ಗುಡಿಸಲು ಮುಕ್ತಗೊಳಿಸುವ ಕಾರ್ಯಕ್ರಮಕೆ ಚಾಲನೆ. ಸಂಸದ ಶ್ರೀ ಸಾಗರ್ ಖಂಡ್ರೆ
|

ಗುಡಿಸಲು ಮುಕ್ತಗೊಳಿಸುವ ಕಾರ್ಯಕ್ರಮಕೆ ಚಾಲನೆ. ಸಂಸದ ಶ್ರೀ ಸಾಗರ್ ಖಂಡ್ರೆ

ಬೀದರ.09.ಏಪ್ರಿಲ್.25:- ಬೀದರ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ನಿಟ್ಟಿನಲ್ಲಿ, ಇಂದು ಹುಮನಾಬಾದ್ ತಾಲೂಕಿನ *ಡಾಕುಳಗಿ*, *ಸೀತಲಗೇರಾ* ಮತ್ತು *ಮಾದರಗಾವ್* ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಎಂಎವೈ (ಗ್ರಾಮೀಣ) ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಿ, ಫಲಾನುಭವಿಗಳ ಕನಸಿನ ಮನೆಯ ಶುಭಾರಂಭಕ್ಕೆ ಶುಭಹಾರೈಸಿದರು. ಸಂಸದ ಸಾಗರ ಖಂಡ್ರೆ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ಬಾರಿ ಬೀದರ್ ಕ್ಷೇತ್ರಕ್ಕೆ ಹೆಚ್ಚಿನ ಗೃಹ ನಿರ್ಮಾಣ ಗುರಿ ನೀಡಲಾಗಿದೆ.

ಆನ್ಲೈನ್ ಗೇಮ್ ಮತ್ತು ವಿವಿಧ ಪ್ರಕಾರದ ಆನ್ಲೈನ್ ವಂಚನೆಗಳು ತಡೆಯಲು ಕಾನೂನು ಕ್ರಮ.!
|

ಆನ್ಲೈನ್ ಗೇಮ್ ಮತ್ತು ವಿವಿಧ ಪ್ರಕಾರದ ಆನ್ಲೈನ್ ವಂಚನೆಗಳು ತಡೆಯಲು ಕಾನೂನು ಕ್ರಮ.!

ಬೆಂಗಳೂರು.09.ಏಪ್ರಿಲ್.25:-ರಾಜ್ಯದಲ್ಲಿ ನಡೆತಿರುವ ವಿವಿಧ ಪ್ರಕಾರದ ಆನ್ಲೈನ್ ಗೇಮ್ ಮತ್ತು ವಿವಿಧ ಪ್ರಕಾರದ ವಂಚನೆಗಳು ಸುಧಿ ಕೇಳಿ ಬರುತಿದೆ. ಆನ್‌ಲೈನ್ ಗೇಮಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಶ್ರೀ ಡಾ. ಜಿ. ಪರಮೇಶ್ವರ್ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು, ಆನ್‌ಲೈನ್ ಗೇಮಿಂಗ್ ಫೆಡರೇಶನ್‌ಗಳ ಸದಸ್ಯರು ಮತ್ತು ಉದ್ಯಮ ತಜ್ಞರೊಂದಿಗೆ ಉನ್ನತ ಮಟ್ಟದ ವಿಸ್ತೃತ ಸಭೆ ನಡೆಸಲಾಯಿತು. ಭಾರತದಲ್ಲಿ ಕಾನೂನುಬದ್ಧ ಆನ್‌ಲೈನ್ ಕೌಶಲ್ಯ ಆಧಾರಿತ ಗೇಮಿಂಗ್ ಉದ್ಯಮವು $4 ಬಿಲಿಯನ್ ಮೌಲ್ಯದ ಉದಯೋನ್ಮುಖ ವಲಯವಾಗಿದ್ದು, ₹12,000 ಕೋಟಿ ತೆರಿಗೆ…

10 ಹಳ್ಳಿಗಳಲ್ಲಿ ಗ್ರೇವಾಟರ್ ಶುದ್ಧಿಕರಣ ಘಟಕ. ಸಚಿವ ಪ್ರಿಯಾಂಕ್ ಖರ್ಗೆ
|

10 ಹಳ್ಳಿಗಳಲ್ಲಿ ಗ್ರೇವಾಟರ್ ಶುದ್ಧಿಕರಣ ಘಟಕ. ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು.09.ಏಪ್ರಿಲ್.25:- ರಾಜ್ಯದಲ್ಲಿ ಜಲ ಸಂರಕ್ಷಣೆಗಾಗಿ ಸರ್ಕಾರ ಜಲ ಸಂರಕ್ಷಣೆ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ 10 ಮಾದರಿ ಹಳ್ಳಿಗಳನ್ನು ರೂಪಿಸಲು ಇಂದು ಕಲಬುರಗಿ ಜಿಲ್ಲಾ ಪಂಚಾಯತಿಯು ಕನ್ಸೋರ್ಟಿಯಂ ಫಾರ್ ಡಿಯಾಟ್ಸ್ ಡಿಸೆಮಿನೇಷನ್ (ಸಿಡಿಡಿ) ಸಂಸ್ಥೆ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಹಳ್ಳಿಗಳಲ್ಲಿ ನೀರಿನ ಸಂಪತ್ತು ಸಂರಕ್ಷಣೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆ, ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ, ಮಳೆ ನೀರು ಸಂಗ್ರಹಣೆ ಸೇರಿದಂತೆ ಗ್ರಾಮಸ್ಥರ ಭಾಗವಹಿಸುವಿಕೆಯಿಂದ ವಿವಿಧ ಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಗುರಿಯನ್ನು ಈ ಒಪ್ಪಂದ…

