ಒಳಮೀಸಲಾತಿ ಜಾರಿಗೆ ಗೋರ್ ಸೇನಾ ವಿರೋಧ.!
ಬೀದರ.28.ಜನವರಿ.25:- ರಾಜ್ಯದಲ್ಲಿ ಸದಾಶಿವ ಆಯೋಗ ವರದಿ ಪ್ರಕಾರ ಜಾತಿ ಜನಗಣತಿ ನಡೆಸದೇ ಒಳಮೀಸಲಾತಿ ಜಾರಿಗೊಳಿಸುವುದು ಸರಿಯಲ್ಲ. ಒಂದುವೇಳೆ ಒಳಮೀಸಲಾತಿ ಜಾರಿಗೆ ತಂದರೆ ಅದನ್ನು ವಿರೋಧಿಸಿ ಹೋರಾಟ ನಡೆಸಲಾಗುವುದು’ ಎಂದು ಗೋರ್ ಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶಕುಮಾರ ಜಾಧವ ತಿಳಿಸಿದರು. ಬಂಜಾರಾ ಸಮುದಾಯದವರು ದುಃಸ್ಥಿತಿಯಲ್ಲಿದ್ದಾರೆ. ಸರ್ಕಾರದ ಸೌಲಭ್ಯಗಳು ಕಡಿಮೆ ಇವೆ. ಒಳಮೀಸಲಾತಿಯಿಂದ ನಮಗೆ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸರ್ಕಾರದ ಬಳಿ ದನಕರುಗಳ ದತ್ತಾಂಶ ಇದೆ. ಆದರೆ, ನಮ್ಮ ಬಂಜಾರ ಸಮುದಾಯದ ದತ್ತಾಂಶ…