ಶರಣರ ವಚನಗಳು ಜೀವನ ದರ್ಶನ ಮಾಡುವ ಮಹೋನ್ನತ ಸಾಧನಗಳು – ಡಾ. ಗಿರೀಶ ಬದೋಲೆ.
ಬೀದರ, ಡಿಸೆಂಬರ್ 31,2024 “ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನಸಾಹಿತ್ಯ ಚಳುವಳಿ ಜಗತ್ತಿನ ಇತಿಹಾಸದಲ್ಲಿ ಇನ್ನೆಲ್ಲಿಯೂ ಕಂಡುಬರದ ವಿಸ್ಮಯಕಾರಿ,ಸಮಾಜ ಸುಧಾರಣೆಯ ಸಾಮೂಹಿಕ ಆಂದೋಲನವಾಗಿದ್ದು ಬಸವಣ್ಣನವರು ಅಂದೇ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತಿದ್ದರು. ಶಿವಸಮಾಜ ಅಂದರೆ ಸುಖಿಸಮಾಜವನ್ನು ಕಟ್ಟಬಯಸಿದ್ದ ಬಸವಣ್ಣನವರು ಜಾತಿರಹಿತ ,ವರ್ಗರಹಿತ ಆದರ್ಶಸಮಾಜ ಒಂದನ್ನು ಕಟ್ಟಬಯಸಿದ್ದರು.ಬಸವಣ್ಣನವರ ಈ ಮಹಾನ್ ಕಾರ್ಯಕ್ಕೆ ಹೆಗಲುಕೊಟ್ಟು ದುಡಿದ ಶರಣರಲ್ಲಿ ಶಿವಯೋಗಿ ಸಿದ್ಧರಾಮ, ಮಡಿವಾಳ ಮಾಚಿದೇವ ಮತ್ತು ಅಂಬಿಗರ ಚೌಡಯ್ಯನವರು ಪ್ರಮುಖರು. ನಮ್ಮ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ…