ಭದ್ರತೆಯನ್ನು ಬಲಪಡಿಸುವ ಸಿ.ಸಿ.ಟಿ.ವಿ ಕಮಾಂಡ ಮತ್ತು ಕಂಟ್ರೋಲ್ ಸೆಂಟರ. ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು
ಬೀದರ.08.ಮಾರ್ಚ.25:- ಬೀದರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಈಶ್ವರ ಖಂಡ್ರೆ ಅವರು ಸಿ.ಸಿ.ಟಿ.ವಿ ಕಮಾಂಡ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಉದ್ಘಾಟಿಸಿದರು. ಈ ಯೋಜನೆಗೆ ಶ್ರೀ ಈಶ್ವರ ಖಂಡ್ರೆ ಅವರ ಅನುದಾನದಡಿ ಹಾಗೂ KKRDB (ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ) ನಿಧಿಯಿಂದ ಹಣ ಮಂಜೂರಾಗಿದ್ದು, Automatic Number Plate Recognition (A.N.P.R) ತಂತ್ರಜ್ಞಾನ ಹೊಂದಿರುವ 21 ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು Face Recognition (F.R) ತಂತ್ರಜ್ಞಾನ ಹೊಂದಿರುವ…