26/06/2025 11:22 AM

Translate Language

Home » ಲೈವ್ ನ್ಯೂಸ್ » ಅರಿವು ಕೇಂದ್ರದ‌ ಸಲಹಾ ಸಮಿತಿ ‌ಸದಸ್ಯರಿಗೆ ತರಬೇತಿ.

ಅರಿವು ಕೇಂದ್ರದ‌ ಸಲಹಾ ಸಮಿತಿ ‌ಸದಸ್ಯರಿಗೆ ತರಬೇತಿ.

Facebook
X
WhatsApp
Telegram

ಯಳಂದೂರು: ಪಟ್ಟಣದ ತಾಲ್ಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ತಾಲ್ಲೂಕು ಪಂಚಾಯತಿ ವತಿಯಿಂದ ಗ್ರಾಮಪಂಚಾಯತಿಯ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯರಿಗೆ ಒಂದು ದಿನದ ತರಬೇತಿಯನ್ನು ನಡೆಸಲಾಯಿತು.

ತಜ್ಞ ಸಂಪನ್ಮೂಲ ವ್ಯಕ್ತಿ ಬಸವಣ್ಣ ಎಸ್ ತರಬೇತಿ ನೀಡಿದರು.
2023 ರಲ್ಲಿ ಗ್ರಂಥಾಲಯಗಳನ್ನು ಅರಿವು ಕೇಂದ್ರವೆಂದು ಸ್ಥಾಪನೆ ಮಾಡಲಾಗಿದೆ. ಅದಕ್ಕಿಂತ ಹಿಂದೆ  ಗ್ರಂಥಾಲಯವೆಂದು ಕರೆಯಲಾಗುತ್ತಿತ್ತು.


ಅರಿವು ಕೇಂದ್ರ ಅಭಿವೃದ್ಧಿಗೆ 13 ಸದಸ್ಯರನ್ನು ಒಳಗೊಂಡ ಸಲಹಾ ಸಮಿತಿಯನ್ನು ಆಯಾ ಗ್ರಾಮಪಂಚಾಯತಿಗಳು ರಚಿಸಿದ್ದಾರೆ ಇದರಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷರು, ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಗ್ರಂಥಾಲಯ ಮೇಲ್ವಿಚಾರಕರು, ಸ್ಥಳೀಯ ಯುವತಿ ಮತ್ತು ಯುವಕ ಮಂಡಳಿಯ ಪ್ರತಿನಿಧಿಗಳು, ಹಿರಿಯ ನಾಗರೀಕರು,ಸ್ಥಳೀಯ ಬರಹಗಾರರು, ಸಾಹಿತಿಗಳು, ಕವಿಗಳು,ಪತ್ರಕರ್ತರು, ಪ್ರೌಢಶಾಲಾ ಮತ್ತು ಕಾಲೇಜಿನ ಇಬ್ಬರು ಹೆಣ್ಣು ಮತ್ತು ಗಂಡುಮಕ್ಕಳು, ಕೌಶಲ್ಯಾಭಿವೃದ್ದಿ ಹೊಂದಿರುವ ಪ್ರತಿನಿಧಿ, ರೈತ ಪ್ರತಿನಿಧಿ, ಒಕ್ಕೂಟದ ಪ್ರತಿನಿಧಿ ,ಪಿಡಿಒ ಇಷ್ಟು ಮಂದಿ ಸಲಹಾ ಸಮಿತಿಯಲ್ಲಿರುತ್ತಾರೆ.


ಈ ಸದಸ್ಯರುಗಳು ಅರಿವು ಕೇಂದ್ರಕ್ಕೆ ಎಲ್ಲಾ ವರ್ಗದವರು ಅಂಗಕವಿಲಕರು, ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಅಧಿಕಾರಿಗಳು, ಸಾಹಿತಿಗಳು, ಬರುವಂತೆ ನೋಡಿಕೊಳ್ಳಬೇಕು.
ಗ್ರಂಥಾಲಯಕ್ಕೆ ಬೇಕಾದ ಉತ್ತಮ ಕಟ್ಟಡ ವ್ಯವಸ್ಥೆ, ಪೀಠೋಪಕರಣ, ಪುಸ್ತಕ, ಪತ್ರಿಕೆ, ಕಂಪ್ಯೂಟರ್ ವ್ಯವಸ್ಥೆಯನ್ನು ಈ ಸಲಹಾ ಸಮಿತಿ ಕಲ್ಪಿಸಕೊಡಬೇಕಾಗುತ್ತದೆ.ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ.
ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ  ನವೀನ್, ದೊಡ್ಡತಾಯಮ್ಮ, ಶಿಕ್ಷಕರಾದ ನಂಜುಂಡಸ್ವಾಮಿ, ಸಿದ್ದರಾಜು, ಪಿಡಿಒ ಮಹದೇಸ್ವಾಮಿ, ಗ್ರಂಥಪಾಲಕರಾದ ಸಿದ್ದರಾಜು, ಮಹೇಶ್ ಸಲಹಾ ಸಮಿತಿಯ ಸದಸ್ಯರುಗಳು ಹಾಜರಿದ್ದರು.

ವರದಿ.ಪ್ರಸನ್ನಕುಮಾರ್

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!