ಅಂಚೆ ಜೀವ ವಿಮೆ ಮಾರಾಟ ಮಾಡಲುಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ ಮೇ.29ಕ್ಕೆ
|

ಅಂಚೆ ಜೀವ ವಿಮೆ ಮಾರಾಟ ಮಾಡಲು
ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ ಮೇ.29ಕ್ಕೆ

ಬೀದರ.21.ಮೇ.25:- ಅಂಚೆ ಅಧೀಕ್ಷಕರು, ಬೀದರ ವಿಭಾಗ ಇವರು ಬೀದರ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಮೇ.29 ರಂದು ಬೆಳಿಗ್ಗೆ 11 ಗಂಟೆಗೆ ಬೀದರ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ ಎಂದು ಬೀದರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಹತಾ ನಿಯಮಗಳು: ಅಭ್ಯರ್ಥಿಗಳು 10 ನೇ ತರಗತಿಉತ್ತೀರ್ಣರಾಗಿದ್ದುಕಡ್ಡಾಯವಾಗಿವಯಸ್ಸು 18 ವರ್ಷಗಳಾಗಿರಬೇಕು.ನಿರುದ್ಯೋಗಿ ಹಾಗೂ ಸ್ವಯಂಉದ್ಯೋಗನಿರತಯುವಕರು, ವಿಮಾ ಕಂಪನಿಗಳ ಮಾಜಿಏಜೆಂಟರು ಹಾಗೂ…

ಮೇ.20 ರಂದು ವಿಜಯನಗರದಲ್ಲಿ ಸಮರ್ಪಣೆಯ ಸಂಕಲ್ಪಎರಡು ವರ್ಷಗಳ ಸಾಧನೆ ಅನಾವರಣ.
|

ಮೇ.20 ರಂದು ವಿಜಯನಗರದಲ್ಲಿ ಸಮರ್ಪಣೆಯ ಸಂಕಲ್ಪ
ಎರಡು ವರ್ಷಗಳ ಸಾಧನೆ ಅನಾವರಣ.

* ಜನಪರ ಸೇವೆಗೆ ಪ್ರತಿಜ್ಞೆಸರ್ಕಾರದಿಂದ ಒಂದು ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಬೀದರ.21.ಮೇ.25:- ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೇ.20ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನದಂತೆ ಸರ್ಕಾರ ರಚನೆ ನಂತರದ ಮೊದಲ ಸಚಿವ ಸಂಪುಟದಲ್ಲಿಯೇ ಐದು ಗ್ಯಾರಂಟಿ ಯೋಜನೆಗಳನು ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಹಂತ ಹಂತವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ದೇಶದ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ. ಜಾತಿ, ಧರ್ಮ, ಭಾಷೆಯ ಭೇಧವಿಲ್ಲದೆ ನಾಡಿನ ಎಲ್ಲ ಜನರ…

ಸರ್ಕಾರಿ ನೌಕರರೇ ಇಲ್ಲಿದೆ ಆರೋಗ್ಯ ಸಂಜೀವಿನಿ ಆಸ್ಪತ್ರೆ’ಗಳ ಪಟ್ಟಿ
|

ಸರ್ಕಾರಿ ನೌಕರರೇ ಇಲ್ಲಿದೆ ಆರೋಗ್ಯ ಸಂಜೀವಿನಿ ಆಸ್ಪತ್ರೆ’ಗಳ ಪಟ್ಟಿ

ಬೆಂಗಳೂರು.21.ಮೇ.25:-ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ದಿನಾಂಕ: 18-4-2023ರ ಅಧಿಕೃತ ಜ್ಞಾಪನ ಪತ್ರದಲ್ಲಿ ಸರ್ಕಾರಿ ಆಸ್ಪತ್ರೆ/ ಆರೋಗ್ಯ ಸಂಸ್ಥೆಗಳ ಜೊತೆಗೆ ಖಾಸಗಿ ಆಸ್ಪತ್ರೆ / ಆರೋಗ್ಯ ಸಂಸ್ಥೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ ನೋಂದಾವಣಿ ಮಾಡಿಕೊಳ್ಳಲು ಅವಕಾಶ ನೀಡಿ ಮಾರ್ಗಸೂಚಿ (SOP) ಯನ್ನು ಬಿಡುಗಡೆಗೊಳಿಸಿ ಜಿಲ್ಲಾವಾರು ಸಂಯೋಜಕರನ್ನು ನೇಮಕಗೊಳಿಸಲಾಗಿದೆ. ಆದ್ದರಿಂದ ತಾವು ತಮ್ಮ ಜಿಲ್ಲಾ / ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗುರುತಿಸಿರುವ ಖಾಸಗಿ ಆಸ್ಪತ್ರೆ /ಆರೋಗ್ಯ ಸಂಸ್ಥೆಗಳೂ ಸೇರಿದಂತೆ (ಆಸ್ಪತ್ರೆಗಳ ಪಟ್ಟಿ…

