ಇಂದು ರಾಷ್ಟ್ರೀಯ ಡೆಂಗಿ ದಿನಾಚರಣೆ ನಿಮಿತ್ಯ ಜನಜಾಗೃತಿ ಜಾಥಾ
|

ಇಂದು ರಾಷ್ಟ್ರೀಯ ಡೆಂಗಿ ದಿನಾಚರಣೆ ನಿಮಿತ್ಯ ಜನಜಾಗೃತಿ ಜಾಥಾ

ಬೀದರ.15.ಮೇ.25:- 2025ನೇ ಸಾಲಿನ ರಾಷ್ಟ್ರೀಯ ಡೆಂಗಿ ದಿನಾಚರಣೆ ನಿಮಿತ್ಯ ಮೇ.16 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೀದರ ಕಛೇರಿ ಆವರಣದಿಂದ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಜನಜಾಗೃತಿ ಜಾಥಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೀದರ ಇವರ ಕಛೇರಿ ಆವರಣದಿಂದ ಪ್ರಾರಂಭಗೊಂಡು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ, ಹಳೆ ಬಸ್ ನಿಲ್ದಾಣ…

ಮೇ.17 ರಂದು ಕುಂದು ಕೊರತೆ ನಿವಾರಣಾ ಸಭೆ
|

ಮೇ.17 ರಂದು ಕುಂದು ಕೊರತೆ ನಿವಾರಣಾ ಸಭೆ

ಬೀದರ.15.ಮೇ.25:- ಜೇಸ್ಕಾಂ ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಹುಮನಾಬಾದ, ಮನ್ನಾಏಖೇಳ್ಳಿ ಹಾಗೂ ಬಸವಕಲ್ಯಾಣ, ಉಪ-ವಿಭಾಗಗಳಲ್ಲಿ ಮೇ.17 ರಂದು ಗ್ರಾಹಕರ ಕುಂದು-ಕೊರತೆ ನಿವಾರಣಾ ಸಭೆಯನ್ನು ಕಾರ್ಯನಿರ್ವಾಹಕ ಇಂಜಿನಿಯರರು (ವಿ), ಗು.ವಿ.ಸ.ಕಂ.ನಿ ಹುಮನಾಬಾದ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿರುತ್ತದೆ ಎಂದು ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭೆಗಳ ವಿವರ: ಮೇ.17 ರಂದು ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಹುಮನಾಬಾದ ಉಪ-ವಿಭಾಗದ ದುಬಲಗುಂಡಿ ಶಾಖೆ ಕಛೇರಿಯಲ್ಲಿ, ಮನ್ನಾಏಖೇಳ್ಳಿ ಉಪ-ವಿಭಾಗದ ಮನ್ನಾಏಖೇಳ್ಳಿ ಶಾಖೆ…

ಮುಂಗಾರು ಕೃಷಿ: ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕೈಗೊಳ್ಳಿ -ಉಸ್ತುವಾರಿ ಕಾರ್ಯದರ್ಶಿ.ಡಿ.ರಂದೀಪ
|

ಮುಂಗಾರು ಕೃಷಿ: ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕೈಗೊಳ್ಳಿ -ಉಸ್ತುವಾರಿ ಕಾರ್ಯದರ್ಶಿ.ಡಿ.ರಂದೀಪ

ಬೀದರ.15.ಮೇ.25:- ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬೀಜ ಹಾಗೂ ಗೊಬ್ಬರಗಳ ಕೊರತೆಯಾಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಿ.ರಂದೀಪ ತಿಳಿಸಿದರು.ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭಗೊಳ್ಳುವ ಸಾಧ್ಯತೆಯಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ಬೀಜ ಹಾಗೂ ರಸಗೊಬ್ಬರಗಳನ್ನು ಒದಗಿಸಬೇಕು. ಬೀಜ ವಿತರಣೆಗೆ ಸೂಕ್ತ ಕೇಂದ್ರಗಳನ್ನು ಗುರುತಿಸಿ ಗದ್ದಲ ಆಗದಂತೆ ಕ್ರಮ ವಹಿಸಬೇಕೆಂದು ಕಾರ್ಯದರ್ಶಿಗಳು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳು ಬಜೇಟ್‍ನಲ್ಲಿ ಘೋಷಿಸಿರುವ…

