೈತರ ಎಲ್ಲ ರೀತಿಯ ಸಾಲಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
‘ರೈಲ್ವೆ, ಆರೋಗ್ಯ, ಶಿಕ್ಷಣ, ವಿದ್ಯುತ್ ವಲಯಗಳ ಖಾಸಗೀಕರಣ ನಿಲ್ಲಿಸಬೇಕು. ಅಭಿವೃದ್ಧಿ ಹೆಸರಲ್ಲಿ ಕೃಷಿ ಯೋಗ್ಯ ಜಮೀನುಗಳ ಕಬಳಿಕೆ ನಿಲ್ಲಬೇಕು.
ಬಹಳಷ್ಟು ಅಭ್ಯರ್ಥಿ ವಿವಿಧ ಪದ್ವಿಗಳು ಮುಗಿಸಿ ಉದ್ಯೋಗ ಇಲ್ಲದೆ ಕಾರಣ ಮನೆಯಲಿ ಗ್ರಾಮೀಣ ಹಾಗೂ ನಗರ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುತ್ತಿದ್ದಾರೆ ಅದಕೆ ವರ್ಷಕ್ಕೆ 200 ದಿನ ಕೆಲಸ ನೀಡಬೇಕು. ಕೂಲಿಯನ್ನು ದಿನಕ್ಕೆ ₹600 ನಿಗದಿ ಪಡಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು