ಯಳಂದೂರಿನ ಕೆಲ ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.
ಯಳಂದೂರು: ಬೇಸಿಗೆ ಆರಂಭಗೊಂಡು ಜನರು ಹೆಚ್ಚಿನ ತಾಪಮಾನಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಕುಡಿಯುವ ನೀರು, ತಂಪು ಪಾನೀಯ, ಮಜ್ಜಿಗೆ, ಎಳನೀರು, ಕಲ್ಲಂಗಡಿ, ಸೌತೆಕಾಯಿಗಳತ್ತ ಮುಖ ಮಾಡಿ ದೇಹವನ್ನು ತಂಪು ಮಾಡಿಕೊಳ್ಳಲು ಮುಂದಾಗಿದ್ದಾರೆ. ಅದಲ್ಲದೇ ಪ್ರತಿನಿತ್ಯ ಸಾರ್ವಜನಿಕರು ತಮ್ಮ ಕೆಲಸಗಳ ನಿಮಿತ್ತ ಸರಕಾರಿ ಕಛೇರಿಗಳಿಗೆ ಆಗಮಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಏನಾದರೂ ದಾಹವಾದರೆ ಅವರು ಅಂಗಡಿಗಳಿಗೆ ಹೋಗಿ ಹಣ ನೀಡಿ ಕುಡಿಯುವ ನೀರಿನ ಬಾಟಲ್ ನ್ನು ತೆಗೆದುಕೊಳ್ಳಬೇಕು ಆದರಿಂದ ಸರಕಾರಿ ಕಛೇರಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಯಳಂದೂರಿನ ಕೆಲ…