ಬ್ಯಾಕ್ಲಾಕ್ ಹುದ್ದೆಗೆ ಅನ್ವಯ ಆಗುವುದಿಲ್ಲ: ಸಚಿವ ಹೆಚ್ಚ್ ಸಿ ಮಹದೇವಪ್ಪ
ಬೆಂಗಳೂರು.12.ಮಾರ್ಚ.25:- ಇಂದು ವಿಧಾನ ಸೌಧದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ತೀರ್ಮಾನ ಆಗುವವರೆಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂಬುದು ಬ್ಯಾಕ್ಲಾಗ್ ಹುದ್ದೆಗಳಿಗೆ ಅನ್ವಯ ಆಗುವುದಿಲ್ಲ. ಈ ಸಂಬಂಧ ವಿನಾಯತಿ ಕೋರಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಕಾಂಗ್ರೆಸ್ನ ಅಬ್ಬಯ್ಯ ಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ವಿವಿಧ ಇಲಾಖೆ, ನಿಗಮ, ಮಂಡಳಿ, ವಿಶ್ವವಿದ್ಯಾಲಯ, ಸಹಕಾರಿ ಸಂಸ್ಥೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2001ರ ನಂತರ ಪರಿಶಿಷ್ಟ ಜಾತಿಯ 16,413, ಪರಿಶಿಷ್ಟ ಪಂಗಡದ…