ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಕಡೆ ಬಸ್ ಸಮಸ್ಯೆ ಹೆಚ್ಚಾಗಿತ್ತು. ಅದರೋ KKRTC ಉಚಿತ ಬಸ್ (Free Bus) ಸೇವೆಯ ನಂತರ ಬಹಳಷ್ಟು ಸಮಸ್ಯೆ ಆಗಿತ್ತು. ಇದೀಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಗುಡ್ ನ್ಯೂಸ್ ನೀಡಿದ್ದು, 200 ಎಲೆಕ್ಟ್ರಿಕಲ್ ಬಸ್ಗಳನ್ನ (Electrical Bus) ಆರಂಭಿಸಲು ನಿರ್ಧಾರ ಮಾಡಿದೆ.
ನವೆಂಬರ್ನಿಂದ ರಸ್ತೆಗೆ ಬರಲಿದೆ ಬಸ್
ಕೇಂದ್ರ ಸರ್ಕಾರದ ಪಿಎಎಂ – ಇ ಸೇವಾ ಬಸ್ ಯೋಜನೆ ಅಡಿಯಲ್ಲಿ ಈ ಬಸ್ಗಳನ್ನ ಆರಂಭ ಮಾಡಲಾಗುತ್ತಿದೆ. ಈ ಯೋಜನಡಯ ಅಡಿಯಲ್ಲಿ ರಾಜ್ಯದ ಹಲವು ನಗರಗಳಿಗೆ ಇ ಬಸ್ಗಳನ್ನು ಮಂಜೂರು ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮಾಡಿರುವ 200 ಇ ಬಸ್ಗಳು ನವೆಂಬರ್ನಿಂದ ರಸ್ತೆಗೆ ಇಳಿಯಲಿದೆ ಎನ್ನಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಈ ಬಸ್ಗಳು ಕೇವಲ ನಗರ ಪ್ರದೇಶಕ್ಕೆ ಮಾತ್ರವಾಗಿದ್ದು, ಇನ್ನು ಮುಂದೆ ಜನರಿಗೆ ಬಸ್ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎನ್ನಲಾಗುತ್ತಿದೆ.
ಇನ್ನು ಕಲಬುರಗಿ ಜಿಲ್ಲೆಗೆ 100 ಬಸ್ಗಳು ಮಂಜೂರಾಗಿದ್ದರೆ, ಬಳ್ಳಾರಿಗೆ 50 ಬಸ್ಗಳು ಹಾಗೂ ವಿಜಯಪುರಕ್ಕೆ 50 ಬಸ್ಗಳು ಆರಂಭವಾಗಲಿದೆ ಎಂದು ಇಲಾಖೆ ತಿಳಿಸಿದೆ. ಇನ್ನು ಯಾವ ನಗರಕ್ಕೆ ಬಸ್ ನೀಡಬೇಕು ಎಂಬುದನ್ನ ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ರಾಜ್ಯದ ಇನ್ಯಾವ ಪ್ರದೇಶಗಳಿಗೆ ಬಸ್ ಮಂಜೂರಾಗಲಿದೆ ನೋಡಬೇಕಿದೆ.
ಕೇಂದ್ರ ಸರ್ಕಾರದಿಂದ 60% ಹಣ
ಈ ಬಸ್ಗಳಿಗೆ ಬೇಕಾದ ಬಹುತೇಕ ವ್ಯವಸ್ಥೆಯನ್ನ ಕೇಂದ್ರ ಸರ್ಕಾರ ಮಾಡಲಿದ್ದು, ಅದರ ಟೆಂಡರ್ ಪ್ರಕ್ರಿಯೆಯನ್ನ ಸಹ ಅದೇ ನೋಡಿಕೊಳ್ಳಲಿದೆ. ಇನ್ನು ಡ್ರೈವರ್ ಕೊಡುವ ಒಪ್ಪಂದ ಸಹ ಈ ಟೆಂಡರ್ ಪ್ರಕ್ರಿಯೆಯಲ್ಲಿ ಆಗಲಿದ್ದು, ಎಲಿಕ್ಟ್ರಿಕ್ ಬಸ್ಗಳಿಗೆ ಬೇಕಾದ ಡಿಪೋಗೆ ಜಾಗವನ್ನ ನೀಡಿದರೆ ಅದನ್ನ ಸಹ ಕೇಂದ್ರವೇ ನಿರ್ಮಾಣ ಮಾಡಲಿದೆ ಎನ್ನಲಾಗಿದೆ. ಈ ಎಲ್ಲಾ ವ್ಯವಸ್ಥೆಗಳಿಗೆ ಬೇಕಾದ ವೆಚ್ಚದ ಶೇಕಡಾ 60ರಷ್ಟು ಹಣ ಕೇಂದ್ರ ಸರ್ಕಾರ ಕೊಡಲಿದ್ದು, ಉಳಿದ ಶೇಕಡಾ 40 ರಷ್ಟು ಹಣ ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ. ಇದಕ್ಕೆ ಬೇಕಾದ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆಯನ್ನ ಸಹ ಸರ್ಕಾರ ಮಾಡಲಿದ್ದು, ಕೇಂದ್ರ ಸರ್ಕಾರ ಡ್ರೈವರ್ ಕೊಟ್ಟರೆ, ರಾಜ್ಯದಿಂದ ಕಂಡಕ್ಟರ್ ನೇಮಕ ಮಾಡಲಾಗುತ್ತದೆ.
ವಾಯುವ್ಯ ಕರ್ನಾಟಕಕ್ಕೆ 700 ಬಸ್ ಭರವಸೆ ನೀಡಿದ್ದ ಸಚಿವರು
ಇನ್ನು ಕೆಲ ತಿಂಗಳ ಹಿಂದೆ ಶಿರಸಿಯಲ್ಲಿ ರೂ.6.78 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೊಸ ಸೆಂಟ್ರಲ್ ಬಸ್ಟ್ಯಾಂಡ್ ಉದ್ಘಾಟಿಸಿ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹೊಸದಾಗಿ ಸರ್ಕಾರದಿಂದ ಏಳನೂರು ಬಸ್ಗಳನ್ನು ಒದಗಿಸಿದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 6 ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದಿದ್ದರು. ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗಿನ ಬಜೆಟ್ನಲ್ಲಿ ಈಗಾಗಲೇ 4 ಸಾರಿಗೆ ನಿಗಮಗಳಿಗೆ ಹೊಸದಾಗಿ ಎರಡು ಸಾವಿರ ಬಸ್ ಖರೀದಿಸಲು ಅನುಮತಿ ನೀಡಿದ್ದಾರೆ ಎಂದಿದ್ದ ಸಚಿವರು, 300 ಬಸ್ಗಳನ್ನು ಮೊದಲ ಹಂತದಲ್ಲಿ ಖರೀದಿ ಮಾಡುತ್ತೇವೆ. ಈ ಹಂತದ ಖರೀದಿಗಾಗಿ ರೂ.134 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು. ನಾಲ್ಕು ತಿಂಗಳಲ್ಲಿ ಹೆಚ್ಚುವರಿ ಬಸ್ಗಳನ ಖರೀದಿ ಪ್ರಕ್ರಿಯೆ ಮುಗಿಯಲಿದೆ ಎಂದು ಭರವಸೆ ನೀಡಿದ್ದರು.