ಶ್ರೀ ಶಂಕರ ಬಿದರಿ ರಾಜ್ಯಾಧ್ಯಕ್ಷ ಅಭಾವಿಲಿಮಹಾಸಭಾ ಬಸವ ಜಯಂತಿ ಆಚರಣೆ ಆದೇಶ ಗೊಂದಲ ಬಗ್ಗೆ:
ಬೀದರ.17.ಏಪ್ರಿಲ್.25:-ಸನ್ಮಾನ್ಯ ಶ್ರೀ ಶಂಕರ ಬಿದರಿ ಅವರು ಅಭಾವಿಲಿ ಮಹಾಸಭಾ ಆದೇಶ ಹೊರಡಿಸಿ ತಮ್ಮ ಸಂಘಟನೆಯ ತಾಲೂಕಾ ಜಿಲ್ಲಾ ಘಟಕಗಳಿಗೆ ಬಸವ ಜಯಂತಿ ನಿರ್ದೇಶನ ಕೊಟ್ಟಿದ್ದಾರೆ, ಅದರಂತೆ ಬಸವ ಜಯಂತಿ ದಿವಸ 770 ಅಮರಗಣಾಂಗಗಳ ಜೊತೆಗೆ ಜಗದ್ಗುರು ರೇಣುಕಾಚಾರ್ಯರ ಕೂಡಿಸಿ 771 ಶರಣರ ಜಯಂತಿ ನೆರವೇರಿಸಬೇಕು ಎಂದು ನಿರ್ದೇಶನ ಕೊಟ್ಟಿದ್ದಾರೆ. ಮೊದಲು ಅಭಾವಿಲಿ ಮಹಾಸಭಾ ಮತ್ತು ಪಂಚಾಚಾರ್ಯರು ಸೇರಿ ಬಸವಣ್ಣನವರು ಧರ್ಮ ಸ್ಥಾಪಕರು ಮತ್ತು ಧರ್ಮಗುರು ಎಂದು ಒಪ್ಪಿಕೊಳ್ಳಬೇಕು, ಆವಾಗ ನಿಮ್ಮ ಸಂಘಟನೆಯಿಂದ ಪ್ರಕಟಣೆ ಹೊರಡಿಸಬೇಕು, ಆವಾಗ ನೀವು…