ಬುದ್ಧ-ಬಸವ-ಅಂಬೇಡ್ಕರರ ಕಾಲದಿಂದ ಈ ನೆಲದಲ್ಲಿ ಸಮಾನತೆಯ ಪ್ರಯತ್ನಗಳು ನಡೆಯತ್ತಲೇ ಇವೆ -ಡಾ. ಎಚ್.ಸಿ. ಮಹಾದೇವಪ್ಪ
ಬಸವಕಲ್ಯಾಣ ೨೩, ಶ್ರಮ ಸಂಸ್ಕೃತಿಯ ಮೂಲಕ ಲೋಕದ ಚಲನೆಗೆ ಕಾರಣವಾದ ಕೆಳ ಸಮುದಾಯಗಳಿಗೆ ಒಂದು ಘನತೆಯ ಸ್ಥಾನ ನೀಡಿ, ಅವರನ್ನು ಒಂದು ವೇದಿಕೆಯಡಿ ತರುವ ಕೆಲಸ ಮಾಡಿದ ಬಸವಣ್ಣನಂತಹ ಮೇರು ನಾಯಕರ ನಾಡಾದ ಬಸವ ಕಲ್ಯಾಣದಲ್ಲಿ ಸಮಾನತೆ ಸಮಾವೇಶದಲ್ಲಿ ಇಂದು ಅತ್ಯಂತ ಪ್ರೀತಿಯಿಂದ ಭಾಗವಹಿಸಿದೆ. ಅತ್ಯಂತ ಕ್ರೂರ ಮತ್ತು ಅಮಾನವೀಯವಾದ ಸಾಮಾಜಿಕ ಇತಿಹಾಸವನ್ನು ಹೊಂದಿರುವ ನಮ್ಮ ದೇಶದಲ್ಲಿ ಜನರ ಘನತೆ ಮತ್ತು ಸಮಾನತೆಯನ್ನು ಕಾಪಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ. ಬುದ್ಧನ ಕಾಲದಿಂದ ಹಿಡಿದು ಬಾಬಾ ಸಾಹೇಬರ…