ಅಧಿಕಾರೇತರ ಸದಸ್ಯರನ್ನಾಗಿ ಆಯ್ಕೆ ಮಾಡಲು ವಿಶ್ವಕರ್ಮ ಸಮುದಾಯಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!
|

ಅಧಿಕಾರೇತರ ಸದಸ್ಯರನ್ನಾಗಿ ಆಯ್ಕೆ ಮಾಡಲು ವಿಶ್ವಕರ್ಮ ಸಮುದಾಯಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!

ಬೀದರ:09.ಜನವರಿ.25 ಬೀದರ:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ಆಯ್ಕೆ ಸಮಿತಿಗೆ ಒಬ್ಬರು 02 ವರ್ಷಗಳ ಅವಧಿಗೆ ಅಧಿಕಾರೇತರ ಸದಸ್ಯರನ್ನಾಗಿ ಆಯ್ಕೆ ಮಾಡಲು ವಿಶ್ವಕರ್ಮ ಸಮುದಾಯಗಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಹತೆಗಳು: ನಾಮನಿರ್ದೇಶನ ಬಯಸುವ ವ್ಯಕ್ತಿಯು ಅದೇ ಜಿಲ್ಲೆಯವರಾಗಿದ್ದು ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರಬೇಕು. ಅದೇ ಜಿಲ್ಲೆಯಲ್ಲಿ ಕನಿಷ್ಠ 15 ವರ್ಷಗಳು ವಾಸವಿರಬೇಕು. ಕನಿಷ್ಠ 35 ವರ್ಷದಿಂದ ಗರಿಷ್ಠ 65 ವಯೋಮಿತಿಯಲ್ಲಿರಬೇಕು….

ಬೀದರ ಜಿಲ್ಲೆ. ಬ್ಯಾಟರಿ ಚಾಲಿತ ವಿಲ್ಹ್ಚೇರ ಯೋಜನೆಯಡಿ ಅರ್ಜಿ ಆಹ್ವಾನ
|

ಬೀದರ ಜಿಲ್ಲೆ. ಬ್ಯಾಟರಿ ಚಾಲಿತ ವಿಲ್ಹ್ಚೇರ ಯೋಜನೆಯಡಿ ಅರ್ಜಿ ಆಹ್ವಾನ

ಬೀದರ: 09.ಜನವರಿ.25 :-  ಬೀದರ ಜಿಲ್ಲೆಯ 2024-25ನೇ ಸಾಲಿಗೆ ಶೇ 75% ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರ ವ್ಯಕ್ತಿಗಳಿಗೆ ಇಲಾಖೆಯಿಂದ ಜಾರಿ ಇರುವ ಬ್ಯಾಟರಿ ಚಾಲಿತ ವಿಲ್ಹ್ಚೇರ ಯೋಜನೆಯಡಿ ಅರ್ಹರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯಲು ಆನ್‌ಲೈನ್ Suvidha Website URL https://suvidha.karnataka.gov.in ಪೋರ್ಟಲ್‌ನಲ್ಲಿ ದಿನಾಂಕ: 21-01-2025 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ…

ಜಿಲ್ಲಾ ಕ್ರೀಡಾ ಶಾಲೆಗಳಿಗೆ ತರಬೇತಿದಾರರ ಆಯ್ಕೆಗೆ ಜ.16ರಿಂದ ಆಯ್ಕೆ ಪ್ರಕ್ರಿಯೆ ಪ್ರಾರಂಭ.!
|

ಜಿಲ್ಲಾ ಕ್ರೀಡಾ ಶಾಲೆಗಳಿಗೆ ತರಬೇತಿದಾರರ ಆಯ್ಕೆಗೆ ಜ.16ರಿಂದ ಆಯ್ಕೆ ಪ್ರಕ್ರಿಯೆ ಪ್ರಾರಂಭ.!

