09/06/2025 11:31 AM

Translate Language

Home » ಸಂಪಾದಕಿಯ » ಅತಿಥಿ ಉಪನ್ಯಾಸಕ ಜೀವನ ಹೆಗೆ ? ಬೇರೆ ಕೆಲಸಾ ಬರೋದಿಲ್ಲ, ಬೇರೇ ಹುದ್ದೆಗೆ ವಯಸು ಪ್ರಕಾರ ಅವಕಾಶ ಇಲ್ಲ, ಅತಿಥಿ ಉಪನ್ಯಾಸಕ ವೃತ್ತಿಯನ್ನು ಭಾಗ್ಯ ಇಲ್ಲ, ಇದು ಯಾವ ನ್ಯಾಯ ??

ಅತಿಥಿ ಉಪನ್ಯಾಸಕ ಜೀವನ ಹೆಗೆ ? ಬೇರೆ ಕೆಲಸಾ ಬರೋದಿಲ್ಲ, ಬೇರೇ ಹುದ್ದೆಗೆ ವಯಸು ಪ್ರಕಾರ ಅವಕಾಶ ಇಲ್ಲ,  ಅತಿಥಿ ಉಪನ್ಯಾಸಕ ವೃತ್ತಿಯನ್ನು ಭಾಗ್ಯ ಇಲ್ಲ, ಇದು ಯಾವ ನ್ಯಾಯ ??

Facebook
X
WhatsApp
Telegram

     ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಸರಕಾರ ಗಮನಹರಿಸಲಿ

ಕರ್ನಾಟಕ ರಾಜ್ಯದಲ್ಲಿ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 10600 ಅತಿಥಿ ಉಪನ್ಯಾಸಕರು ಬೋಧನ  ನಡೆಸುತ್ತಿದ್ದಾರೆ. ಹಲವು ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರಿದ್ದಾರೆ.

ತನ್ಮೂಲಕ ರಾಜ್ಯದ ಉನ್ನತ ಶಿಕ್ಷಣದಲ್ಲಿ ಅತಿಥಿ ಉಪನ್ಯಾಸಕರು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ತನ್ನ ಅಗತ್ಯಕ್ಕೆ ಅವರನ್ನು ಬಳಸಿಕೊಳ್ಳುವ ಸರಕಾರ ಅವರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತ ಬಂದಿದೆ. ಇದರಿಂದ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ.

ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಇಂದಲ್ಲ ನಾಳೆ ತಮ್ಮ ಕೆಲಸ ಖಾಯಂಗೊಳ್ಳಬಹುದು ಎಂಬ ವಿಶ್ವಾಸದಿಂದ ಕಡಿಮೆ ಗೌರವಧನ ಪಡೆದು ದುಡಿದ ನೂರಾರು ಅತಿಥಿ ಉಪನ್ಯಾಸಕರಿದ್ದಾರೆ. ಬೇರೆ ವೃತ್ತಿ ಆಯ್ಕೆಗಳಿದ್ದರೂ ಉಪನ್ಯಾಸ ವೃತ್ತಿಯನ್ನು ಆಯ್ದುಕೊಂಡವರಿದ್ದಾರೆ. ಈಗ ಅವರು ಬೇರೆ ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ ಅಡ್ಡ ಬರುತ್ತಿದೆ. ಅದೇ ರೀತಿ ಸರಕಾರಕ್ಕೂ ಇವರನ್ನು ಖಾಯಂಗೊಳಿಸಲು ಕಾನೂನಿನ ಗೋಜಲುಗಳಿವೆ. ರಾಜ್ಯದ­ಲ್ಲಿದ್ದ ಸರಕಾರಗಳು ಈ ಗೋಜಲನ್ನು ಪರಿಹರಿಸುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.


ಬದಲಾಗಿ ಪ್ರತೀ ವರ್ಷ ಅತಿಥಿ ಉಪನ್ಯಾಸಕರನ್ನು ನೇಮಿಸುತ್ತ, ಅವರು ತಮ್ಮ ಬೇಡಿಕೆ ಈಡೇರಿಕೆಗೆ ಮುಷ್ಕರಕ್ಕೆ ಕೂತಾಗ ಅವರ ಕೆಲವು ಬೇಡಿಕೆಗಳನ್ನು ಈಡೇರಿಸುತ್ತ, ಇತ್ತ ಖಾಯಂ ಉಪನ್ಯಾಸಕರ ನೇಮಕಾತಿಯೂ ಮಾಡದೆ, ಪ್ರತೀ ವರ್ಷ ಹೆಚ್ಚುತ್ತಿರುವ ಉಪನ್ಯಾಸಕರ ಕೊರತೆಯನ್ನು ತುಂಬಲು ಮತ್ತೆ ಮತ್ತೆ ಅತಿಥಿ ಉಪನ್ಯಾಸಕರ ನೇಮಕದ ದಾರಿಯನ್ನು ಆಯ್ದುಕೊಳ್ಳುವ ಸರಕಾರ ಅವರ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿಲ್ಲ.

