ಪರಿಶಿಷ್ಟ ಜಾತಿಗೆ ಸೇರಿಸಲು: ಮಡಿವಾಳ ಗುರುಪೀಠದ ಪೀಠಾಧ್ಯಕ್ಷ ಬಸವ ಮಾಚಿದೇವ ಸ್ವಾಮೀಜಿ ಆಗ್ರಹಿಸಿದರು.
ಶ್ರೀರಂಗಪಟ್ಟಣ.10.ಮಾರ್ಚ.25:- ರಾಜ್ಯದಲ್ಲಿ ಮಡಿವಾಳ ಸಮುದಾಯವನ್ನು ಅನ್ನಪೂರ್ಣಮ್ಮ ವರದಿಯ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಚಿತ್ರದುರ್ಗದ ಜಗದ್ಗುರು ಮಾಚಿದೇವ ಮಹಾ ಸಂಸ್ಥಾನ ಮಡಿವಾಳ ಗುರುಪೀಠದ ಪೀಠಾಧ್ಯಕ್ಷ ಬಸವ ಮಾಚಿದೇವ ಸ್ವಾಮೀಜಿ ಇಂದು ಒತ್ತಾಯಿಸಿದರು. ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ‘ಮನೆ ಮನಕ್ಕೆ ಮಾಚಿದೇವ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಡಿವಾಳ ಜನಾಂಗದ ಪೈಕಿ ಶೇ 98ರಷ್ಟು ಜನರು ಬಟ್ಟೆ ತೊಳೆದು ಜೀವನ ನಡೆಸುತ್ತಿದ್ದಾರೆ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಗಗನ ಕುಸುಮವಾಗಿದ್ದು, ರಾಜಕೀಯ ಶಕ್ತಿಯೂ ಇಲ್ಲ. ಸಮಾಜದಲ್ಲಿ…