ನಾಳೆ ಬೀದರನಲ್ಲಿ “ರಾಷ್ಟ್ರ ರಕ್ಷಣೆಗಾಗಿ ನಾಗರಿಕರ” ವತಿಯಿಂದ ತಿರಂಗಾ ಯಾತ್ರೆ
|

ನಾಳೆ ಬೀದರನಲ್ಲಿ “ರಾಷ್ಟ್ರ ರಕ್ಷಣೆಗಾಗಿ ನಾಗರಿಕರ” ವತಿಯಿಂದ ತಿರಂಗಾ ಯಾತ್ರೆ

ಬೀದರ.15.ಮೇ.25:- ಬೀದರ ಜಿಲ್ಲೆಯಲಿ ್ಲ “ರಾಷ್ಟç ರಕ್ಷಣೆಗಾಗಿ ನಾಗರಿಕರ” ವತಿಯಿಂದ ತಿರಂಗಾ ಯಾತ್ರೆ ಪಹಲಗಾಮನಲ್ಲಿ ನಮ್ಮ ಸಹೋದರಿಯರ ಸಿಂಧೂರ ಕಸಿದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ “ ಆಪರೇಷನ್ ಸಿಂಧೂರ ” ಮುಖಾಂತರ ಉಗ್ರರ ನೆಲೆಗಳನ್ನು ಹಾಗೂ ಅವರ ಪೋಷಕ ಪಾಕಿಸ್ತಾನದ ಸೇನಾ ನೆಲೆಗಳನ್ನು ನಾಶಪಡಿಸಿ ವಿಶ್ವಕ್ಕೆ ಭಾರತದ ಸೈನ್ಯಶಕ್ತಿಯನ್ನು ತೋರಿಸಿದ ಸೈನಿಕರಿಗೆ ಗೌರವಾರ್ಥವಾಗಿ ನಗರದಲ್ಲಿ ನಾಳೆ  ಅಂದರೆ ಮೇ ೧೭ ಶನಿವಾರದಂದು ತಿರಂಗಾ ಯಾತ್ರೆ ಜರುಗಲಿದೆ ಎಂದು ಶಾಸಕರಾದ ಡಾ. ಶೇಲೈಂದ್ರ ಬೆಲ್ದಾಳೆ ಹಾಗೂ ಕಲ್ಯಾಣ ಕರ್ನಾಟಕ…

ಎಸ್.ಸಿ. ಮತ್ತು ಎಸ್.ಟಿ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
|

ಎಸ್.ಸಿ. ಮತ್ತು ಎಸ್.ಟಿ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಾತಿಗೆ ಅರ್ಜಿ ಆಹ್ವಾನ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಗೆ ಸಹಕಾರ ಸಂಸ್ಥೆ ಸಿಬ್ಬಂದಿಗಳಿಂದ ಹಾಗೂ ಖಾಸಗಿ/ಎಸ್.ಸಿ. ಮತ್ತು ಎಸ್.ಟಿ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಶಿವಮೊಗ್ಗ ಕೆ.ಐ.ಸಿ.ಎಂ. ತರಬೇತಿ ಸಂಸ್ಥೆಯ ಮೂಲಕ 6 ತಿಂಗಳ ಅವಧಿಯ ರೆಗ್ಯುಲರ್ ಮತ್ತು ದೂರ ಶಿಕ್ಷಣ ಡಿ.ಸಿ.ಎಂ ತರಬೇತಿಯನ್ನು ನೀಡಲಾಗುತ್ತದೆ. ಸಹಕಾರ ಸಂಘ/ಬ್ಯಾoಕ್ ಗಳ ನೇಮಕಾತಿಗೆ ಆದ್ಯತೆ, ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕ ಹಾಗೂ ಕÀಂಪ್ಯೂಟರ್ ತರಬೇತಿಯನ್ನು ನೀಡಲ್ಲಿದ್ದು, ಎಸ್.ಎಸ್.ಎಲ್.ಸಿ. ಉತ್ತಿರ್ಣರಾದ ಹಾಗೂ…