ಅದರಲ್ಲೂ ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಭರವಸೆ ನೀಡಿತ್ತು ಅಂದ್ರೆ ಏನೋ ಮಾಡ್ಲಿಲ್ಲ.

ಹಲವು ವರ್ಷಗಳ ಆಡಳಿತ ನಡೆಸಿದ ಅನುಭವ ಹೊಂದಿರುವ ಕಾಂಗ್ರೆಸ್‌ಗೆ ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಸಾಧ್ಯಾಸಾಧ್ಯತೆಗಳ ಅರಿವು ಇಲ್ಲದೆ ಇಂತಹ ಭರವಸೆ ನೀಡಿರಲಿಕ್ಕಿಲ್ಲ,

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಮಯಾ ಅವರು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ತಮ್ಮ ಭರವಸೆಯನ್ನು ಈಡೇರಿಸಬೇಕು. ದಿಲ್ಲಿ ಮತ್ತು ಹರಿಯಾಣ ಸರಕಾರ ಮಾಡಿದಂತೆ ಸೇವಾ ಮತ್ತು ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತರಬೇಕು ಎಂಬುದು ಮುಷ್ಕರ ನಿರತ ಅತಿಥಿ ಉಪನ್ಯಾಸಕರ ಸಂಘಟನೆಗಳ ಆಗ್ರಹವಿದೆ. ಆದರೆ ಸರ್ಕಾರ ಯಾವುದೇ ಸೌಲಭ್ಯ ಅಥವಾ 12 ತಿಗಳು ಸಂಭಳ ಕೊಡ್ತಿಲ್ಲ ಎಲ್ಲಾ ಹುಸಿ ಭರವಸೆ ನೀಡಿದರು.

ಅತಿಥಿ ಉಪನ್ಯಾಸಕರ ಮೇಲೆ ಸರ್ಕಾರ ಘೋರ ಅನ್ಯಾಯ ಮಾಡುತಿದೆ….

     ಕರ್ಣಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸತತವಾಗಿ 20 ವರ್ಷದಿಂದ ಕರ್ಯ ನಿರ್ವಹಿಸಿದರೆ. ಆದರೆ ಸರ್ಕಾರ ಈಗಾಗಲೇ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕೇಳ್ತದೆ  ಇದೂ ನ್ಯಾಯ ? ಅತಿಥಿ ಉಪನ್ಯಾಸಕರು ಸೇವೆ ಮಾಡಿ ಅವರು ಸೇವಾ ನಿವೃತಿಗೆ ಬಂದಿದಾರೆ ಆದರೆ ರಾಜ್ಯದಲ್ಲಿ  ಯಾವುದೇ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಖಾಯಂ ಮಾಡ್ಲಿಲ್ಲ. ಮತ್ತೆ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕೇಳ್ತಿದರೆ. ಅವರ ಭವಿಷ್ಯದ ಏನು ??

ರಾಜ್ಯದಲ್ಲಿ ಬಿಜೆಪಿ. ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರಕ್ಕೆ ಬರೋವರೆಗೆ ಸುಳು ಭರೋವಸೆ ಕೋಟಿದರೆ ಅಧಿಕಾರಕ್ಕೆ ಬಂದರೂ ಕೂಡಾ ಅತಿಥಿ ಉಪನ್ಯಾಸಕರಿಗೆ ಖಾಯಾಮತಿ ಅಥವಾ ಸೇವಾ ಭದ್ರತೆ ಕೊಡೋಕೆ ಕಾನೂನಿನಲ್ಲಿ ಅವಕಾಶ ಇಲ್ಲ ಅಂದು ನಿರಾಕರಿಸಿದಾರೆ.

`2-3 ದಶಕಗಳಿಂದ ಕೆಲಸ ಮಾಡುತ್ತಿರುವ ಶೇ.80ರಷ್ಟು ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಆದರೆ ಈಗ ಹೊಸ ಸೂಚನೆಯನ್ನು ಸರಕಾರ ನೀಡಿದರೆ ಹಿರಿಯ ಅತಿಥಿ ಉಪನ್ಯಾಸಕರು ಎಲ್ಲಿಗೆ ಹೋಗಬೇಕು. ಈ ಹಿಂದೆ ವಾರ್ಷಿಕ ಪರೀಕ್ಷೆಯ ಆಧಾರದಲ್ಲಿ ಅಂಕ ನೀಡಲಾಗುತ್ತಿತ್ತು. ಈಗ ಸೆಮಿಸ್ಟರ್ ವೈಸ್ ಅಂಕ ನೀಡುವ ಕ್ರಮವಿದೆ. 10-15 ವರ್ಷಗಳ ಕಾಲ ದುಡಿದ ಅತಿಥಿ ಉಪನ್ಯಾಸಕರನ್ನು ದಾರಿಗೆ ಬಿಡಬಾರದು. ಸರಕಾರ ಅವರ ಕುರಿತು ಕಾಳಜಿಯನ್ನು ವಹಿಸುವ ಅಗತ್ಯವಿದೆ” ಎನ್ನುತ್ತಾರೆ

