ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಸಭೆ:
ಸಂಘಟನೆ ಬಲಪಡಿಸುವಿಕೆ, ಪತ್ರಿಕಾ ದಿನಾಚರಣೆ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಬೀದರ್,ಜೂ.೧೧:- ಬುಧವಾರ ಬೀದರ್ ಜಿಲ್ಲಾ ಘಟಕದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಪತ್ರಿಕಾ ಭವನದಲ್ಲಿ ಇಂದು ನಡೆದು ಸದಸ್ಯತ್ವ ನವೀಕರಣ ಮತ್ತು ಸಂಘಟನೆ ಬಗ್ಗೆ ಚರ್ಚಿಸಲಾಯಿತು. ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಇದುವರೆಗೆ ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಸಭೆಯಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ ಪಾಟೀಲ ಅವರು ಸುದೀರ್ಘವಾಗಿ ವಿವರಿಸಿದರು. ಕೆಕೆಆರ್ಡಿಬಿಯಿಂದ ಪತ್ರಿಕೆಗಳಿಗೆ ಜಾಹೀರಾತು ಪಡೆಯಲು ಮಾಡಿರುವ ಪ್ರಯತ್ನ ಸ್ಥಳೀಯ…