ಉ.ಪ್ರ.ಬೀದರ ಯಾತ್ರಿಕರ ದುರ್ಮರಣ ಮೃತರ ಶವಗಳು ಸ್ವಗ್ರಾಮಕ್ಕೆ ತಲುಪಲಿವೆ.
|

ಉ.ಪ್ರ.ಬೀದರ ಯಾತ್ರಿಕರ ದುರ್ಮರಣ ಮೃತರ ಶವಗಳು ಸ್ವಗ್ರಾಮಕ್ಕೆ ತಲುಪಲಿವೆ.

ಬೀದರ.23.ಫೆಬ್ರುವರಿ.25:- ಬೀದರ ನಗರದ ಲಾಡಗೇರಿ ಬಡಾವಣೆಯ 14 ನಿವಾಸಿಗಳು ಪ್ರಯಾಗರಾಜಿಗೆ ಪ್ರಯಾಣ ಕೈಗೊಂಡಿರುತ್ತಾರೆ, ದಿನಾಂಕ 21.02.2025 ರಂದು ಸದರಿ ಪ್ರವಾಸಿಗಳು ಕ್ರೊಸರ್ ಮೂಲಕ ಕಾಶಿ (ವಾರಣಾಸಿ) ಯಿಂದ ಪ್ರಯಾಗರಾಜಿಗೆ ಪ್ರಯಾಣಿಸಿತ್ತಿರುವ ಸಂದರ್ಭದಲ್ಲಿ ಮಿರ್ಜಾಮುರಾದ್ ಹತ್ತಿರ ಲಾರಿ ಮತ್ತು ಕ್ರೂಸರ್ ಮಧ್ಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 14 ಜನ ಪ್ರಯಾಣಿಕರ ಪೈಕಿ (1) ಸಂತೋಷ ತಂದೆ ಗೋವಿಂದ (2) ಸುನೀತಾ ಗಂಡ ಸಂತೋಷ (3) ನಿಲಮ್ಮಾ ಗಂಡ ಗೋವಿಂದ (4) ಲಕ್ಷ್ಮೀಬಾಯಿ ಗಂಡ ಸುರೇಶ (5) ಕಲಾವತಿ ಗಂಡ…

ಅಧಿಕಾರ ದುರ್ಬಳಕೆ ಮಾಡಿದ ತಾ. ಪಂ. ಇ.ಒ.ಗೆ ಸಸ್ಪೆಂಡ್ ಮಾಡಲು ರಮೇಶ ಬಿರಾದಾರ ಒತ್ತಾಯ.!
|

ಅಧಿಕಾರ ದುರ್ಬಳಕೆ ಮಾಡಿದ ತಾ. ಪಂ. ಇ.ಒ.ಗೆ
ಸಸ್ಪೆಂಡ್ ಮಾಡಲು ರಮೇಶ ಬಿರಾದಾರ ಒತ್ತಾಯ.!

ಬೀದರ್:-೨೨, ಬೀದರ ತಾಲ್ಲೂಕಾ ಪಂಚಾಯತನ ಕಾರ್ಯನಿರ್ವಾಹಕ ಅಧಿಕಾರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಲಿಯಂಬರ ಗ್ರಾಮ ಪಂಚಾಯತಿಯ ಮಮದಾಪೂರ ಗ್ರಾಮದ ನಿವೃತ್ತ ಶಿಕ್ಷಕ ಶ್ರೀಕಾಂತ ಮೂಲಗೆ ಅವರ ನಿವೇಶನ ಕಾನೂನು ಬಾಹಿರವಾಗಿ ಡಿಜಿಟಲ್ ಖಾತೆ ರದ್ದು ಮಾಡಿರುತ್ತಾರೆ. ಅವರಿಗೆ ತಕ್ಷಣವೇ ಸಸ್ಪೆಂಡ್ ಮಾಡಿ ಇಲಾಖಾ ತನಿಖೆ ನಡೆಸಿ ಕಾನೂನು ರಿತ್ಯ ಸೂಕ್ತ ಕ್ರಮ ಕೈಕೊಂಡು ಶಿಕ್ಷೆಗೆ ಗುರಿಪಡಿಸಬೇಕೆಂದು ಬೀದರ ಜಿಲ್ಲಾ ವಿಕಾಸ ವೇದಿಕೆಯ ಮತ್ತು ಬೀದರ ಜಿಲ್ಲಾ ಬರಹಗಾರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ರಮೇಶ ಬಿರಾದಾರ ಅವರು…

ಕಲ್ಲೂರ: ನಂದೀಶ್ವರ ನಾಟ್ಯ ಸಂಘದಿಂದಸರ್ಕಾರ ತಂದ ಸೌಭಾಗ್ಯ ಬೀದಿ ನಾಟಕ ಪ್ರದರ್ಶನ
|

ಕಲ್ಲೂರ: ನಂದೀಶ್ವರ ನಾಟ್ಯ ಸಂಘದಿಂದ
ಸರ್ಕಾರ ತಂದ ಸೌಭಾಗ್ಯ ಬೀದಿ ನಾಟಕ ಪ್ರದರ್ಶನ

ಬೀದರ.23.ಫೆಬ್ರುವರಿ.25:- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಇವರು ಆಯೋಜನೆ ಮಾಡಿರುವ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ 1.ಗ್ರಹಜ್ಯೋತಿ, 2.ಗ್ರಹಲಕ್ಮಿ, 3.ಅನ್ನಭಾಗ್ಯ, 4.ಶಕ್ತಿಯೋಜನೆ, 5.ಯುವನಿಧಿ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಸರ್ಕಾರ ತಂದೆ ಸೌಭಾಗ್ಯ ಎಂಬ ಶೀರ್ಷಿಕೆಯಡಿ ಬೀದಿ ನಾಟಕವನ್ನು ದಿನಾಂಕ: 21-02-2025 ರಂದು ಹುಮನಾಬಾದ ತಾಲ್ಲೂಕಿನ ಕಲ್ಲೂರ ಗ್ರಾಮದಲ್ಲಿ ನಂದೀಶ್ವರ ನಾಟ್ಯ ಸಂಘದ ದೇವದಾಸ ಚಿಮಕೋಡ ಅವರ ಕಲಾ ತಂಡದಿಂದ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಕಲಾವಿದರಾದ ವೀರಶೆಟ್ಟಿ…

ಜಮೀನು ವಿವಾದಲ್ಲಿ: ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ.!
|

ಜಮೀನು ವಿವಾದಲ್ಲಿ: ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ.!

ಬೀದರ.23.ಫೆ.25:- ಔರಾದ (ಬಿ) ತಾಲೂಕಿನ ಕೊಳ್ಳೂರ್ ಗ್ರಾಮದಲ್ಲಿ ಶನಿವಾರ ಸಂಜೆ ಹೊತ್ತು ಜಗಳ ಮಾಡಿಕೊಂಡ ಈ ಸೋದರ ಸಂಬಂಧಿಗಳು ಗುರಯ್ಯ ಸ್ವಾಮಿಯನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಸ್ಥಳದಲ್ಲಿದ್ದವರು ಅವರನ್ನು ಔರಾದ್ ಸಾರ್ವಜನಿಕ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ತಿಳಿದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿಂತಾಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ಳೂರ್ ಗ್ರಾಮದಲ್ಲಿ ಜಮೀನು ವಿವಾದ ಸಂಬಂಧ ವ್ಯಕ್ತಿಯೊಬ್ಬನನ್ನು ಇರಿದು ಕೊಲೆ ಮಾಡಿದ…

