ವೈಚಾರಿಕ ಗಂಗೆ ಎಂದಿಗೂ ಕಲುಷಿತವಾಗುವುದಿಲ್ಲ’ ಎಂದು ಚಿಂತಕ ಅರವಿಂದ ಮಾಲಗತ್ತಿ.!
ಬೆಂಗಳೂರು.16.ಫೆ.25:- ಈಗ ನೀವು ಅಂಬೇಡ್ಕರ್ ಚಿಂತನೆಯ ಗಂಗೆಯಲ್ಲಿ ಮೀಯಿರಿ. ವೈಚಾರಿಕ ಗಂಗೆ ಎಂದಿಗೂ ಕಲುಷಿತವಾಗುವುದಿಲ್ಲ’ ಎಂದು ಚಿಂತಕ ಅರವಿಂದ ಮಾಲಗತ್ತಿ ತಿಳಿಸಿದರು. ಭಾರತೀಯ ವಿದ್ಯಾರ್ಥಿ ಸಂಘ ಭಾನುವಾರ ಹಮ್ಮಿಕೊಂಡಿದ್ದ ಬಿವಿಎಸ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮಮಂದಿರ ಉದ್ಘಾಟನೆಯಾದಾಗ ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂದು ಕೆಲವರು ಹೇಳುತ್ತಾರೆ. ಅಂಬೇಡ್ಕರ್ ಬದುಕು ಮತ್ತು ಬರಹಗಳ ಸಂಪುಟವನ್ನು ಮಹಾರಾಷ್ಟ್ರ ಸರ್ಕಾರ ಮೊದಲ ಬಾರಿಗೆ ಪ್ರಕಟಿಸಿದಾಗ ಭಾರತ ಬೆಳಗಿತು ಎಂದು ಹೇಳಿದರು. 1970ರ ದಶಕದಲ್ಲಿ ಡಿಎಸ್ಎಸ್ ಮುಕ್ತ ವಿಶ್ವವಿದ್ಯಾಲಯದಂತೆ ಕೆಲಸ…