ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿಗೆ ಅದ್ಧೂರಿ ಸನ್ಮಾನ
ಬೀದರ.11.ಜುಲೈ.25:- ಬಸವಕಲ್ಯಾಣದಲ್ಲಿ ಮಂಗಳವಾರ ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ
ತಾಳಂಪಳ್ಳಿ ಅವರನ್ನು ನಾಗರಿಕ ಸಮಿತಿ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು.ಬೃಹತ್ ಹೂಮಾಲೆ ಹಾಕಿ, ಪೇಟ ತೊಡಿಸಿ, ಶಾಲು ಹೊದಿಸಿ ಅಭಿನಂದಿಸಲಾಯಿತು.ಇದಕ್ಕೂ ಮುನ್ನ ಸಹಕಾರ ವಿಭಾಗದ ರಾಜ್ಯ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ
ಆಗಮಿಸಿದ ಪ್ರಯುಕ್ತ ಬೀದರ್ನ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು ಹಾಗೂಕಾರ್ಯಕರ್ತರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಬಳಿಕ ಬಸವಕಲ್ಯಾಣದ ಮಹಾದ್ವಾರದಿಂದ ಬಿಕೆಡಿಬಿ ಸಭಾಂಗಣದ ವರೆಗೆ ಬೃಹತ್ ರ್ಯಾಲಿಯಲ್ಲಿ ಕರೆ ತರಲಾಯಿತು.

ಬಿಕೆಡಿಬಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹೃದಯಸ್ಪರ್ಶಿಯಾಗಿ ಸತ್ಕರಿಸಲಾಯಿತು.ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರವಿಂದಕುಮಾರ ಅರಳಿ, ಕೆ. ಪುಂಡಲೀಕರಾವ್, ಜಿಲ್ಲಾ ಪಂಚಯಿತಿ ಮಾಜಿ ಸದಸ್ಯ
ವೀರಣ್ಣ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಆರ್. ಪಾಟೀಲ, ಮುಖಂಡರಾದ ಅಬ್ದುಲ್ ಮನ್ನಾನ್ ಸೇಠ್, ಪಂಡಿತರಾವ್ ಚಿದ್ರಿ, ಗುಂಡುರೆಡ್ಡಿ ಕಮಲಾಪುರೆ, ಅರ್ಜುನ
ಕನಕ, ಕೇಶಪ್ಪ ಬಿರಾದಾರ, ವೈಜಿನಾಥ ಎಲಗುಂದಿ, ಲಕ್ಷ್ಮಣರಾವ್ ಬುಳ್ಳಾ, ಕೇಶವರಾವ್ ತಳಘಟಕರ್, ಗೌತಮ ಬಿ. ನಾರಾಯಣರಾವ್, ಮನೋಹರ ಮೈಸೆ, ಮಲ್ಲಿಕಾರ್ಜುನ ಪ್ರಭಾ, ಬಂಡೆಪ್ಪ ಮೇತ್ರೆ, ಚಂದ್ರಕಾಂತ ಮೇತ್ರೆ, ರಾಜಣ್ಣ ಚೌಧರಿ, ಬಸವಣಪ್ಪ ನಿಲೋಗಿ, ಗುರು ದುರ್ಗೆ,
ಸದಾನಂದ ಹಳ್ಳೆ, ವೀರಣ್ಣ ಪಾಟೀಲ, ಜ್ಞಾನೇಶ್ವರ ಸಿಂಧೆ, ಅಬ್ದುಲ್ ವಾಹಿದ್, ಸಾಗರ್
ಕವಿರಾಜ, ಯಾಹಿಯಾ ಪಾಶಾ ಮತ್ತಿತರರು ಉಪಸ್ಥಿತರಿದ್ದರು.