ಬೀದರ ತಾಲ್ಲೂಕಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಮನೋಹರ ದಂಡೆ ನೇಮಕ
|

ಬೀದರ ತಾಲ್ಲೂಕಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಮನೋಹರ ದಂಡೆ ನೇಮಕ

ಬೀದರ್.21.ಮೇ.25:- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೀದರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಮನೋಹರ ದಂಡೆ ಅವರನ್ನು ನೇಮಕ ಮಾಡಲಾಗಿದೆ. ಮಹಾಸಭಾದ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾದ ನರಸಿಂಹ ದಿಕ್ಷಿತ್, ಸುಧಾಕರರಾವ ಪಾಟೀಲ, ಕೇಶವರಾವ ತಳಘಟಕರ  ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ಹುಮನಾಬಾದ್  ಹಾಗೂ ಜಿಲ್ಲೇಯ ಎಲ್ಲಾ ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ಎಲ್ಲರ ಸಮ್ಮತಿಯ ಮೇರೆಗೆ ದಂಡೆ ಅವರನ್ನು ರವಿವಾರದಂದು ಬೀದರ ನಗರದ ರಾಘವೇಂದ್ರ ಮಠದಲ್ಲಿ ನಡೆದ…

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆಸರಿಯಾದ ರೀತಿಯಲ್ಲಿ ತಲುಪಿಸಿ-ಅಮೃತರಾವ ಚಿಮಕೋಡೆ
|

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ
ಸರಿಯಾದ ರೀತಿಯಲ್ಲಿ ತಲುಪಿಸಿ-ಅಮೃತರಾವ ಚಿಮಕೋಡೆ

ಬೀದರ.21.ಮೇ.25:-ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ತಿಳಿಸಿದರು.ಅವರು ಸೋಮವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದರು.ಜಿಲ್ಲೆಯ ಒಟ್ಟು ಕುಟುಂಬದ ಮಹಿಳಾ ಮುಖ್ಯಸ್ಥೆಯ ಹೆಸರಿನಲ್ಲಿರುವ ಪಡಿತರ ಚೀಟಿಗಳ ಸಂಖ್ಯೆ 381970 ಇವರಲ್ಲಿ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಏಪ್ರಿಲ್ ಅಂತಕ್ಕೆ 352294 ಫಲನುಭವಿಗಳು ನೊಂದಾಣಿಯಾಗಿರುತ್ತಾರೆ. ಶೇಕಡಾವಾರು ನೊಂದಣಿ 92.23 ಇರುತ್ತದೆ. ಉಳಿದ…

ಅಪರಾಧ ತಡೆಗೆ ಕಠಿಣ ಕ್ರಮ ಜರುಗಿಸಿ-ಸಚಿವ ಈಶ್ವರ ಬಿ.ಖಂಡ್ರೆ
|

ಅಪರಾಧ ತಡೆಗೆ ಕಠಿಣ ಕ್ರಮ ಜರುಗಿಸಿ-ಸಚಿವ ಈಶ್ವರ ಬಿ.ಖಂಡ್ರೆ

ಬೀದರ.21.ಮೇ.25:- ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು. ಅಪರಾಧ ತಡೆಗೆ ಪೊಲೀಸ್ ಇಲಾಖೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಅರಣ್ಯ ಪರಿಸರ ಹಾಗೂ ಜೈವಿಕ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು. ಅವರು ಇಂದು ಎಸ್ಪಿ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 1.25 ಕೋಟಿ ರೂ. ಅನುಧಾನದಲ್ಲಿ ಖರೀದಿಸಲಾದ 7 ಬುಲೆರೋ ಹಾಗೂ 2 ಸ್ಕ್ಯಾರ್ಪಿಯೋ ವಾಹನಗಳನ್ನು ಪೊಲೀಸ್…

ವಿಶ್ವ ಜೇನು ದಿನ ಕಾರ್ಯಕ್ರಮ
|

ವಿಶ್ವ ಜೇನು ದಿನ ಕಾರ್ಯಕ್ರಮ

ಬೀದರ.21.ಮೇ.25:- ಜೇನಿನಲ್ಲಿ ಅನೇಕ ಔಷಧೀಯ ಗುಣಗಳು ಹೊಂದಿದ್ದು, ರೋಗಗಳನ್ನು ಗುಣಪಡಿಸುವಂತಹ ಶಕ್ತಿಯನ್ನು ಹೊಂದಿದ್ದು, ಮಾನವರಿಗೆ ಇದು ಒಂದು ದೇವರು ನೀಡಿರುವಂತಹ ಅಮೂಲ್ಯ ವರದಾನವಾಗಿದೆ ಎಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು. ಅವರು ಮಂಗಳವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಮತ್ತು ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಇವರುಗಳ ಸಹಯೋಗದೊಂದಿಗೆ ತೋಟಗಾರಿಕೆ ಮಹಾವಿದ್ಯಾಲಯ, ಬೀದರನಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಜೇನು ದಿನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವ ಜೇನುನೊಣ ದಿನವು ಜೇನುನೊಣ ಉತ್ಸಾಹಿಗಳು,…

