ಗುಡಿಸಲು ಮುಕ್ತಗೊಳಿಸುವ ಕಾರ್ಯಕ್ರಮಕೆ ಚಾಲನೆ. ಸಂಸದ ಶ್ರೀ ಸಾಗರ್ ಖಂಡ್ರೆ
ಬೀದರ.09.ಏಪ್ರಿಲ್.25:- ಬೀದರ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ನಿಟ್ಟಿನಲ್ಲಿ, ಇಂದು ಹುಮನಾಬಾದ್ ತಾಲೂಕಿನ *ಡಾಕುಳಗಿ*, *ಸೀತಲಗೇರಾ* ಮತ್ತು *ಮಾದರಗಾವ್* ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಎಂಎವೈ (ಗ್ರಾಮೀಣ) ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಿ, ಫಲಾನುಭವಿಗಳ ಕನಸಿನ ಮನೆಯ ಶುಭಾರಂಭಕ್ಕೆ ಶುಭಹಾರೈಸಿದರು. ಸಂಸದ ಸಾಗರ ಖಂಡ್ರೆ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ಬಾರಿ ಬೀದರ್ ಕ್ಷೇತ್ರಕ್ಕೆ ಹೆಚ್ಚಿನ ಗೃಹ ನಿರ್ಮಾಣ ಗುರಿ ನೀಡಲಾಗಿದೆ.