ರಾಜ್ಯದ ಪ.ಜಾ.ಪ.ಪಂ. ದೌರ್ಜನ್ಯ ಪ್ರಕರಣಕೆ ಸಂಬಂಧಿತ ಉನ್ನತ ಸಭೆ.!

ರಾಜ್ಯದ ಪ.ಜಾ.ಪ.ಪಂ. ದೌರ್ಜನ್ಯ ಪ್ರಕರಣಕೆ ಸಂಬಂಧಿತ ಉನ್ನತ ಸಭೆ.!

ಬೆಂಗಳೂರು.09.ಏಪ್ರಿಲ್.25:- ರಾಜ್ಯದಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕುರಿತು ಉನ್ನತ ಮಟ್ಟದ ಸಭೆ  ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್  ನಡೆಸಲಾಯಿತು. ರಾಜ್ಯದಲ್ಲಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣಗಳಿಗಾಗಿ ಕೆ ಸಂಬಂಧಿತ ರಾಜ್ಯದಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ನಾಗರಿಕ ಹಕ್ಕುಗಳ ಜಾರಿನಿರ್ದೇಶನಾಲಯದ ಠಾಣೆಗಳ ಕಾರ್ಯವೈಖರಿಯ ಕುರಿತಂತೆ ಗೃಹ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಇಂದು ಉನ್ನತಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ,…

ಅತಿಥಿ ಉಪನ್ಯಾಸಕರ ನೇಮಕ ಗೊಂದಲ.!
|

ಅತಿಥಿ ಉಪನ್ಯಾಸಕರ ನೇಮಕ ಗೊಂದಲ.!

ಬೆಂಗಳೂರು.09.ಏಪ್ರಿಲ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಗೊಂದಲ ಕಾಲೇಜುಗಳಲ್ಲಿ ಈ ಬಾರಿಯೂ ಅತಿಥಿ ಉಪನ್ಯಾಸಕರ ನೇಮಕ ವಿಷಯ ಮತ್ತೆ ನಿರ್ಲಕ್ಷ್ಯ ಮಾಡಲಾಗಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಶೈಕ್ಷಣಿಕ ಅವಧಿ ಆರಂಭವಾದ ಬಳಿಕವಷ್ಟೇ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರಕಾರ ಮುಂದಾಗಲಿದೆ. ಆದರೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ಕಾಲೇಜು ಪ್ರಾರಂಭದ ದಿನಾಂಕ ಬೇರೆ ಬೇರೆ ಇರಲಿದೆ. ಹೀಗಾಗಿ ಒಂದೊಮ್ಮೆ ಬೇಗನೆ ಪ್ರವೇಶಾತಿ ನೀಡಿದರೂ ಸರಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗಸ್ಟ್‌ನಲ್ಲಿಯೇ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಇದು ವಿದ್ಯಾರ್ಥಿಗಳ…

ಜಾತಿಗಣತಿ ವರದಿ ಜಾರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ
|

ಜಾತಿಗಣತಿ ವರದಿ ಜಾರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ

ಬೆಂಗಳೂರು.09.ಏಪ್ರಿಲ್.25:- ಇಂದು  ಸಿಎಂ ಸಿದ್ದರಾಮಯ್ಯ ಅವರು ಹಲವು ವೇದಿಕೆಗಳಲ್ಲಿ ಜಾತಿ ಗಣತಿ ವರದಿ ಜಾರಿ ಮಾಡುವ ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಈ ಜಾತಿವಾರು ಜನ ಗಣತಿಯ ವರದಿ ಜಾರಿಗೆ ಮುಹೂರ್ತ ಫಿಕ್ಸ್‌ ಆಗಿದ್ದುಕೇಳೆದ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಾತಿಗಣತಿ ವರದಿ ಜಾರಿ ಬಗ್ಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ. ಜಾತಿ ಗಣತಿ ವರದಿ ಬಗ್ಗೆ ಈ ಇತ್ತೀಚೆಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಈ…

ರಾಜ್ಯ ಸರ್ಕಾರದಿಂದ ಹೊರಗುತ್ತಿಗೆ ನೌಕರರಿಗೆ’ ಗುಡ್ ನ್ಯೂಸ್.!
|

ರಾಜ್ಯ ಸರ್ಕಾರದಿಂದ ಹೊರಗುತ್ತಿಗೆ ನೌಕರರಿಗೆ’ ಗುಡ್ ನ್ಯೂಸ್.!

ಬೆಂಗಳೂರು.09.ಏಪ್ರಿಲ್.25:- ಕರ್ನಾಟಕ ರಾಜ್ಯದಲ್ಲಿ ಹೊರಗುತ್ತಿಗೆ ನೌಕರರುಗಳು ಏಜೆನ್ಸಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಟಿಪ್ಪಣಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರುಗಳು ಏಜೆನ್ಸಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು, ಅಭಿಪ್ರಾಯ/ಸಲಹೆಗಳನ್ನು ಕೋರಿದ್ದು, ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದಲ್ಲಿ ಕಾರ್ಯನಿವರ್ಹಿಸುತ್ತಿರುವ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳು/ಶೋಷಣೆಯಿಂದ ರಕ್ಷಿಸುವ ಕುರಿತು ಅಭಿಪ್ರಾಯ/ಸಲಹೆಗಳು 1. 2025-26ನೇ ಸಾಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ Consumer…

ಈ ಗ್ರಾಮದಲ್ಲಿ ದಲಿತರಿಗೆ ದೇವಾಲಯ’ಕೆ ಪ್ರವೇಶವಿಲ್ಲ.
|

ಈ ಗ್ರಾಮದಲ್ಲಿ ದಲಿತರಿಗೆ ದೇವಾಲಯ’ಕೆ ಪ್ರವೇಶವಿಲ್ಲ.

ಮಂಡ್ಯ.09.ಏಪ್ರಿಲ್.25:- ಶ್ರೀರಂಗಪಟ್ಟಣ ತಾಲ್ಲೂಕಿನ ಹುಂಜನೆರೆ ಗ್ರಾಮದ ದೇವಾಲಯ ಕರ್ಣಾಟಕ ಸರ್ಕಾರ ಮುಜರಾಯಿ ಇಲಾಖೆಗೆ ಸೇರಿದ್ದು ಇನ್ಮುಂದೇ ಗ್ರಾಮದ ಪ್ರತಿಯೊಬ್ಬರಿಗೂ  ಎಲ್ಲ ದಿನವೂ ಮುಕ್ತ ಪ್ರವೇಶ ನೀಡಬೇಕು ಎಂದು ಗ್ರಾಮದ  ಮುಖಂಡರು ಆಗ್ರಹ. ಪಟ್ಟಣದಲ್ಲಿ ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೇಘ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ‘ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಗ್ರಾಮದ ದಲಿತರಿಗೆ ಪ್ರವೇಶವಿಲ್ಲ. ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ತಿಳಿಸಿದ ಬಳಿಕ, ವಿಶೇಷ ದಿನಗಳಲ್ಲಿ ಮಾತ್ರ ಅವಕಾಶ ನೀಡಲು…

ವಿಜಯವೀರ್ ಸಿಧು, ಸುರುಚಿ ಸಿಂಗ್ ಚಿನ್ನದ ಸಾಧನೆಯೊಂದಿಗೆ ಭಾರತ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
|

ವಿಜಯವೀರ್ ಸಿಧು, ಸುರುಚಿ ಸಿಂಗ್ ಚಿನ್ನದ ಸಾಧನೆಯೊಂದಿಗೆ ಭಾರತ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪುರುಷರ 25 ಮೀಟರ್ ರ‍್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಜಯವೀರ್ ಸಿಧು ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸುರುಚಿ ಸಿಂಗ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ತಮ್ಮ ಚೊಚ್ಚಲ ಚಿನ್ನ ಗೆದ್ದರು. ಈ ಡಬಲ್ ಚಿನ್ನವು ಭಾರತವನ್ನು ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸಿದೆ.

ಏ.16 ರಂದು ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳ:ಹೆಸರು ನೋಂದಾಯಿಸಿಕೊಳ್ಳಲು ಮನವಿ
|

ಏ.16 ರಂದು ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳ:
ಹೆಸರು ನೋಂದಾಯಿಸಿಕೊಳ್ಳಲು ಮನವಿ

ಬೀದರ.09.ಏಪ್ರಿಲ್.25:-ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ವತಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಯುವಜನತೆಗಾಗಿ ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಏಪ್ರಿಲ್.16 ರಂದು ಕಲಬುರಗಿಯಲ್ಲಿ ಆಯೋಜಿಸಿರುವುದರಿಂದ ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರು, ಉದ್ಯೋಗಾಂಕ್ಷಿಗಳು ಜಾಲತಾಣ https://skillconnect.kaushalkar.com ನಲ್ಲಿ ಹೆಸರು ನೋಂದಾಯಿಸಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕೆಂದು ಬೀದರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಯಾವುದೇ ವಿದ್ಯಾರ್ಹತೆ ಹೊಂದಿರುವ ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗಾಂಕ್ಷಿಗಳಿಗೆ ಪ್ರತಿಷ್ಠಿತ…