ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ಯುಜಿಸಿ ಶೀಘ್ರದಲ್ಲೇ ಯುಜಿ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್‌ಗಳ ಅವಧಿಯನ್ನು
| |

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ಯುಜಿಸಿ ಶೀಘ್ರದಲ್ಲೇ ಯುಜಿ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್‌ಗಳ ಅವಧಿಯನ್ನು

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ಯುಜಿಸಿ ಶೀಘ್ರದಲ್ಲೇ ಯುಜಿ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್‌ಗಳ ಅವಧಿಯನ್ನು ಕಡಿಮೆ ಮಾಡುವ ಅಥವಾ ವಿಸ್ತರಿಸುವ ಆಯ್ಕೆಯನ್ನು ನೀಡುತ್ತದೆ. ಯುಜಿಸಿ ವೇಗವರ್ಧಿತ ಪದವಿ ಕಾರ್ಯಕ್ರಮ ಮತ್ತು ವಿಸ್ತೃತ ಪದವಿ ಕಾರ್ಯಕ್ರಮಕ್ಕಾಗಿ ಪ್ರಮಾಣಿತ ಕಾರ್ಯನಿರ್ವಹಣಾ ಕಾರ್ಯವಿಧಾನಗಳನ್ನು ಅನುಮೋದಿಸಿದೆ. ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಮಾಧ್ಯಮಗಳಿಗೆ ಮಾತನಾಡಿ, ವೇಗವರ್ಧಿತ ಪದವಿ ಕಾರ್ಯಕ್ರಮವು ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್‌ಗೆ ಹೆಚ್ಚುವರಿ ಕ್ರೆಡಿಟ್‌ಗಳನ್ನು ಗಳಿಸುವ ಮೂಲಕ ಕಡಿಮೆ ಸಮಯದಲ್ಲಿ ಮೂರು ವರ್ಷಗಳ ಅಥವಾ ನಾಲ್ಕು ವರ್ಷಗಳ ಪದವಿಯನ್ನು ಪೂರ್ಣಗೊಳಿಸಲು ಅನುವು…

ಡಿ.15 ರಂದು ತಾಲ್ಲೂಕು ಮಟ್ಟದ ಕೃಷಿಕ ಸಮಾಜ ಚುನಾವಣೆ

ಡಿ.15 ರಂದು ತಾಲ್ಲೂಕು ಮಟ್ಟದ ಕೃಷಿಕ ಸಮಾಜ ಚುನಾವಣೆ

ಬೀದರ, ನವೆಂಬರ್.30:- ದಿನಾಂಕ: 15-12-2024 ರಂದು ನಡೆಯುವ ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಗೆ ನಾಮಪತ್ರಗಳನ್ನು ದಿನಾಂಕ: 30-11-2024 ರಿಂದ 06-12-2024ರ ವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಬೀದರ ಅವರಿಂದ ಪಡೆಯಬಹುದಾಗಿದೆ. ದಿನಾಂಕ: 15-12-2024 ರಂದು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಬೆಳಗ್ಗೆ 08:00 ಗಂಟೆಯಿAದÀ ಮಧ್ಯಾಹ್ನ 03:00 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಬೀದರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರವಾದ ಮಾಹಿತಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ…

ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ ಜಾತ್ರಾ ಮಹೋತ್ಸವಕ್ಕೆ ವಿಶೇಷ ಬಸ್ಸುಗಳ ಕಾರ್ಯಾಚರಣೆ: ಸದುಪಯೋಗ ಪಡೆದುಕೊಳ್ಳಲು ಮನವಿ

ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ ಜಾತ್ರಾ ಮಹೋತ್ಸವಕ್ಕೆ ವಿಶೇಷ ಬಸ್ಸುಗಳ ಕಾರ್ಯಾಚರಣೆ: ಸದುಪಯೋಗ ಪಡೆದುಕೊಳ್ಳಲು ಮನವಿ

ಬೀದರ, ನವೆಂಬರ್.30 :- ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ (ಖಂಡೋಬಾ) ಖಾನಾಪೂರ ಜಾತ್ರಾ ಮಹೋತ್ಸವ ದಿನಾಂಕ: 01-12-2024 ರಿಂದ 31-12-2024 ರವರೆಗೆ ಜರುಗಲಿವೆ. ಕಾರಣ ಜಾತ್ರೆಯ ಮಹತ್ವದ ದಿವಸಗಳಾದ ದಿನಾಂಕ: 01-12-2024, 08-12-2024, 15-12-2024, 22-12-2024 ಹಾಗೂ 29-12-2024 ದಿನಗಳಂದು ಹಾಗೂ ಇನ್ನಿತರ ಎಲ್ಲಾ ದಿನಗಳಂದು ಆಗಮಿಸುವ ಭಕ್ತಾದಿಗಳಿಗೆ ವಿಶೆಷ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಕಾರಣ ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ (ಖಂಡೋಬಾ) ಖಾನಾಪೂರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ…

ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರಸಹಕಾರದೊಂದಿಗೆ ಯಶಸ್ಸು ಸಾಧಿಸಿದೆ-ರಂಗನಾಥ ಪಲ್ಲೇದ್

ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ
ಸಹಕಾರದೊಂದಿಗೆ ಯಶಸ್ಸು ಸಾಧಿಸಿದೆ-ರಂಗನಾಥ ಪಲ್ಲೇದ್

ಬೀದರ, ನವೆಂಬರ್.30:- ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದೆ ಹಾಗೂ ಅಕ್ಷರ ಫೌಂಡೇಶನ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಇಲಾಖೆಯ ಸಹಕಾರದೊಂದಿಗೆ ಸಕ್ರೀಯವಾಗಿ ತೊಡಗಿಸಿಕೊಂಡಿರುವುದು 2024-25ನೇ ವರ್ಷಕ್ಕೆ 25 ವರ್ಷಗಳು ಪೂರೈಸಲಿದೆ ಎಂದು ಅಕ್ಷರ ಫೌಂಡೇಶನ್ ವಿಭಾಗೀಯ ವ್ಯವಸ್ಥಾಪಕರಾದ ರಂಗನಾಥÀ ಪಲ್ಲೇದ್À ಹೇಳಿದರು. ಅವರು ಗುರುವಾರ ಡಯಟ್ ಸಭಾಂಗಣ ನೌಬಾದ ಬೀದರದಲ್ಲಿ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕೀರಣ 2024-25 ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಶಾಲಾ ಸಿಕ್ಷಣ…

ಕಿರಣ ಗಣಪತಿ ವಲ್ಲೇಪುರೆ ಅವರಿಗೆ ‘ಡಾಕ್ಟರೇಟ್’ ಪದವಿ

ಕಿರಣ ಗಣಪತಿ ವಲ್ಲೇಪುರೆ ಅವರಿಗೆ ‘ಡಾಕ್ಟರೇಟ್’ ಪದವಿ

ಬೀದರ.30 ಡಿಸೆಂಬರ್24:-ಔರಾದ ತಾಲೂಕಿನ ನಾಗೂರ(ಬಿ) ಗ್ರಾಮದ ಕಿರಣ ಗಣಪತಿ ವಲ್ಲೇಪುರೆ ಅವರು ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಜಗನ್ನಾಥ ಹೆಬ್ಬಾಳೆ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿ ಮಂಡಿಸಿದ ‘ಯು.ಆರ್.ಅನಂತಮೂರ್ತಿ ಮತ್ತು ಚಂದ್ರಶೇಖರ ಕಂಬಾರ ಅವರ ಕಾದಂಬರಿಗಳ ತೌಲನಿಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ.