06/07/2025 2:52 PM

Translate Language

Home » ಲೈವ್ ನ್ಯೂಸ್ » ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ: ಜಂಟಿ ಕೃಷಿ ನಿರ್ದೇಶಕರು

ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ: ಜಂಟಿ ಕೃಷಿ ನಿರ್ದೇಶಕರು

Facebook
X
WhatsApp
Telegram

ಕೊಪ್ಪಳ.05.ಜುಲೈ.25: ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ರಸಗೊಬ್ಬರದ ದಾಸ್ತಾನಿದ್ದು, ಯಾವುದೇ ರಸಗೊಬ್ಬರದ ಕೊರತೆ ಇಲ್ಲವೆಂದು ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ ಅವರು ತಿಳಿಸಿದ್ದಾರೆ.

ಏಪ್ರಿಲ್ ನಿಂದ ಜುಲೈ ವರೆಗೆ ರಸಗೊಬ್ಬರ ಬೇಡಿಕೆಯು 69,536 ಟನ್ ಇದ್ದು, 73,376 ಟನ್ ರಸಗೊಬ್ಬರ ದಾಸ್ತಾನೀಕರಿಸಿದ್ದು, 39,206 ಟನ್ ರಸಗೊಬ್ಬರ ವಿತರಣೆ ಮಾಡಲಾಗಿದೆ. ಬಾಕಿ ಉಳಿದಿರುವ ದಾಸ್ತಾನು 34,170 ಟನ್ ರಸಗೊಬ್ಬರಗಳಲ್ಲಿ ಯೂರಿಯಾ 9,450 ಟನ್, ಡಿಎಪಿ 2,948 ಟನ್, ಎಂ.ಒ.ಪಿ 2,262 ಟನ್, ಕಾಂಪ್ಲೆಕ್ಸ್ 18,706 ಟನ್ ಇದರ ಜೊತೆಗೆ 4,890 ಲೀಟರ್ ನ್ಯಾನೋ ಯೂರಿಯಾ 2,160 ಲೀಟರ್ ನ್ಯಾನೋ ಡಿಎಪಿ ಕೃಷಿ ಪರಿಕರ ಮಾರಾಟಗಾರರ ಮಳಿಗೆಗಳಲ್ಲಿ ಲಭ್ಯವಿದ್ದು, ರಸಗೊಬ್ಬರದ ಕೊರತೆ ಇರುವುದಿಲ್ಲ.

ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಸ್ಪ್ರೇ ಮಾಡುವುದರಿಂದ ಗಿಡಗಳಿಗೆ ನೇರವಾಗಿ ಪೋಷಕಾಂಶ ದೊರೆಯುವುದರಿಂದ ನೀರು ಹಾಗೂ ಮಣ್ಣನ್ನು ಸಂರಕ್ಷಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!