ಅತಿಥಿ ಉಪನ್ಯಾಸಕರ ಜೀವನ ಹಾಳ್ಳು ಮಾಡಿದವರು ಯಾರು

ಅತಿಥಿ ಉಪನ್ಯಾಸಕ ಜೀವನ ನಡೆಸುವ ಹೆಗೆ ಅವರ ಮಕ್ಕಳು ಭವಿಷ್ಯ ಹೆಗ ಆಗಬಹುದು ಸರ್ಕಾರ ಸ್ವಲ್ಪ ಚಿಂತನ ಮಂಥನ ಮಾಡ್ಬೇಕು ಇವರ ಸ್ಥಿತಿ ಬಹಳ ಗಂಭೀರ ಬೇರೆ ಕೆಲಸಾ ಬರೋದಿಲ್ಲ, ಬೇರೇ ಹುದ್ದೆಗೆ ವಯಸು ಪ್ರಕಾರ ಅವಕಾಶ ಇಲ್ಲ,  ಅತಿಥಿ ಉಪನ್ಯಾಸಕ ವೃತ್ತಿಯನ್ನು ಭಾಗ್ಯ ಇಲ್ಲ, ಇದು ಯಾವ ನ್ಯಾಯ ??

ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಅತಿಥಿ ಉಪನ್ಯಾಸಕರಿಗೆ ಆಶ್ವಾಸನೆ ಕೋಟಿ ಅವರಿಗೆ/ ಭರವಸೆ ಕೋಟಿ ಚುನಾವಣೆಯಲ್ಲಿ ಬಹುಮತ ಪಾಡ್ಕೋತಾರೆ ಮತ್ತು ರಾಜ್ಯದಲ್ಲಿ ಸರ್ಕಾರ ರಚನೆ ಮಾಡ್ತಾರೆ. ಅತಿಥಿ ಉಪನ್ಯಾಸಕರು ಖಾಯಮತಿ ಕೇಳಿದ್ರೆ ಉಮಾದೇವಿ ಪ್ರಕರಣ ಅಡಿ ಬರುತಿದೆ ಆ ಕಾರಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಅಂತಾರೆ ಆದರೆ ಬೇರೇ ಇಲಾಖೆಗಳಲೀ ಉಮಾದೇವಿ ಪ್ರಕರಣ ಅನ್ವಯ ಆಗಲ್ವಾ ? ಬೇರೇ ಬೇರೇ ಎಲಾಖೆಗಳಲಿ ಹೆಗೆ ಖಾಯ್ಮತಿ ಮಾಡುತಿದಾರೆ ?

ಆರೋಗ್ಯ. ಗ್ರಾಮ ಪಂಚಾಯತ. ನಗರಾಭಿವೃದ್ದಿ. ಇಂಧನ ಮತ್ತು ಇತರ ಇಲಾಖೆಗಳಲಿ ಖಾತ್ಮತಿ ಮಾಡಿದಾರೆ.

ಸರ್ಕಾರಿ ಪ್ರಥಮ ದರ್ಜೆ  ಕಾಲೇಜುಗಳ  ಅತಿಥಿ ಉಪನ್ಯಾಸಕರ ಸತತವಾಗಿ 15 ರಿಂದ 20 ವರ್ಷ ಗಳಿಂದ ಸೇವೆ ಮಾಡುತ್ತಿದ್ದಾರೆ ಮತ್ತು ಕೆಲವರು ಸೇವಾ ನಿವೃತಿ ಹೊದಿರುತಿದರೆ. ಆದರೆ ಸರ್ಕಾರ ಕನು ಮುಚ್ಚಿ ನಿದ್ರೆ ಮಾಡುತ್ತಿದೆ.

ಪ್ರಥಮ ದರ್ಜೆ ಕಾಲೇಜುಗಳಲ್ಲಿಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳನ್ನು ಸರಕಾರವು ವಿಶೇಷ ನಿಯಮಾವಳಿ ರೂಪಿಸಿ ಮಾನವೀಯ ಆಧಾರದ ಅಡಿ ನೇಮಕಾತಿ ಮಾಡಿಕೊಳ್ಳಬೇಕು ಅತಿಥಿ ಉಪನ್ಯಾಸಕರನ್ನು ಜೆ.ಒ.ಸಿ ಮಾದರಿಯಲ್ಲಿಕಾಯಂಗೊಳಿಸಲು ಸಚಿವ ಸಂಪುಟ ಸಮಿತಿ ನಿರ್ಧರಿಸಿ.