ರಾಜ್ಯದ ಸರ್ಕಾರಿ ಶಾಲಾ-ಕಾಲೇಜು ಅತಿಥಿ ಶಿಕ್ಷಕ, ಉಪನ್ಯಾಸಕರಿಗೆ  ಗೌರವಧನ ಹೆಚ್ಚಳ
|

ರಾಜ್ಯದ ಸರ್ಕಾರಿ ಶಾಲಾ-ಕಾಲೇಜು ಅತಿಥಿ ಶಿಕ್ಷಕ, ಉಪನ್ಯಾಸಕರಿಗೆ  ಗೌರವಧನ ಹೆಚ್ಚಳ

ಬೆಂಗಳೂರು.16.ಮೇ.25:- ಇಂದು ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಯ ಅತಿಥಿ ಶಿಕ್ಷಕರಿಗೆ ಹಾಗೂ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಗೌರವ ಧನವನ್ನು ಹೆಚ್ಚಳ ಮಾಡಿ ಆದೇಶಿಸಿದೆ. ಈ ಮೂಲಕ ಸರ್ಕಾರಿ ಶಾಲಾ-ಕಾಲೇಜಿನ ಅತಿಥಿ ಶಿಕ್ಷಕ, ಉಪನ್ಯಾಸಕರಿಗೆ ವೇತನ ಹೆಚ್ಚಳ ಆದೇಶ ಇಂದೇ ಮಂಜೂರಾತಿ ನೀಡಿದೆ. ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಂಡು…

ರಾಜ್ಯ ಸರ್ಕಾರಿ’ ನೌಕರರಿಗೆ ವಿಶೇಷ ವೇತನ ಬಡ್ತಿ ಮಂಜೂರಾತಿ ಆದೇಶ.!
|

ರಾಜ್ಯ ಸರ್ಕಾರಿ’ ನೌಕರರಿಗೆ ವಿಶೇಷ ವೇತನ ಬಡ್ತಿ ಮಂಜೂರಾತಿ ಆದೇಶ.!

ಬೆಂಗಳೂರು.15.ಮೇ.25:- ರಾಜ್ಯ ಸರ್ಕಾರಿ’ ನೌಕರರಿಗೆ ವಿಶೇಷ ವೇತನ ಬಡ್ತಿ ಮಂಜೂರಾತಿ : ಸರ್ಕಾರದಿಂದ ಆದೇಶ.ಕುಟುಂಬ ಯೋಜನಾ ಕ್ರಮಗಳನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳನ್ವಯ ವಿಶೇಷ ವೇತನ ಬಡ್ತಿ ಮಂಜೂರಾತಿ ಕುರಿತು ಸರ್ಕಾರ ಸ್ಪಷ್ಟೀಕರಣ ನೀಡಿದೆ. 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಜಾರಿಗೆ ಬಂದಿರುವ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳ ಆರ್ಥಿಕ ಸೌಲಭ್ಯವು ದಿನಾಂಕ:1.8.2024 ರಿಂದ ಲಭ್ಯವಾಗುತ್ತದೆ. ಈ ವೇತನ ಶ್ರೇಣಿಗಳಲ್ಲಿ ವೇತನ ನಿಗಧಿಕರಣವನ್ನು ໖:1.7.2022 , 2:1.7.2022 505 31.7.2024…