NEP ಜಾರಿ ಮಾಡಿದರೆ 2000 ವರ್ಷ ಹಿಂದಕ್ಕೆ ಹೋಗುತ್ತೇವೆ: ಸಿಎಂ ಸ್ಟಾಲಿನ್‌
|

NEP ಜಾರಿ ಮಾಡಿದರೆ 2000 ವರ್ಷ ಹಿಂದಕ್ಕೆ ಹೋಗುತ್ತೇವೆ: ಸಿಎಂ ಸ್ಟಾಲಿನ್‌

ಚೆನೈ.23.ಫೆ.25:- NEP 2020 ಮುಂದುವರಿದು ಎನ್‌ಇಪಿ (NEP  NEW EDUCATION POLICY 2020) ಅನುಷ್ಠಾನಗೊಳಿಸಿದರೆ ತಮಿಳುನಾಡಿಗೆ ₹ 2,000 ಕೋಟಿ ದೊರೆಯಲಿದೆ ಎಂದು ಕೇಂದ್ರ ಹೇಳುತ್ತಿದೆ. ಕೇಂದ್ರವು ₹ 10,000 ಕೋಟಿ ನೀಡಿದರೂ ಎನ್‌ಇಪಿಯನ್ನು ಜಾರಿಮಾಡುವುದಿಲ್ಲ ಎಂದು ಹೇಳಲು ಬಯಸುತ್ತೇನೆ. ರಾಜ್ಯವನ್ನು 2,000 ವರ್ಷಗಳಷ್ಟು ಹಿಂದಕ್ಕೆ ತಳ್ಳುವ ಪಾಪದ ಕೆಲಸ ಮಾಡುವುದಿಲ್ಲ ಎಂದು ಕಟುವಾಗಿ ಹೇಳಿದ್ದಾರೆ. ತ್ರಿಭಾಷಾ ಸೂತ್ರ ಅಳವಡಿಕೆ ಸಂಬಂಧ ತಮಿಳುನಾಡು ಮತ್ತು ಕೇಂದ್ರ ಸರಕಾರ‌ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಕೇಂದ್ರದ ವಿರುದ್ಧ ಮತ್ತೆ ಹರಿಹಾಯ್ದಿರುವ…

ಬಳ್ಳಾರಿ ವಿಶ್ವವಿದ್ಯಾಲಯ ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ಬಹಿರಂಗವಾಗಿದೆ.!
|

ಬಳ್ಳಾರಿ ವಿಶ್ವವಿದ್ಯಾಲಯ ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ಬಹಿರಂಗವಾಗಿದೆ.!

ಬಳ್ಳಾರಿ.23.ಫೆ.25:- ರಾಜ್ಯದಲ್ಲಿ ನಕಲಿ ಪ್ರಮಾಣಪತ್ರದ ಹಾವಳಿ ಈಗ ಮಾತೊಂದ ಅಕ್ರಮ ಕಂಡುಬಂದಿದೆ. ಈ ಕಾರಣಕ್ಕೆ ಈಗ 10 ವರ್ಷಗಳಲ್ಲಿ ಏನಾಗಿದೆ ಎಂಬುದನ್ನು ಪರಿಶೀಲಿಸಲು ನಾವು ತೀರ್ಮಾನಿಸಿದ್ದೇವೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಸಹಿ ನಕಲು ಮಾಡಿ, ನೂರಾರು ಮಂದಿಗೆ ಘಟಿಕೋತ್ಸವದ ನಕಲಿ ಪ್ರಮಾಣ ಪತ್ರ ನೀಡಿರುವುದು ಬಹಿರಂಗವಾಗಿದೆ. ಹೀಗಾಗಿ, ಈ 10 ವರ್ಷಗಳಲ್ಲಿ ಪ್ರಮಾಣ ಪತ್ರಕ್ಕೆಂದು ನೀಡಲಾದ ರಶೀದಿಗಳನ್ನು ಪರಿಶೀಲಿಸಲು ವಿಶ್ವವಿದ್ಯಾಲಯ ಮುಂದಾಗಿದೆ. ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಗುತ್ತಿಗೆ ನೌಕರರು ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೆ. ವಿಶ್ವವಿದ್ಯಾಲಯಕ್ಕೆ…

ಕಲ್ಯಾಣ ಕರ್ನಾಟಕದ್ ನೇಮಕಾತಿಯಲ್ಲಿ ಶೇ.80ರಷ್ಟು ಅನುಮತಿ.!
|

ಕಲ್ಯಾಣ ಕರ್ನಾಟಕದ್ ನೇಮಕಾತಿಯಲ್ಲಿ ಶೇ.80ರಷ್ಟು ಅನುಮತಿ.!

ಶಿವಮೊಗ್ಗ.23.ಫೆ.25:- ಕಲ್ಯಾಣ ಕರ್ನಾಟಕ ನೇಮಕಾತಿ ಸಂಬಂಧಿತ ಈ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದೇನೆ ಕಲ್ಯಾಣ ಕರ್ನಾಟಕದ ನೇಮಕಾತಿಯಲ್ಲಿ ಶೇ.80ರಷ್ಟು ನೇಮಕ ಮಾಡಲು ಅನುಮತಿ ಸಿಕ್ಕಿದೆ. ಕಳೆದ ಸಾಲಿನಲ್ಲಿ ಸುಮಾರು 1500 ಕೋಟಿ ಶಿಕ್ಷಣ ಇಲಾಖೆಗೆ ಅನುದಾನ ಬಂದಿದೆ ಎಂದು ತಿಳಿಸಿದರು. ಮಕ್ಕಳಿಗೆ ಕೌಶಲ್ಯ ಭರಿತ ಶಿಕ್ಷಣ ನೀಡಲು ಒತ್ತು ನೀಡುತ್ತಿದ್ದೇವೆ. ಕಲಿಕೆಗೆ ಪೂರಕವಾದ ಹೊಸ ವಿಧಾನಗಳನ್ನು ಕೂಡ ಅಳವಡಿಸಿ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿದ್ದೇವೆ.ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಕೇಳಿದ್ದೇನೆ. ಪ್ರಮುಖವಾಗಿ ನೂತನ ಕ್ಲಾಸ್ ರೂಮ್‌ಗಳು ಮತ್ತು ಶಿಕ್ಷಕರ…

ರಾಜ್ಯದ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ಶೀಘ್ರದಲ್ಲಿ ಬಾಕಿ ವೇತನ ಬಿಡುಗಡೆ : ಸಚಿವ ಮಧು ಬಂಗಾರಪ್ಪ
|

ರಾಜ್ಯದ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ಶೀಘ್ರದಲ್ಲಿ ಬಾಕಿ ವೇತನ ಬಿಡುಗಡೆ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ.23.ಫೆ.25:- ರಾಜ್ಯದ ಅತಿಥಿ ಶಿಕ್ಷಕರ ಸಂಬಳ ತಕ್ಷಣವೇ ಬಿಡುಗಡೆ ಮಾಡಲಾಗುತ್ತಿದೆ ಮತ್ತು ಎಲಾಖೆಯಲಿ ಖಾಲಿಯಿರುವ ಹುದದೆಗಳಲ್ಲಿ  ಶೇ.80ರಷ್ಟು ನೇಮಕ ಮಾಡಲು ಅನುಮತಿ ಸಿಕ್ಕಿದೆ ಎಂದು ಈ ಕುರಿತು ಅವರು ನಿನ್ನೆ ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಅತಿಥಿ ಶಿಕ್ಷಕರಿಗೆ ನಾವು ಕೊಡುವುದೇ ಕಡಿಮೆ ಸಂಬಳ. ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ತಿಂಗಳದಿಂದ ಅವರಿಗೆ ಸಂಬಳ ಆಗಿರಲಿಲ್ಲ. ಈಗ ಎಲ್ಲಾ ಅತಿಥಿ ಶಿಕ್ಷಕರಿಗೂ ಬಾಕಿ ಇರುವ ವೇತನ ಬಿಡುಗಡೆ ಮಾಡುತ್ತೇವೆ. ಸಂಬಳ ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಶಿಕ್ಷಣ ಸಚಿವ…