      ಬೀದರ:09.ಜನವರಿ.25:-  ಬೀದರ ಜಿಲ್ಲೆಯ 2025-26 ನೇ ಸಾಲಿಗಾಗಿ ರಾಜ್ಯದ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಅಥ್ಲೇಟಿಕ್ಸ್, ಹಾಕಿ, ಬಾಸ್ಕೇಟ್ ಬಾಲ್, ಜಿಮ್ನಾಸ್ಟಿಕ್, ವಾಲಿಬಾಲ್, ಫುಟ್‌ಬಾಲ್, ಜುಡೋ, ಕುಸ್ತಿ ಮತ್ತು ಸೈಕ್ಲಿಂಗ್‌ನಲ್ಲಿ ಕ್ರೀಡೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಹಾಗೂ ಜಿಲ್ಲಾ ಕ್ರೀಡಾನಿಲಯಕ್ಕೆ ಹಾಗೂ ಅಥ್ಲೇಟಿಕ್ಸ್,ಬಾಸ್ಕೇಟ್‌ಬಾಲ್ ಮತ್ತು ವಾಲಿಬಾಲ್‌ಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ವೈಜ್ಞಾನಿಕವಾಗಿ ನಡೆಸಲು ತಿರ್ಮಾನಿಸಲಾಗಿದೆ.         ಈ ಪ್ರಕ್ರಿಯೆಯನ್ನು ಈ ಕೆಳಕಂಡ ದಿನಗಳಂದು ಬೆಳಿಗ್ಗೆ 10 ಗಂಟೆಯಿAದ ಆಯಾ ತಾಲೂಕಿನಲ್ಲಿ…

ಇಂದು ಬೀದರ ಜಿಲ್ಲೆಯ ಭೂ ಸುರಕ್ಷಾ ಇ-ಖಜಾನೆ, ಡಿಜಿಟಿಲೈಜೇಷನ ಉದ್ಘಾಟನೆ ಸಮಾರಂಭ.!
|

ಇಂದು ಬೀದರ ಜಿಲ್ಲೆಯ ಭೂ ಸುರಕ್ಷಾ ಇ-ಖಜಾನೆ, ಡಿಜಿಟಿಲೈಜೇಷನ ಉದ್ಘಾಟನೆ ಸಮಾರಂಭ.!

ಬೀದರ 09.ಜನವರಿ.25:- ಬೀದರ ಜಿಲ್ಲಾಡಳಿತ ಬೀದರ ವತಿಯಿಂದ ಜನವರಿ 10 ರಂದು ಬೆಳಿಗ್ಗೆ 10 ಗಂಟೆಗೆ ತಹಸೀಲ್ ಕಛೇರಿ ಬೀದರದಲ್ಲಿ ಆಯೋಜಿಸಿರುವ ಭೂ ಸುರಕ್ಷಾ ಇ-ಖಜಾನೆ ತಾಲ್ಲೂಕು ಕಛೆರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಉದ್ಘಾಟನೆಯನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಾಡಲಿದ್ದಾರೆ. ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್ ಹಾಗೂ ಕಂದಾಯ ಸಚಿವರಾದ…

ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ “ಭೂ ದಾಖಲೆಗಳ ಡಿಜಿಟಲೀಕರಣ” ಉದ್ಘಾಟನೆ.!
|

ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ “ಭೂ ದಾಖಲೆಗಳ ಡಿಜಿಟಲೀಕರಣ” ಉದ್ಘಾಟನೆ.!

ಭಾಲ್ಕಿ: 09.ಜನವರಿ.25.ಬೀದರ ಜಿಲ್ಲೆಯ ಭಾಲ್ಕಿ ತಾಲೂಕಾ ತಹಸೀಲ ಕಾರ್ಯಾಲಯಲ್ಲಿಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ) ಉದ್ಘಾಟನೆ ಮಾಡಲಿದ್ದಾರೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಜನವರಿ.10 ರಂದು ಬೆಳಿಗ್ಗೆ 10 ಗಂಟೆಗೆ  ತಹಸೀಲ್ ಕಛೇರಿ ಭಾಲ್ಕಿಯಲ್ಲಿ ಭೂ ಸುರಕ್ಷಾ ಇ-ಖಜಾನೆ ( ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ) ಉದ್ಘಾಟನೆ ಮಾಡಲಿದ್ದಾರೆ.ಹಾಗೂ ಬೆಳಿಗ್ಗೆ 11 ಗಂಟೆಗೆ ಬೀದರ ಜಿಲ್ಲೆಯ…

ತಮ್ಮ ಜನ್ಮದಿನದ ಅಂಗವಾಗಿ ಬ್ಯಾನರ್, ಕಟೌಟ್ ಕಟ್ಟದಂತೆ.ಸಚಿವರು ಈಶ್ವರ ಖಂಡ್ರೆ ಮನವಿ.!
|

ತಮ್ಮ ಜನ್ಮದಿನದ ಅಂಗವಾಗಿ ಬ್ಯಾನರ್, ಕಟೌಟ್ ಕಟ್ಟದಂತೆ.ಸಚಿವರು ಈಶ್ವರ ಖಂಡ್ರೆ ಮನವಿ.!

ಬೆಂಗಳೂರು, ಜ.9: ಈ ವರ್ಷ  ಸಾರ್ವಜನಿಕವಾಗಿ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡದಿರಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀರ್ಮಾನಿಸಿದ್ದು, ಯಾರೂ ಬ್ಯಾನರ್, ಕಟೌಟ್ ಕಟ್ಟದಂತೆ ಮನವಿ ಮಾಡಿದ್ದಾರೆ. ತತ್ಸಂಬಂಧವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತ್ತೀಚೆಗಷ್ಟೇ ತಮ್ಮ ಪುತ್ರ ಸಂಸದರಾದ ಸಾಗರ್  ಖಂಡ್ರೆ ಅವರ ಜನ್ಮ ದಿನವನ್ನು  ಭಾಲ್ಕಿಯ ಜನತೆ ಮತ್ತು ಅಭಿಮಾನಿಗಳೆಲ್ಲಾ ಅದ್ದೂರಿಯಿಂದ ಆಚರಿಸಿದ್ದಾರೆ. ಈಗ ಪ್ರಸಕ್ತ ಸನ್ನಿವೇಶದಲ್ಲಿ ತಮ್ಮ ಜನ್ಮ ದಿನವನ್ನು ಸಾರ್ವಜನಿಕವಾಗಿ ಆಚರಿಸುವುದು ಸೂಕ್ತವಲ್ಲ…

ರಾಜ್ಯದ ಕಾಲೇಜುಗಳಲ್ಲಿ  ಮತ್ತು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ.!
|

ರಾಜ್ಯದ ಕಾಲೇಜುಗಳಲ್ಲಿ  ಮತ್ತು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ.!

ಬೆಂಗಳೂರು: 09.ಜನವರಿ.25.ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತಕ್ಷಣವೇ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ರಾಜ್ಯ ಸರ್ಕಾರ ಶಿಕ್ಷಣ, ಉದ್ಯೋಗವಕಾಶಕ್ಕೆ ಸಂಬಂಧಿಸಿದಂತೆ ಆಗಾಗ ಶುಭ ಸುದ್ದಿಗಳನ್ನು ನೀಡುತ್ತಲೇ ಇರುತ್ತದೆ. ಇದೀಗ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ 1,033 ಹುದ್ದೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ…

ಬಿಯರ ಪ್ರಿಯಕರಿಗೆ ಶಾಕ. ಮತ್ತೆ ದರ ಏರಿಕೆ,
|

ಬಿಯರ ಪ್ರಿಯಕರಿಗೆ ಶಾಕ. ಮತ್ತೆ ದರ ಏರಿಕೆ,

ಬೆಂಗಳೂರು: 09.ಜನವರಿ.25:- ರಾಜ್ಯದಲ್ಲಿ ಸರ್ಕಾರ ಮತ್ತೆ ಜನೆ ಮೇಲೆ ಹೊರೆ. ಬಸ್ ಪ್ರಯಾಣ ದರ ಏರಿಕೆ ಮಾಡಿದ್ರು . ಈಗ ಸದ್ದಿಲ್ಲದೆ ಬಿಯರ್ ದರ ಏರಿಕೆ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಸರಕಾರ ಬಜೆಟ್‌ಗೆ ಮುನ್ನವೇ ಅಬಕಾರಿ ಉದ್ಯಮವೇ ಸಂಕಷ್ಟ ಎದುರಿಸುತ್ತಿರುವ ಹೊತ್ತಿನಲ್ಲಿ ಸರಕಾರ ದರ ಏರಿಕೆ ಮೂಲಕ ಬಿಯರ ಪ್ರಿಯರಿಗೆ ಶಾಕ್ ನೀಡಿದೆ. ಪ್ರತಿ ಬಿಯರ್ ಬಾಟಲಿಗೆ ಕನಿಷ್ಠ 10 ರಿಂದ 50 ರೂ.ಗಳವರೆಗೆ…

ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಪ್ರವೇಶಾತಿ ಉತ್ತಮಪಡಿಸುವಲ್ಲಿ ಯೋಜನೆಗಳ ರೂಪಿಸಲು ಚಿಂತನೆ:ಸಿಎಂ ಸೂಚನೆ.!
|

ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಪ್ರವೇಶಾತಿ ಉತ್ತಮಪಡಿಸುವಲ್ಲಿ ಯೋಜನೆಗಳ ರೂಪಿಸಲು ಚಿಂತನೆ:ಸಿಎಂ ಸೂಚನೆ.!

ಬೆಂಗಳೂರು: 09.ಜನವರಿ.25. ಕರ್ನಾಟಕ ರಾಜ್ಯ ಸರ್ಕಾರ ಉನ್ನತ ಶಿಕ್ಷಣದಲ್ಲಿ ಮತ್ತೆ ಪ್ರಗತಿಪರ ಚಿಂತನೆ ನಡೆಸುತ್ತಿದೆ. ಉನ್ನತ ಶಿಕ್ಷಣ ಪ್ರವೇಶಾತಿಯಲ್ಲಿ ಕರ್ನಾಟಕ ರಾಷ್ಟ್ರಮಟ್ಟದಲ್ಲಿ 12ನೇ ಸ್ಥಾನದಲ್ಲಿದ್ದು,  ಈ ಸ್ಥಾನ ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಒಟ್ಟು 24 ಲಕ್ಷ ವಿದ್ಯಾರ್ಥಿಗಳಿದ್ದು, 5 ಲಕ್ಷ ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆಂದು ಅಧಿಕಾರಿಗಳು…

ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
|

ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

ಕಲಬುರ್ಗಿ.09.ಜನವರಿ.25.ಕಲಬುರ್ಗಿ:- ಗುಲ್ಬರ್ಗಾ ವಿಶ್ವವಿದ್ಯಾನಿಲಯ  ಕಲಬುರ್ಗಿ. ಇಂದು 09 ಜನವರಿ 2025 ರ ಅಧಿಕೃತ ಅಧಿಸೂಚನೆಯ ಮೂಲಕ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಗುಲ್ಬರ್ಗಾವಿಶ್ವಿದ್ಯಾಲಯದ ಕಲಬುರ್ಗಿ ಇಲ್ಲಿ ಸ್ನಾತ್ಕೋತರ ಪದವಿ/ ಪೋಸ್ಟ್ಗ್ರಾಜುಯೇಟ್ ಪದ್ವಿಗೆಭೋದನೆ ಮಾಡುವ ಅಗತ್ಯವಿದೆ ಉದ್ಯೋಗಆಕಾಂಸಿಗಳು – ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 13ರಂದು ಬೆಳಿಗ್ಗೆ 11:00 ಗಂಟೆಗೆ ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. ಗುಲ್ಬರ್ಗ ವಿಶ್ವವಿದ್ಯಾಲಯ ಖಾಲಿ ಹುದ್ದೆಗಳ ಅಧಿಸೂಚನೆ: ಗುಲ್ಬರ್ಗಾ ವಿಶ್ವವಿದ್ಯಾಲಯದ ಅಧಿಸೂಚನೆಯನ್ನು ಓದಿ…