ಯಾದಗಿರಿ | ಸಂವಿಧಾನ ವಿರೋಧಿ ಧರ್ಮಶಾಸ್ತ್ರ ಗ್ರಂಥ ಜಾರಿಗೊಳಿಸಲು ಬಿಡುವುದಿಲ್ಲ : ಮಲ್ಲಿಕಾರ್ಜುನ ಕ್ರಾಂತಿ
ಯಾದಗಿರಿ.30.ಜನವರಿ.25:- ಸುರಪುರ ದಲಿತ್ ಸಂಘಟನೆಗಳು ಎಚೇರಿಕೆ.ದೇಶದಲ್ಲಿ ಫೆ.3 ರಂದು ಸಂವಿಧಾನ ವಿರೋಧಿಯಾಗಿರುವ ಧರ್ಮಶಾಸ್ತ್ರ ಎನ್ನುವ ಹೆಸರಲ್ಲಿ ಮನುಸ್ಮೃತಿ ಗ್ರಂಥ ಸಂವಿಧಾನದ ಜಾಗದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಕ್ರೋಶ ವ್ಯಕ್ತಪಡಿಸಿದರು. ಸುರಪುರ ನಗರದಲ್ಲಿ ಸಂಘಟನೆಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಎಲ್ಲರಿಗೂ ನ್ಯಾಯ ನೀಡುವ, ಸರ್ವರ ಹಿತಾಯ…