ರೈತನ ಕಬ್ಬು ಬೆಂಕಿಗಾಹುತಿ.!
ಔರಾದ (ಬಾ). 25.ಜನವರಿ.25:- ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಹೆಡಗಾಪುರ ರೈತ ಸಿದ್ದಪ್ಪ ಯರನಾಳೆ ಅವರ 3.8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಶುಕ್ರವಾರ ಮುಂಜಾನೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡು ನೋಡು ನೋಡುತ್ತಿದ್ದಂತೆ ಎಲ್ಲೆಡೆ ಪಸರಿಸಿ, ಇಡೀ ಕಬ್ಬು ಸುಟ್ಟು ಹೋಗಿದೆ. ಸ್ಥಳಕ್ಕೆ ಪೋಲಿಸ ಹಾಗೂ ಅಗ್ನಿಶಾಮಕ ತಂಡ ಭೇಟಿ ನೀಡಿ, ಪರಿಶೀಲಿಸಿತು.ಕಟಾವಿಗೆ ಬಂದರೂ ಕಾರ್ಖಾನೆಯವರು ಕಬ್ಬು ಸಾಗಿಸಲು ವಿಳಂಬ ಮಾಡಿದ್ದರಿಂದ ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗಲಿ ಕಬ್ಬು ಸುಟ್ಟು ಹೋಗಿದೆ….