ಹುಟ್ಟುಹಬ್ಬದ ಹಾರ್ದಿಕ್ ಶುಭಾಶಯಗಳು
|

ಹುಟ್ಟುಹಬ್ಬದ ಹಾರ್ದಿಕ್ ಶುಭಾಶಯಗಳು

ಬುದ್ಧ ಬಸವ ಅಂಬೇಡ್ಕರರವರ ಅಪ್ಪಟ ಅನುಯಾಯಿ ದಿನ ದಲಿತರ,ಹಿಂದುಳಿದ ವರ್ಗಗಳ ಶೋಷಿತ ಸಮುದಾಯದ ಆಶಾಕಿರಣ ನಮ್ಮ ಹೆಮ್ಮೆಯ ನಾಯಕ ದಲಿತ್ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ ಬೌದ್ಧೆರವರಿಗೆ ಹುಟ್ಟುಹಬ್ಬದ ಹಾರ್ದಿಕ್ ಶುಭಾಶಯಗಳು

ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರ ಭದ್ರತೆ ಹಿಂಪಡೆಯಲಾಗಿದೆ: ಎಸ್‌ಪಿ ಪ್ರದೀಪ ಗುಂಟಿ
|

ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರ ಭದ್ರತೆ ಹಿಂಪಡೆಯಲಾಗಿದೆ: ಎಸ್‌ಪಿ ಪ್ರದೀಪ ಗುಂಟಿ

ಮಾಜಿ ಕೇಂದ್ರ ಸಚಿವರಾದ ಭಗವಂತ ಅವರಿಗೆ ನೀಡಲಾದಭದ್ರತೆ ನಿಯಮಾನುಸಾರ ಹಿಂಪಡೆಯಲಾಗಿದೆ-ಎಸ್‌ಪಿ ಪ್ರದೀಪ ಗುಂಟಿ ಬೀದರ.15.ಮೇ.25:-ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರಿಗೆ ತಮ್ಮ ಗೃಹ ಕಚೇರಿ ಹತ್ತಿರ ಭದ್ರತೆ ಗೋಸ್ಕರ ನಿಯೋಜಿಸಲಾಗಿದ್ದ 3 ಜನ ಸೆಂಟ್ರಿ ಅವರನ್ನು ನಿಯಮ ಅನುಸಾರವಾಗಿ ಹಿಂಪಡೆಯಲಾಗಿದೆ. ಹಾಗೂ ಸರ್ಕಾರದ ನಿಯಮ ಅನುಸಾರವಾಗಿ ಅವರಿಗೆ ಗನ್ ಮ್ಯಾನ್ ಮುಂದುವರಿಸಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಪ್ರದೀಪ್ ಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈ ಭಾರತ ಯುವ ಜನರನ್ನು ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೊಂದಾಯಿಸಿಕೊಳ್ಳಲು ಆಹ್ವಾನ
|

ಮೈ ಭಾರತ ಯುವ ಜನರನ್ನು ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೊಂದಾಯಿಸಿಕೊಳ್ಳಲು ಆಹ್ವಾನ

ಬೀದರ.15.ಮೇ.25:- ಯುವ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ಕಾರ್ಯಕ್ರಮವು ದೇಶದಾದ್ಯಾಂತ ಯುವಕರನ್ನು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೊಂದಾಯಿಸಿಕೊಳ್ಳಲು ಆಹ್ವಾನಿಸಿದೆ ಎಂದು ಬೀದರ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇಶವ್ಯಾಪಿ ಆಹ್ವಾನವು ತುರ್ತು ಪರಿಸ್ಥಿಗಳು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಕಾರಣಕ್ಕಾಗಿ ಮಹತ್ವಪೂರ್ಣ ಪಾತ್ರವಹಿಸಲು ಯುವ ನಾಗರಿಕರನ್ನು ಸಶಕ್ತಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ಉತ್ತಮ ತರಬೇತಿ ಪಡೆದ, ಸ್ವಂದಿಸುವ ಆತ್ಮಸ್ಥೆರ್ಯದಿಂದರುವ ಸ್ವಯಂಸೇವಕರ ದಳವನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು…