ಮಹಿಳೆಯ ಜೀವ ಉಳಿಸಲು ಹೋಗಿ ಕಾರು ಪಲ್ಟಿ; ಕಾರಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಚೆಲ್ಲಾಪಿಲ್ಲಿ.!
ಬೀದರ.03.ಫೆ.25:- ಬೀದರ್ ಜಿಲ್ಲೆಯಲ್ಲಿ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮಬಳಿ ರಸ್ಟಮೇಲೆ ಭಯಂಕರ ಘಟನೆ ರಸ್ತೆ ಮೇಲೇ ಮಹಿಳೆಯನ್ನು ಉಳಿಸಲು ಹೋದ ಕಾರು ಪಲ್ಟಿಯಾಗಿ, ಕಾರಿನಲ್ಲಿದ್ದ ಲಕ್ಷಾಂತರ ಮೌಲ್ಯದ ಗಾಂಜಾದ ಕಟ್ಟುಗಳು ಚೆಲ್ಲಾಪಿಲ್ಲಿಯಾಗಿ ರೋಡಿನಲ್ಲಿ ಬಿದ್ದ ಘಟನೆ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದ ಬಳಿ ನಡೆದಿದೆ. ಇಂದು ಸುಮಾರು 11 ಗಂಟೆಗೆ ಹೈದರಾಬಾದ್ ಕಡೆಯಿಂದ ಮುಂಬೈ ಕಡೆಗೆ ಕಾರೊಂದು ಸಾಗುತ್ತಿತ್ತು.ಮಾರ್ಗಮಧ್ಯ ರಾಜೇಶ್ವರ ಗ್ರಾಮದ ಬಳಿ ರಸ್ತೆ ದಾಟುವ ಮಹಿಳೆಯೊಬ್ಬರಿಗೆ ಕಾರು ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ. ಪರಿಣಾಮವಾಗಿ…