22/06/2025 3:22 AM

Translate Language

Home » ಲೈವ್ ನ್ಯೂಸ್ » ಖೇಲೋ-ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದ್ದು .

ಖೇಲೋ-ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದ್ದು .

Facebook
X
WhatsApp
Telegram

ಬೆಂಗಳೂರು.21.ಜೂನ್.25:- ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಸಣ್ಣ ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿದ್ದು ಈ ಸಂಬಂಧ ಪ್ರತೀ ಕೇಂದ್ರದಲ್ಲಿ ಉತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಒಂದು ವರ್ಷದ ಅವಧಿಗೆ ತರಬೇತಿ ನೀಡಲಾಗುತ್ತದೆ.

ಖೇಲೋ-ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದ್ದು ರಾಯಚೂರು ಜಿಲ್ಲೆಯ ಆಸಕ್ತ 12 ರಿಂದ 18 ವರ್ಷದ ಬಾಲಕ ಬಾಲಕೀಯರು ತಮ್ಮ ಜನ್ಮ ದಿನಾಂಕ ದೃಢೀಕರಣ ಪತ್ರ (ಶಾಲೆ ಅಥವಾ ಕಾಲೇಜು ಮುಖ್ಯಸ್ಥರಿಂದ ದೃಢೀಕೃತ) ಹಾಗೂ ಕ್ರೀಡಾ ಸಾಧನೆಯ ಪ್ರಶಸ್ತಿ ಪತ್ರದೊಂದಿಗೆ ದಿನಾಂಕ : 26-06-2025 ರಂದು ಬೆಳಿಗ್ಗೆ 10:00 ಗಂಟೆಗೆ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ರಾಯಚೂರು ನೋಂದಣೆ ಮಾಡಿಕೊಳ್ಳಬಹುದಾಗಿದೆ.

ಪ್ರಕ್ರಿಯೆಗೆ ಕ್ರೀಡಾ ಸಮವಸ್ತ್ರದೊಂದಿಗೆ ಭಾಗವಹಿಸಬೇಕಾಗಿದ್ದು ಅಥ್ಲೆಟಿಕ್ ಕ್ರೀಡೆಯ ಟ್ರ್ಯಾಕ್ ಮತ್ತು ಪೀಲ್ಡ್ ಇವೆಂಟ್ಸ್ಗಳಲ್ಲಿ ಆಯ್ಕೆ ಮಾಡಲಾಗುತ್ತದೆ.

ಇತ್ತೀಚಿನ 02 ಭಾವಚಿತ್ರದೊಂದಿಗೆ ಸ್ವ-ವಿವರದ ಅರ್ಜಿಯನ್ನು ಆಯ್ಕೆ ಸಂದರ್ಭದಲ್ಲಿ ಸಲ್ಲಿಸಬೇಕು.

ಆಯ್ಕೆ ಸಂದರ್ಭದಲ್ಲಿ ಯಾವುದೇ ಗಾಯಗಳು ಅನಾರೋಗ್ಯ ಯಾವುದೇ ಇತರೆ ಸಾವು ನೋವುಗಳು ಶಾಶ್ವತ ಅಂಗವೈಕಲ್ಯ ಮತ್ತು ಜೀವಹಾನಿ ಸಂಭವಿಸಿದರೆ ಸಂಸ್ಥೆ ಅಥವಾ ಇಲಾಖೆ ಜವಾಬ್ದಾರಿಯುತವಾಗಿರುವುದಿಲ್ಲ. ಹಾಗೂ ಆಯ್ಕೆಗೆ ಹಾಜರಾಗುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ದಿನಭತ್ಯೆ/ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ರಾಯಚೂರು ಕಚೇರಿ ಅಥವಾ ಶ್ರೀ ಚಂದ್ರಶೇಖರ್ ಖೇಲೋ ಇಂಡಿಯಾ ತರಬೇತುದಾರರು ಮೋ ಸಂ : 9886551214 ಅನ್ನು ಸಂಪರ್ಕಿಸಬಹುದಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!