05/08/2025 8:42 AM

Translate Language

Home » ಲೈವ್ ನ್ಯೂಸ್ » ಸರ್ಕಾರದ ಅರ್ಹತೆ ನೀತಿ ವಿರೋಧಿಸಿ ಧರಣಿ ಅತಿಥಿ ಉಪನ್ಯಾಸಕರನ್ನು ಕೈಬಿಡದಂತೆ ಬಾವಿಮನಿ ಆಗ್ರಹ

ಸರ್ಕಾರದ ಅರ್ಹತೆ ನೀತಿ ವಿರೋಧಿಸಿ ಧರಣಿ ಅತಿಥಿ ಉಪನ್ಯಾಸಕರನ್ನು ಕೈಬಿಡದಂತೆ ಬಾವಿಮನಿ ಆಗ್ರಹ

Facebook
X
WhatsApp
Telegram


ಸಿಂಧನೂರು.09.ಜುಲೈ.25:- ಬರುತ್ತಾರೆ. ಕೂಡಲೇ ಸರ್ಕಾರ ತನ್ನ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಅರ್ಹತೆ ಆಧಾರದ (ಯುಜಿಸಿ, ನಾನ್ ಯುಜಿಸಿ) ನೀತಿಯಡಿಯಲ್ಲಿ ಅತಿಥಿ ಉಪನ್ಯಾಸಕರನ್ನು ಕೈಬಿಡದಂತೆ ಆಗ್ರಹಿಸಿ ಜೂ.25ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ದಿನ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಹೆಚ್.ಬಾವಿಮನಿ ತಿಳಿಸಿದರು.

ಉಪನ್ಯಾಸಕ ನಾರಾಯಣ ಬೆಳಗುರ್ಕಿ ಮಾತನಾಡಿ ಯಜಿಸಿ, ನಾನ್ ಯುಜಿಸಿ ನಿಯಮ ಜಾರಿ ಮಾಡಿ ಅತಿಥಿ ಉಪನ್ಯಾಸಕರನ್ನು ಎರಡು ಬಣಗಳಾಗಿ ಮಾಡಿ ಒಡೆದಾಳುವ ನೀತಿ ಅನುಸರಿಸುತ್ತಿದ್ದು, 25 ವರ್ಷಗಳಿಂದ ಉಪನ್ಯಾಸಕರನ್ನು ಖಾಯಂ ಮಾಡಬೇಕು ಪ್ರತಿ ವರ್ಷದಂತೆ ಯಥಾಪ್ರಕಾರ ಎಲ್ಲಾ ಉಪನ್ಯಾತರನ್ನು ಸೇವೆಗೆ ತೆಗೆದುಕೊಳ್ಳಬೇಕು. ಅತಿಥಿ ಉಪನ್ಯಾತರಿಗೆ ಸೇವಾ ಭದ್ರತೆ ನೀಡಬೇಕು. ಸರ್ಕಾರ ತನ್ನ ನಿಲುವನ್ನು ಹಿಂಪಡೆಯದಿದ್ದರೆ ತರಗತಿ ಬಹಿಷ್ಕರಿಸಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿನಡೆಸಿ ಅವರು ಮಾತನಾಡಿದರು. ಯುಜಿಸಿ, ನಾನ್ ಯುಜಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ ಕಳೆದ 25 ವರ್ಷಗಳಿಂದ ಅರೆಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವೆ ಹೊರಹಾಕುವ ಯತ್ನ ನಡೆಸಿದ್ದು, ಇದನ್ನು ಖಂಡಿಸುತ್ತೇವೆ. ಸುಮಾರು 5 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಆತಂಕಕ್ಕೊಳಗಾಗಿ ದ್ದು ವೃತ್ತಿಯನ್ನೇ ನಂಬಿರುವ ಉಪನ್ಯಾಸಕರು ಬೀದಿಗೆ

ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಮರಿಯಪ್ಪ ಉಪನ್ಯಾಸಕರಾರ ಬಸವರಾಜ ಪಿ.ನಾಯಕ್, ಶಂಕರ ಸುಂಕಾರ, ವೀರೇಕೆ ಕನ್ನಾರಿ, ಮಲ್ಲಯ್ಯ ಹಿರೇಮಠ ಸೇರಿದಂತೆ ಹಲವರು ಇದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD