ಭಿಕ್ಷಾಟನೆ: 19 ಜನರನ್ನು ರಕ್ಷಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
|

ಭಿಕ್ಷಾಟನೆ: 19 ಜನರನ್ನು ರಕ್ಷಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.13.ಜುಲೈ.25:- ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ನಡೆಯುವ ಸ್ಥಳಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ 19 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ. 19 ಜನರಲ್ಲಿ 14 ಮಕ್ಕಳು ಅವರಲ್ಲಿ ಎರಡು ಮಕ್ಕಳಿಗೆ ಜಿಲ್ಲಾ ಆರೋಗ್ಯ ಕೇಂದ್ರ ಬೀದರ (ಬ್ರೀಮ್ಸ್) ಕೇಂದ್ರದಲ್ಲಿ ಆರೋಗ್ಯ ತಪಾಸಣೆಗಾಗಿ ದಾಖಲು ಮಾಡಲಾಗಿದೆ. 12 ಮಕ್ಕಳನ್ನು ಹಾಗೂ 03 ಜನ ಮಹಿಳೆಯರಿಗೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿನದಲ್ಲಿ ಬರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿದೆ….

ವೈದ್ಯಕೀಯ ಆಕಾಂಕ್ಷಿಗಳೇ ಹತಾಶೆಗೊಳ್ಳಬೇಡಿ ವಿಸ್ಡಮ್ ನಿಮ್ಮ ಕನಸನ್ನು ನನಸಾಗಿಸುತ್ತದೆ
|

ವೈದ್ಯಕೀಯ ಆಕಾಂಕ್ಷಿಗಳೇ ಹತಾಶೆಗೊಳ್ಳಬೇಡಿ ವಿಸ್ಡಮ್ ನಿಮ್ಮ ಕನಸನ್ನು ನನಸಾಗಿಸುತ್ತದೆ

ಬೀದರ.13.ಜುಲೈ.25:- ವೈದ್ಯಕೀಯ ಆಕಾಂಕ್ಷಿಗಳೇ ಹತಾಶೆಗೊಳ್ಳಬೇಡಿ ವಿಸ್ಡಮ್ ನಿಮ್ಮ ಕನಸನ್ನು ನನಸಾಗಿಸುತ್ತದೆವಿಸ್ಡಮ್ ಕಾಲೇಜು ಮತ್ತು ನೀಟ್ ಅಕಾಡಮಿ ಬೀದರನಲ್ಲಿ ೨೦೨೬ರ ನೀಟ್ ರಿಪೀಟರ್ ಬ್ಯಾಚನ್ನು ಅದ್ಧೂರಿಯಾಗಿ ಉದ್ಘಾಟಿಸಿದರುಪತ್ರಿಕಾ ಪ್ರಕಟನೆಗಾಗಿ ಬೀದರ ಜುಲೈ ೯: ವಿಸ್ಡಮ್ ಕಾಲೇಜು ಮತು ನೀಟ್ ಅಕಾಡೆಮಿ, ಬೀದರನ ಸಿ.ಇ.ಒ ಪ್ರೊಫೆಸರ್ ಶ್ರೀ ಮದಾರ ಅವರ ಪ್ರಕಾರ ೨೦೨೬ರ ನೀಟ್ ರಿಪೀಟರ್ ಬ್ಯಾಚನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು. ಐ.ಎಂ.ಎ ಮಾಜಿ ಅಧ್ಯಕ್ಷ ಮತ್ತು ಎಂ.ಆರ್.ಎಫ್.ನ ಹಾಲಿ ಅಧ್ಯಕ್ಷ ಡಾ. ಮಕ್ಸೂದ ಚಂದಾ ಅವರು ಈ ಅದ್ಧೂರಿ ಉದ್ಘಾಟನಾ…

ಪಂಚಾಯತ ಪ್ರಗತಿ ಸೂಚ್ಯಾಂಕ 2.0 ಕಾರ್ಯಗಾರ
|

ಪಂಚಾಯತ ಪ್ರಗತಿ ಸೂಚ್ಯಾಂಕ 2.0 ಕಾರ್ಯಗಾರ

ಬೀದರ.13.ಜುಲೈ.25:- ಪಂಚಾಯತ ಅಭಿವೃದ್ಧಿ ಸೂಚ್ಯಾಂಕ (PDI)  ಅನ್ನು ಪಂಚಾಯತ್ ಪ್ರಗತಿ ಸೂಚ್ಯಂಕ Panchayat Advancement Index (PAI)  ಎಂದು ಮರುನಾಮಕರಣಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ ತಿಳಿಸಿದರು. ಅವರು ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಾರತ ಸರಕಾರ ಪಂಚಾಯತರಾಜ್ ನಿರ್ದೇಶನದಂತೆ PAI (ಪಂಚಾಯತ ಪ್ರಗತಿ ಸೂಚ್ಯಾಂಕ 2.0) ಕಾರ್ಯಾಲಯ ಜಿಲ್ಲಾ ಹಂತದಲ್ಲಿ ತಾಲ್ಲೂಕಾ ಮಟ್ಟದ ಅಧಿಕಾರಿಗಳಿಗೆ ತರಬೇತಿದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪಂಚಾಯತ್‍ಗಳ ಸಮಗ್ರ ಅಭಿವೃದ್ಧಿ, ಕಾರ್ಯಕ್ಷಮತೆ ಮತ್ತು ಪ್ರಗತಿಯನ್ನು…

ಆರೋಗ್ಯಕರ ಸಮಾಜ ನಿರ್ಮಿಸಲು ಯುವಕರು ಮುಂದಾಗಿರಿ- ಪ್ರೊ.ಬಿ.ಎಸ್.ಬಿರಾದಾರ
|

ಆರೋಗ್ಯಕರ ಸಮಾಜ ನಿರ್ಮಿಸಲು ಯುವಕರು ಮುಂದಾಗಿರಿ- ಪ್ರೊ.ಬಿ.ಎಸ್.ಬಿರಾದಾರ

ಬೀದರ.13.ಜುಲೈ.25:- ಆಧುನಿಕ ಯುಗವು ತಾಂತ್ರಿಕ, ವೈಜ್ಞಾನಿಕ ಕೌಶಲ್ಯದ ನಾಗಾಲೋಟದ ವೇಗದಲ್ಲಿ ಸಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಹತ್ವದ ಪಾತ್ರವಹಿಸುತ್ತಿದೆ. ಇದರೊಂದಿಗೆ ಆರೋಗ್ಯಕರ, ಸ್ವಸ್ಥ, ಸಾಮರಸ್ಯದ ಸುಂದರ ಸಮಾಜ ಕಟ್ಟುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು. ಅವರು ಶನಿವಾರ ಬೀದರ ವಿಶ್ವವಿದ್ಯಾಲಯದ ವತಿಯಿಂದ ಮಳಚಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಹಳ್ಳಿಗಳಲ್ಲಿ ಆರೋಗ್ಯಕರ ಹವಾಗುಣವಿರುತ್ತದೆ. ಕೆಲವೊಮ್ಮೆ ಜನರು ದುಶ್ಚಟಕ್ಕೆ ಬಲಿಯಾಗುತ್ತಾರೆ….

ಬೀದರ ತಾಲೂಕಿನ ರೇಕುಳಗಿ ಪಿಕೆಪಿಎಸ್ ನಿರ್ದೇಶಕರ
|

ಬೀದರ ತಾಲೂಕಿನ ರೇಕುಳಗಿ ಪಿಕೆಪಿಎಸ್ ನಿರ್ದೇಶಕರ

ಬೀದರ.13.ಜುಲೈ.25:- ಬೀದರ ತಾಲೂಕಿನ ರೇಕುಳಗಿ ಪಿಕೆಪಿಎಸ್ ನಿರ್ದೇಶಕರ ಚುನಾವಣೆ ಶುಕ್ರವಾರ ದಿನಾಂಕ ೧೧-೭-೨೦೨೫ ರಂದು ನಡೆಯಿತು.  ಇದರಲ್ಲಿ ಖಿಜರ್ ಸಾಹೇಬ್ ಪೆನಾಲ್‌ಗೆ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ. ೧೦ ನಿರ್ದೇಶಕರು ಆವಿರೋಧ ಆಯ್ಕೆಗೊಂಡಿರುತ್ತಾರೆ.  ಮಲ್ಲಿಕಾರ್ಜುನ ಹಚ್ಚಿ ರೇಕುಳಗಿ, ದೇವೇಂದ್ರ ಬಂಬೋಳಗಿ ಮತ್ತು  ಈಶ್ವರ ರೇಕುಳಗಿ, ಶಿವಕುಮಾರ ಬೊಂಬಳಗಿ ಅವರ ಮಧ್ಯೆ ಪೈಪೋಟಿ ನಡೆದಿತ್ತು.  ಇವರಲ್ಲಿ ಶಿವಕುಮಾರ ಬೊಂಬಳಗಿ ೨೬೬ ಮತ ಪಡೆದು ಗೆಲುವು ಸಾಧಿಸಿದ್ದಾರೆ.  ಮಲ್ಲಿಕಾರ್ಜು ಹಚ್ಚಿ ಅವರು ೯೫ ಮತ ಪಡೆದು ಸೋಲನ್ನು ಅನುಭವಿಸಿದ್ದಾರೆ. ಅದೇ ರೀತಿ…

ಇಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರ ಬೀದರ ಜಿಲ್ಲಾ ಪ್ರವಾಸ
|

ಇಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷರ ಬೀದರ ಜಿಲ್ಲಾ ಪ್ರವಾಸ

ಬೀದರ.13.ಜುಲೈ.25:- ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅವರು ಜುಲೈ.12 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ. ಅಂದು ಬೆಳಿಗ್ಗೆ 10.30 ಗಂಟೆಗೆ ಔರಾದ ತಾಲ್ಲೂಕಿನ ನಾಗಮಾರಪಳ್ಳಿ ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೆಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಳವಡಿಸಲಾದ ಸ್ಮಾರ್ಟ್ ಬೋರ್ಡ ಹಾಗೂ ಬೀದರ ಜಿಲ್ಲೆಯ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ನೀಡಲಾದ ಅನುದಾನಕ್ಕೆ ಸಂಬoಧಿಸಿದoತೆ ಕಾಮಗಾರಿಗಳ ಪರಿಶೀಲನೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 1.30ಕ್ಕೆ ಭಾಲ್ಕಿ ತಾಲ್ಲೂಕಿನ ಮದಕಟ್ಟಿ…

ಬೆಳೆ ವಿಮೆಗೆ ಕೃಷಿ ಇಲಾಖೆಯಿಂದ ಅರಿವು ಮೂಡಿಸಿ-ಸಿದ್ರಾಮಯ್ಯಾ ಸ್ವಾಮಿ
|

ಬೆಳೆ ವಿಮೆಗೆ ಕೃಷಿ ಇಲಾಖೆಯಿಂದ ಅರಿವು ಮೂಡಿಸಿ-ಸಿದ್ರಾಮಯ್ಯಾ ಸ್ವಾಮಿ

ಬೀದರ.13.ಜುಲೈ.25:- ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕೆಂದು ಬೀದರ ಜಿಲ್ಲಾ ಕೃಷಿಕ ಸಮಾಜದ ಸಿದ್ರಾಮಯ್ಯಾ ಸ್ವಾಮಿ ತಿಳಿಸಿದರು.ಅವರು ಇತ್ತೀಚಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲೆಯ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೃಷಿ ಇಲಾಖೆಯ ಎಲ್ಲಾ ಯೋಜನೆಗಳು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನವಾಗಬೇಕು. ರೈತರು ಕೇವಲ ಸೋಯಾಅವರೆ ಬೆಳೆ ಬೆಳೆಯದೆ ಮಿಶ್ರಬೆಳೆ ಪದ್ದತಿ ಅಸನುಸರಿಸಬೇಕೆಂದರು.ಸಿರಿಧಾನ್ಯ ಬೆಳೆಯುವ…