ಅತಿಥಿ ಉಪನ್ಯಾಸಕರನ್ನು ಗಂಟೆಗಳ ಕಾರ್ಯಭಾರ ನೀಡಿ ಮಾಸಿಕ 50 ಸಾವಿರ ರೂ.ಗಳ 12 ತಿಂಗಳ ವೇತನ ನೀಡುವುದರ ಮೂಲಕ ಸೇವೆಯಲ್ಲಿವಿಲೀನ ಮಾಡಿಕೊಳ್ಳಬೇಕು. ಇದರಿಂದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುವುದಿಲ್ಲ.

ಒಂದು ವೇಳೆ ಸೇವೆಯಲ್ಲಿವಿಲೀನಗೊಳಿಸದೇ ನೇಮಕಾತಿ ಕಾರ್ಯ ಮುಂದುವರೆದರೆ ಅದರಲ್ಲಿಅತಿಥಿ ಉಪನ್ಯಾಸಕರಿಗೆ ಶೇ.50ರಷ್ಟು ಮೀಸಲಾತಿ ಹಾಗೂ ಕೃಪಾಂಕ ನೀಡಬೇಕು ಎಂದು ಒತ್ತಾಯಿಸಿದರು.

ಯುಜಿಸಿ ನಿಯಮಾವಳಿಗಳು, 2018 ರಲ್ಲಿ ಸೂಚಿಸಿದಂತೆ ಕನಿಷ್ಠ ವಿದ್ಯಾರ್ಹತೆಗಳನ್ನು ಹೊಂದಿರದ ಯಾವುದೇ ಅಭ್ಯರ್ಥಿಯನ್ನು ಇಲಾಖೆಗಳು ಆಯ್ಕೆ ಮಾಡಬಾರದು

ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಾಗ 2018ರಲ್ಲಿ ಯುಜಿಸಿ ನೀಡಿರುವ ಉಪನ್ಯಾಸಕರ ನೇಮಕಾತಿ ಮಾನದಂಡಗಳನ್ನೇ ಅನುಸರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಆ ಹಿನ್ನೆಲೆಯಲ್ಲಿ, ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಮಾರು 5 ಸಾವಿರ ಶಿಕ್ಷಕರು ಕೆಲಸದಿಂದ ಹೊರಗುಳಿಯಬೇಕಾದ ಪ್ರಸಂಗ ಎದುರಾಗಿದೆ. ಅವರೆಲ್ಲರೂ ಸ್ನಾತಕೋತ್ತರ ಪದವಿ ಮುಗಿಸಿದ ಪಿಎಚ್ ಡಿ, ಕೆ – ಸೆಟ್ ಅಥವಾ ನೆಟ್ ಪಾಸ್ ಆಗದೆಯೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗಾಗಿ, ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸದ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಸ್ಕರಿಗೆ ಸಮಸ್ಯೆಆಗ್ದಿದೆ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 10,600 ಮಂದಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಶೇ.55ರಷ್ಟು ಮಂದಿ ಯುಜಿಸಿಯ ನಿಯಮಗಳ ಪ್ರಕಾರ ನಿಗದಿಪಡಿಸಿದ ಅರ್ಹತೆಗಳನ್ನು ಹೊಂದಿಲ್ಲದವರು ಇದ್ದಾರೆ ಎನ್ನುವುದು ಇಲಾಖೆಯ ಅಧಿಕಾರಿಗಳು ಹೇಳುವ ಮಾತು.

Author

One Comment

  1. ಎಲ್ಲಾ ವಿವರಣೆ ವಾಸ್ತವ
    ಸರ್ಕಾರ 20 ವರ್ಷಗಳಿಂದ ಹೇಗೆ ಖಾಯಮಾತಿ ಅವಕಾಶ ಇಲ್ಲ ಅಂತ ಹೇಳುತ್ತಾ ಯಾವುದೇ ಮಾನದಂಡ ಗಳಿಲ್ಲ್ರದೆ ಹೇಗೆ ಇಲ್ಲಿಯವರೆಗೆ ದುಡಿಸಿ ಕೊಂಡಿದೆ ‌.ಕೇವಲ ಅತಿಥಿ ಉಪನ್ಯಾಸಕರು ನೇಮಕ
    ಅಷ್ಟೇ ಅಲ್ಲವೇ ಮಾನದಂಡಗಳು ಯಾಕೆ ಬೇಕು
    ಅನುಭವದ ಮುಂದೆ ಈಗ ತಂದಿರುವ ಪ್ರಮಾಣ
    ಪತ್ರಗಳೇ ಮುಖ್ಯನಾ ಇದು ನ್ಯಾಯವೇ ?

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!