ಕಾಣೆ: ಪತ್ತೆಗಾಗಿ ಮನವಿ
|

ಕಾಣೆ: ಪತ್ತೆಗಾಗಿ ಮನವಿ

ಬೀದರ.21.ಮೇ.20:- ಜಹಿರಾಬಾದ ತಾಲ್ಲೂಕಿನ ಕೋಹಿರ ಗ್ರಾಮದ ನಿವಾಸಿಯಾದ ಆಫಸರ ಅಬ್ದುಲ್ ಖಯಿಮ (55) ಇವರು ದಿನಾಂಕ: 24-04-2025 ರಂದು ಬಸವಕಲ್ಯಾಣ ತಾಲ್ಲೂಕಿನ ಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ತೋಟಗಾರಿಕೆಯಲ್ಲಿರುವ ಮಾವಿನ ತೋಟ ಕಾಯುವ ಕೆಲಸ ಮಾಡುವ ಸ್ಥಳದಿಂದ ಕಾಣೆಯಾಗಿರುತ್ತಾನೆ. ಕಾಣೆಯಾದ ಮನುಷ್ 5 ಇಂಚ್ 2 ಅಡಿ ಎತ್ತರ ಇದ್ದು, ನೋಡಲು ಗೋಧಿ ಮೈಬಣ್ಣ ಕಪ್ಪು ಬಿಳಿ ಮಿಶ್ರಿತ ಕೂದಲು, ಕಪ್ಪು ಬಣ್ಣದ ಪ್ಯಾಂಟ ಚೆಕ್ಸ್ ಶರ್ಟ ಧರಿಸಿರುವ ಇವನು ಹಿಂದಿ ಹಾಗೂ ತೆಲಗು ಭಾಷೆಯಲ್ಲಿ ಮಾತನಾಡುತ್ತಾನೆ. ಈ…

ಮೇ.23 ರಂದು ಕ್ಯಾಂಪಸ ಸಂದರ್ಶನ
|

ಮೇ.23 ರಂದು ಕ್ಯಾಂಪಸ ಸಂದರ್ಶನ

ಬೀದರ21.ಮೇ.25:- ಪ್ರತಿಷ್ಠಿತ ಕಂಪನಿಯಾದ ಮಹಿಂದ್ರಾ ಮತ್ತು ಮಹಿಂದ್ರಾ ಲಿಮಿಟೆಡ್ (ಆಠೋಮೆಟಿವ್ ಡಿವಿಜನ್) ಜಹೀರಾಬಾದ ಕಂಪನಿಯಲ್ಲಿ ಶಿಶಿಕ್ಷು ತರಬೇತಿಗಾಗಿ ಪ್ರಸ್ತುತ ಅಂತಿಮ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಮತ್ತು ಐಟಿಐ ಪಾಸಾದ  Diesel Mech, Electrician, Fitter, Motor Mechanic   ಅಭ್ಯರ್ಥಿಗಳಿಗೆ ಮೇ.23 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಐಟಿಐ ಕಾಲೇಜು, ಮನ್ನಳ್ಳಿ ರಸ್ತೆ ಬೀದರನಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿರುತ್ತದೆ ಎಂದು ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರಣ…

ಮಹಿಳೆ ಕಾಣೆ: ಪತ್ತೆಗಾಗಿ ಮನವಿ
|

ಮಹಿಳೆ ಕಾಣೆ: ಪತ್ತೆಗಾಗಿ ಮನವಿ

ಬೀದರ.21.ಮೇ.25:- ಬೀದರನ ಹುಲಸೂರ ತಾಲ್ಲೂಕಿನ ಕಾದೇಪೂರ ಗ್ರಾಮದ ನಿವಾಸಿಯಾದ ಶೃತಿ ಗೋಪಾಳರಾವ ಬಿರಾದಾರ (19) ಇವರು ದಿನಾಂಕ: 06-05-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾಳೆ. ಕಾಣೆಯಾದ ಮಹಿಳೆಯು 5 ಅಡಿ ಎತ್ತರ ಇದ್ದು, ನೋಡಲು ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಕಪ್ಪು ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ, ಬೂದು ಬಣ್ಣದ ಓಡನಿ ಧರಿಸಿರುವ ಇವಳು ಹಿಂದಿ, ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಮಾತನಾಡುತ್ತಾಳೆ. ಈ ಕಾಣೆಯಾದ ಮಹಿಳೆಯ ಬಗ್ಗೆ ಸುಳಿವು…