ಕಾಣೆಯಾಗಿರುವ ವ್ಯಕ್ತಿ ಪತ್ತೆಗಾಗಿ ಮನವಿ
|

ಕಾಣೆಯಾಗಿರುವ ವ್ಯಕ್ತಿ ಪತ್ತೆಗಾಗಿ ಮನವಿ

ಬೀದರ.13.ಜುಲೈ.25:- ಬೀದರನ ಚಿದ್ರಿ ರೋಡ ಭದ್ರೋದ್ದಿನ್ ಕಾಲೋನಿಯ 66 ವರ್ಷ ವಯಸ್ಸಿನ ಜ್ಞಾನಿ ಲಕ್ಷ್ಮಣ ಮಹಿಮಾಕರ ಎಂಬ ವ್ಯಕ್ತಿ ದಿನಾಂಕ: 13-06-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ಕಾಣೆಯಾದ ವ್ಯಕ್ತಿ 5 ಅಡಿ 5 ಇಂಚ್ ಎತ್ತರ ಇದ್ದು, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಇದ್ದು, ಮೈಮೇಲೆ ಬಿಳಿ ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಇವರು ಕನ್ನಡ, ಹಿಂದಿ ಹಾಗೂ ಮರಾಠಿ ಭಷೆಯಲ್ಲಿ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ…

ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ
|

ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ

ಬೀದರ.13.ಜುಲೈ.25:- ಬೀದರನ ಕೈಲಾಸ ನಗರದ 75 ವರ್ಷ ವಯಸ್ಸಿನ ಶಂಕ್ರೆಪ್ಪ ಸಂಗಪ್ಪ ಪವಾಡಶೆಟ್ಟಿ ಎಂಬ ವ್ಯಕ್ತಿ ದಿನಾಂಕ: 27-06-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ಕಾಣೆಯಾದ ವ್ಯಕ್ತಿ 5 ಅಡಿ 5 ಇಂಚ್ ಎತ್ತರ ಇದ್ದು, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಇದ್ದು, ಮನೆಯಿಂದ ಹೊರಗಡೆ ಹೋಗುವಾಗ ಮೈಮೇಲೆ ಬಿಳಿ ಖಮೀಸ್, ಧೋತುರ ಧರಿಸಿರುವ ಇತನು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಗಾಂಧಿ ಗಂಜ್ ಪೊಲೀಸ್ ಬೀದರ ದೂರವಾಣಿ…

ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಕರ್ಕಿಹಳ್ಳಿಹಲ್ಲಿರುವ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಕ್ಷೇತ್ರದಲ್ಲಿ ಗುರುಪೂರ್ಣಿಮೆ
|

ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಕರ್ಕಿಹಳ್ಳಿಹಲ್ಲಿರುವ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಕ್ಷೇತ್ರದಲ್ಲಿ ಗುರುಪೂರ್ಣಿಮೆ

ಕೊಪ್ಪಳ, 10- ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಕರ್ಕಿಹಳ್ಳಿಹಲ್ಲಿರುವ ಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ 21ನೇ ವರ್ಷದ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಥೋತ್ಸವಕ್ಕೂ ಮೊದಲು ನಡೆದ ಹೋಮದ ಪೂರ್ಣಾಹುತಿಯ ಬಳಿಕ ಆಶೀರ್ವಚನ ನಿಡಿದ ಕ್ಷೇತ್ರದ ಗುರುಗಳಾದ ಸುರೇಶ ಪಾಟೀಲ್ ‘ಕರ್ಕಿಹಳ್ಳಿ ಸಿದ್ಧಿಕ್ಷೇತ್ರವಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವೆ ಶಕ್ತಿಯಿದೆ. ಭಕ್ತರು ಪಾದಯತ್ರೆ ಮೂಲಕ ಬಂದಿದ್ದಾರೆ. ಅಖಂಡ ವೀಣಾ ಪಾರಾಯಣದಲ್ಲಿ ಪಾಲ್ಗೊಂಡಿದ್ದ ಭಕ್ತರು ಅದೃಷ್ಟವಂತರು’ ಎಂದರು. ‘ಭಗವಂತನ ಸೇವೆ ಮಾಡುವುದು…