27/06/2025 10:54 PM

Translate Language

Home » ಲೈವ್ ನ್ಯೂಸ್ » ಹಿರಿಯ ಪತ್ರಕರ್ತ ಸದಾನಂದ ಜೋಶಿ ಎಚ್ಚರಿಕೆ *ಕೊಳಾರ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

ಹಿರಿಯ ಪತ್ರಕರ್ತ ಸದಾನಂದ ಜೋಶಿ ಎಚ್ಚರಿಕೆ *ಕೊಳಾರ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

Facebook
X
WhatsApp
Telegram

ಬೀದರ್ ಹೊರವಲಯದ ಕೊಳಾರ್‌ನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಸದಾನಂದ ಜೋಶಿ ಉದ್ಘಾಟಿಸಿದರು. ಹಾವಶೆಟ್ಟಿ ಪಾಟೀಲ್, ರವಿ ಮೂಲಗೆ, ಅಶೋಕ ಮಾನೂರೆ, ಅನೀಲ ಖೇಣ , ಸತೀಶ ನೌಬಾದೆ, ಸೋಮಶೇಖರ ಪಾಟೀಲ್, ಸಂಜುಕುಮಾರ ಶಂಭು ಇತರರಿದ್ದರು.

*ಹಿರಿಯ ಪತ್ರಕರ್ತ ಸದಾನಂದ ಜೋಶಿ ಎಚ್ಚರಿಕೆ *ಕೊಳಾರ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

ಪರಿಸರ ರಕ್ಷಿಸದಿದ್ದರೆ ಆಪತ್ತು ತಪ್ಪಿದ್ದಲ್ಲ

ಬೀದರ್:ಎಲ್ಲ ಕೆಲಸಕ್ಕಿಂತಲೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಅಗತ್ಯವಿದೆ. ಪರಿಸರ ರಕ್ಷಿಸಿ, ಬೆಳೆಸದಿದ್ದರೆ ಬರುವ ವರ್ಷಗಳಲ್ಲಿ ಮಾನವ ಸಮಾಜಕ್ಕೆ ಗಂಡಾAತರ ತಪ್ಪಿದ್ದಲ್ಲ ಎಂದು ಹಿರಿಯ ಪತ್ರಕರ್ತ ಸದಾನಂದ ಜೋಶಿ ಎಚ್ಚರಿಸಿದರು.

ನಗರದ ಹೊರವಲಯದ ಕೊಳಾರ್ ಹತ್ತಿರದ ಕೌಜಲಗಿ ಪ್ರೆöÊಮ್ ಬಡಾವಣೆಯಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಒಕ್ಕೂಟ (ಕ್ರೆಡಾಯ್) ಮತ್ತು ಇಂಡಿಯನ್ ಕಾಂಕ್ರಿಟ್ ಅಸೋಸಿಯೇಷನ್ (ಐಸಿಐ) ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರದ ನಾಶದಿಂದಲೇ ಪ್ರಕೃತಿಯಲ್ಲಿ ಇಂದು ಅಸಮತೋಲನ ಸೃಷ್ಟಿಯಾಗಿದೆ.ಇದು ಹೀಗೆಯೇ ಮುಂದುವರಿದರೆ ಮನುಕುಲಕ್ಕೆ ಮುಳುವಾಗಿ ಪರಿಣಮಿಸಿದೆ. ಪರಿಸರದ ಸಮತೋಲನದಿಂದ ಮಾತ್ರ ಸಮಾಜ ಸುರಕ್ಷಿತವಾಗಿರಲು ಸಾಧ್ಯ ಎಂದು ಹೇಳಿದರು.

ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ನಮ್ಮಲ್ಲಿ ನಗರೀಕರಣ ಸಹ ಜಾಸ್ತಿಯಾಗುತ್ತಿದೆ. ರಿಯಲ್ ಎಸ್ಟೇಟ್ ಇಂದು ದೇಶದ ಅತೀ ದೊಡ್ಡ ಉದ್ಯಮವಾಗಿ ಬೆಳೆದಿದೆ. ಪ್ರತಿ ವರ್ಷ ಲಕ್ಷಾಂತರ ಎಕರೆ ಕೃಷಿ ಭೂಮಿ ನಿವೇಶನಗಳಾಗಿ ಪರಿವರ್ತನೆಯಾಗುತ್ತಿವೆ. ಇದಕ್ಕಾಗಿ ಅಸಂಖ್ಯೆಯಲ್ಲಿ ದೊಡ್ಡ ಗಿಡ, ಮರಗಳನ್ನು ನೆಲಸಮ ಮಾಡಲಾಗುತ್ತಿದೆ. ರಸ್ತೆ, ಹೆದ್ದಾರಿ, ಬಹುಮಹಡಿ ಕಟ್ಟಡ (ಫ್ಲಾö್ಯಟ್) ಮತ್ತಿತರೆ ಕಟ್ಟಡ ನಿರ್ಮಾಣದ ವೇಳೆಯೂ ಅಪಾರ ಮರಗಳ ಮಾರಣಹೋಮ ನಡೆದಿದೆ. ಇದಕ್ಕೆ ಪರ್ಯಾಯವಾಗಿ ನಾವು ಮರ ಬೆಳೆಸದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಪರಿಸರ ಹಾಳಾಗಿ ಮನುಷ್ಯರಿಗೆ ಅಕಾರಣ ನಾನಾ ರೋಗಗಳು ಸುತ್ತಿಕೊಳ್ಳಲಿವೆ. ದೆಹಲಿ ತರಹ ಎಲ್ಲೆಡೆ ಶುದ್ಧ ಗಾಳಿಗಾಗಿ ಪರಿತಪಿಸಬೇಕಾಗುತ್ತದೆ. ಪರಿಸರ ನಾಶ ಎಂದರೆ ಸಮಾಜ ನಾಶ ಎಂದರ್ಥ. ಇದನ್ನು ಅರಿತು ಪರಿಸರ ರಕ್ಷಣೆಗೆ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ಪ್ರತಿ ಮನೆಯವರು ೫ ಸಸಿ ನೆಟ್ಟು ಪೋಶಿಸಿದರೆ ಎಲ್ಲ ಸಮಸ್ಯೆ ಪರಿಹಾರವಾಗಲಿವೆ ಎಂದರು.

ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿರ‍್ಸ್ ಕೌನ್ಸಿಲ್ ಸದಸ್ಯ ಹಾಗೂ ಐಸಿಐ ಕಲ್ಯಾಣ ಕರ್ನಾಟಕ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ಮಾತನಾಡಿ, ವಿಶ್ವದಲ್ಲಿ ಅತೀ ಹೆಚ್ಚು ಮಾನವ ಸಂಪನ್ಮೂಲ ಭಾರತದಲ್ಲಿದೆ. ಇದರ ಸದ್ಬಳಕೆಯಾದರೆ ಸಮಾಜಕ್ಕೆ ಎದುರಾಗಿರುವ ಅನೇಕ ಸಮಸ್ಯೆ ನಿವಾರಣೆ ಸಾಧ್ಯ. ದೇಶದ ಅಭಿವೃದ್ಧಿ, ಪರಿಸರ ಸಂರಕ್ಷಣೆಯAಥ ಸಮಾಜಪರ ಕೆಲಸಗಳಲ್ಲಿ ಎಲ್ಲರೂ ಶೃದ್ಧೆಯಿಂದ ಕೈಜೋಡಿಸಿ ತೊಡಗಿದಾಗ ಅಗಾಧ ಬದಲಾವಣೆ ಕಾಣಬಹುದು. ಸ್ವಯಂ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾಧ್ಯ ಎಂದು ಪ್ರತಿಪಾದಿಸಿದರು.

ಕ್ರೆಡಾಯ್ ಬೀದರ್ ಅಧ್ಯಕ್ಷ ರವಿ ಮೂಲಗೆ, ರೋಟರಿ ಕ್ಲಬ್ ಅಧ್ಯಕ್ಷ ಸೋಮಶೇಖರ ಪಾಟೀಲ್, ಕಲಂ ೩೭೧(ಜೆ) ಸಮಗ್ರ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಾನೂರೆ ಮಾತನಾಡಿದರು. ಪ್ರಮುಖರಾದ ಸತೀಶ ನೌಬಾದೆ, ಅನೀಲ ಖೇಣ , ಸಂಜುಕುಮಾರ ಶಂಭು, ಸತೀಶ ವಡ್ಡಿ, ಗಣೇಶ ಶೀಲವಂತ, ವೀರೇಂದ್ರ ವರ್ದಾ, ಸಿದ್ದು ಚಿಟಮೆ ಇತರರಿದ್ದರು. ಬಡಾವಣೆಯಲ್ಲಿ ವಿವಿಧ ತಳಿಗಳ ೩೦೦ಕ್ಕೂ ಹೆಚ್ಚು ಸಸಿ ನೆಡಲಾಯಿತು.

ಕೋಟ್
ಕ್ಲೀನ್ ಬೀದರ್, ಗ್ರೀನ್ ಬೀದರ್ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಸರ್ಕಾರದ ಜೊತೆಗೆ ಎಲ್ಲ ಸಂಘ-ಸAಸ್ಥೆಗಳು, ಸಾರ್ವಜನಿಕರು ಇಂಥ ಚಟುವಟಿಕೆಗಳಲ್ಲಿ ಸಹಭಾಗಿತ್ವವಾದರೆ ಸಾಕಷ್ಟು ಬದಲಾವಣೆ ಸಾಧ್ಯ. ಬೀದರ್ ವಾತಾವರಣ ಮಡಿಕೇರಿ ತರಹ ಇದೆ. ಇದನ್ನು ಪ್ರಮುಖ ಹಿಲ್ ಸ್ಟೇಶನ್, ಪ್ರವಾಸಿ ತಾಣವಾಗಿ ಮಾಡಿ ಅಭಿವೃದ್ಧಿಗೆ ಹೊಸತನ ನೀಡಬಹುದು. 
-ರವಿ ಮೂಲಗೆ
ಕ್ರೆಡಾಯ್ ಅಧ್ಯಕ್ಷ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!