ರಾಜ್ಯ ಸರ್ಕಾರದಿಂದ ರೈತರಿಗೆ ಸಿಗಲಿದೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ.!
|

ರಾಜ್ಯ ಸರ್ಕಾರದಿಂದ ರೈತರಿಗೆ ಸಿಗಲಿದೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ.!

ಬೆಂಗಳೂರು.22.ಮಾರ್ಚ್.25:-ರಾಜ್ಯದಲ್ಲಿ ರೈತರಿಗೆ ಹೊಸ ಯೋಜನೆ ರಾಜ್ಯ ಸರ್ಕಾರ ಪರಿಚಯ  ನೀಡಿದ್ದು, 5 ಲಕ್ಷವರೆಗೆ ಬಡ್ಡಿ ರಹಿತ ಸಾಲ ಸಿಗಲಿದೆ. ಹವಾಮಾನ ವೈಪರೀತ್ಯ, ಅನಿಶ್ಚಿತ ಫಸಲು ಹಾಗೂ ರೋಗರುಜಿನಗಳಿಂದ ತತ್ತರಿಸಿಹೋಗಿರುವ ಕೃಷಿ ಕ್ಷೇತ್ರದಲ್ಲಿ ಮತ್ತೆ ಉತ್ಸಾಹವನ್ನು ಕಾಣಲು ನಮ್ಮ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಅನ್ನದಾತರ ಕೈಗಳಿಗೆ ಹಣ ನೀಡಿ ಅದನ್ನು ಕೃಷಿಯಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿ, ಆ ಮೂಲಕ ನಾಡಿನ ಆರ್ಥಿಕತೆಗೆ ಬಲತುಂಬುವುದು ನಮ್ಮ ಸರ್ಕಾರದ ಆಶಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 5 ಲಕ್ಷ ರೂ.ಗಳವರೆಗೆ…

ಬೀದರ  | ಮಸಿ ಬಳಿದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕನ್ನಡಪರ್ ವಿವಿಧ ಸಂಘಟೆನೆ ಕಠಿಣ ಶಿಕ್ಷೆಗೆ ಆಗ್ರಹ.!
|

ಬೀದರ  | ಮಸಿ ಬಳಿದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕನ್ನಡಪರ್ ವಿವಿಧ ಸಂಘಟೆನೆ ಕಠಿಣ ಶಿಕ್ಷೆಗೆ ಆಗ್ರಹ.!

ಬೀದರ.22.ಮಾರ್ಚ್.25:- ಕೆಲವು ದಿನ ಹಿಂದೆ ಬೆಳಗಾವಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿರ್ವಾಹಕನಿಗೆ ಮಸಿ ಬಳಿದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ವಿವಿಧ ಕನ್ನಡಪರ್ ಸಂಘಟನೆಳ ಘಟಕದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಕನ್ನಡ ಬಾವುಟದೊಂದಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಹೆಜ್ಜೆ ಹಾಕುತ್ತ, ಜೈಘೋಷ ಹಾಕಿದರು. ಕ್ರಮಕ್ಕೆ ಒತ್ತಾಯಿಸಿದರು. ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್‌ ಅವರಿಗೆ ಸಲ್ಲಿಸಿದರು. ಕರ್ನಾಟಕ ಬಸ್‌ಗಳಿಗೆ ಕಪ್ಪು ಮಸಿ…

ದೇಶದಲ್ಲಿ 12 ವಿಶ್ವವಿದ್ಯಾಲಯ ನಕಲಿ ಯುಜಿಸಿ ಎಚ್ಚರಿಕೆ.!
|

ದೇಶದಲ್ಲಿ 12 ವಿಶ್ವವಿದ್ಯಾಲಯ ನಕಲಿ ಯುಜಿಸಿ ಎಚ್ಚರಿಕೆ.!

ಹೊಸ ದೆಹಲಿ.22.ಮಾರ್ಚ್.25:- ಇಂದು ದೇಶದಲ್ಲಿ ಅನೇಕ ಸಂಸ್ಥೆಗಳು ನಕಲಿ ಪದವಿಗಳನ್ನು ನೀಡುತ್ತಿರುವ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)  ಸಾರ್ವಜನಿಕರಿಗೆ ನೋಟಿಸ್ ನೀಡಿದೆ. ಕೆಲವು ಸಂಸ್ಥೆಗಳು ಕಾನೂನುಬಾಹಿರವಾಗಿ ಪದವಿಗಳನ್ನು ನೀಡುವ ಮೂಲಕ ಯುಜಿಸಿ ಕಾಯ್ದೆಯನ್ನು ಉಲ್ಲಂಘಿಸುತ್ತಿವೆ ಎಂದು ಆಯೋಗ ಹೇಳಿದೆ. ಯುಜಿಸಿ ಪ್ರಕಾರ, ರಾಜ್ಯ ಕಾಯ್ದೆ, ಕೇಂದ್ರ ಕಾಯ್ದೆ ಅಥವಾ ಪ್ರಾಂತೀಯ ಕಾಯ್ದೆಯಡಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಅಥವಾ ಯುಜಿಸಿ ಕಾಯ್ದೆ, 1956 ರ ಅಡಿಯಲ್ಲಿ ಪದವಿಗಳನ್ನು ನೀಡಲು ನಿರ್ದಿಷ್ಟವಾಗಿ ಅಧಿಕಾರ ಹೊಂದಿರುವ ಸಂಸ್ಥೆಗಳು ಮಾತ್ರ…

ಗುಂಬಳ್ಳಿ ಗ್ರಾಪಂ ಮುಂಭಾಗದಲ್ಲಿಯೇ  ಮದ್ಯದ ಪೌಚ್ ಗಳ ರಾಶಿ, ನಿರ್ಲಕ್ಷ್ಯ ತೋರಿಸುತ್ತಿದೆ ಗ್ರಾಮಪಂಚಾಯತಿ.
|

ಗುಂಬಳ್ಳಿ ಗ್ರಾಪಂ ಮುಂಭಾಗದಲ್ಲಿಯೇ  ಮದ್ಯದ ಪೌಚ್ ಗಳ ರಾಶಿ, ನಿರ್ಲಕ್ಷ್ಯ ತೋರಿಸುತ್ತಿದೆ ಗ್ರಾಮಪಂಚಾಯತಿ.

ಚಾಮರಾಜನಗರ.22.ಮಾರ್ಚ.25:- ಯಳಂದೂರು: ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಗ್ರಾಮಪಂಚಾಯತಿ ಮುಂಭಾಗವಿರುವ ಕುಡಿಯುವ ನೀರಿನ ತೊಂಬೆಯ ಸುತ್ತಲೂ ಮದ್ಯದ ಪೌಚ್ ಗಳು ರಾಶಿಯಾಗಿ ಬಿದ್ದಿದೆ ಹಾಗೂ ಘನ ತ್ಯಾಜ್ಯಗಳಿಂದ ಕೂಡಿದೆ ಪ್ರತಿ ದಿನ ಈ ನೀರಿನ ತೊಂಬೆಯ ಮೂಲಕವೇ ಕುಡಿಯುವ ನೀರನ್ನು ಸಾರ್ವಜನಿಕರು ತೆಗೆದುಕೊಳ್ಳುತ್ತಾರೆ. ಚರಂಡಿಯಲ್ಲಿ ಹೂಳು ತುಂಬಿ ಗಬ್ಬುನಾರುತ್ತದೆತೊಂಬೆಯ ಸುತ್ತಲೂ ಅನೈರ್ಮಲ್ಯದಿಂದ ಕೂಡಿ ಅನೇಕ ರೋಗಗಳಿಗೆ ಅವಕಾಶಮಾಡಿ ಕೊಟ್ಟಿದೆ. ಮದ್ಯ ಪ್ರಿಯರಿಗೆ ಈ ನೀರಿನ ತೊಂಬೆಯ ಕೇಂದ್ರಸ್ಥಾನವಾಗಿದೆ ಅಲ್ಲಿಯೇ ಕೂತು ಲೋಟಕ್ಕೆ ಮದ್ಯವನ್ನು ಹಾಕಿ ಆ ನೀರಿ‌ನ ತೊಂಬೆಯಲ್ಲಿಯೇ…

ರೈತನ ಮಗಳಿಗೆ 15 ಚಿನ್ನದ ಪದಕ.!
|

ರೈತನ ಮಗಳಿಗೆ 15 ಚಿನ್ನದ ಪದಕ.!

ಬೀದರ.22.ಮಾರ್ಚ.25:- ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ರೈತನ ಮಗಳಾದ ರವೀನಾ ಅವರು ‘ಬ್ಯಾಚುಲರ್‌ ಆಫ್‌ ವೆಟರ್ನರಿ ಸೈನ್ಸ್‌ ಅಂಡ್‌ ಅನಿಮಲ್‌ ಹಸ್ಬೆಂಡ್ರಿ ‘ಬಿವಿಎಸ್‌ಸಿ ಅಂಡ್‌ ಎಎಚ್‌’ಸ್ನಾತಕ ಪದವಿಯಲ್ಲಿ 15 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ. ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಬೆಂಗಳೂರಿನ ಪಶು ವಿಶ್ವವಿದ್ಯಾಲಯ  ಕಾಲೇಜಿನ ವಿದ್ಯಾರ್ಥಿನಿ ರವೀನಾ, 2022-23ನೇ ಸಾಲಿನಲ್ಲಿ ಈ ಸಾಧನೆ ತೋರಿದ್ದಾರೆ. ಪಶು ವಿಶ್ವವಿದ್ಯಾಲಯ 20 ವರ್ಷಗಳ ಇತಿಹಾಸದಲ್ಲಿ ಒಬ್ಬ…

ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಹೊಸ ಕಾರ್ಯಾಚರಣೆ, ನಿರ್ವಹಣೆ ನೀತಿಯನ್ನು*
|

ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಹೊಸ ಕಾರ್ಯಾಚರಣೆ, ನಿರ್ವಹಣೆ ನೀತಿಯನ್ನು*

*ಅಳವಡಿಸಿಕೊಳ್ಳಬೇಕು-ರಾಮಲಿಂಗಪ್ಪ ಡಿ.ಬಿರಾದಾರ್ ಬೀದರ.21. ಮಾರ್ಚ.25:- ಜಿಲ್ಲೆಯಲ್ಲಿ ಈಗಾಗಲೇ ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನಗೊಳಿಸಲಗುತ್ತಿದ್ದು 75% ಕಾಮಗಾರಿಗಳು ಪೂರ್ಣಗೊಂಡು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸದರಿ ಕಾಮಗಾರಿಗಳ ಸುಸ್ಥಿರತೆಗೆ  ಗ್ರಾಮ ಪಂಚಾಯತಿ ವತಿಯಿಂದ  ಪರಿಣಾಮಕಾರಿಯಾಗಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯಾಗಿದ್ದಲಿ ಮಾತ್ರ ಯೋಜನೆಯು ಯಶಸ್ವಿಗೊಳ್ಳುತ್ತದೆ, ಆದ್ದರಿಂದ ಎಲ್ಲಾ ಗ್ರಾಮ ಪಂಚಾಯತಿಗಳಲಿ ಈ ಹೊಸ ಕಾರ್ಯಚರಣೆ ಮತ್ತು ನಿರ್ವಹಣೆಯ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರಾಮಲಿಂಗಪ್ಪ ಡಿ. ಬಿರಾದರ…

ಚಾಮರಾಜನಗರ | ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಪದಾಧಿಕಾರಿಗಳಿಗೆ ತರಬೇತಿ.
|

ಚಾಮರಾಜನಗರ | ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಪದಾಧಿಕಾರಿಗಳಿಗೆ ತರಬೇತಿ.

ಚಾಮರಾಜನಗರ .21.ಮಾರ್ಚ.25:- ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಚಾಮರಾಜನಗರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ್ ಮಿಷನ್ , ಜಲ ಜೀವನ್ ಮಿಷನ್ ವತಿಯಿಂದ ಶುಕ್ರವಾರಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಪದಾಧಿಕಾರಿಗಳಿಗೆ ತರಬೇತಿಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗ್ರಾಮ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಮಾತನಾಡಿ. ಪ್ರತಿಯೊಂದು ಗ್ರಾಮವೂ ನೈರ್ಮಲ್ಯದಿಂದ ಕೂಡಿರ ಬೇಕು .ಗ್ರಾಮಗಳು ಅಭಿವೃದ್ಧಿವೊಂದಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂಬುವುದು ಮಹಾತ್ಮ ಗಾಂಧೀಜಿ ರವರ ಚಿಂತನೆಯಾಗಿದೆ.  ನಾವು…