ಭಾರತೀಯ ರೈಲ್ವೆಯು ಚಾರ್ ಧಾಮ್ ಯಾತ್ರೆಗಾಗಿ ಭಾರತ್ ಗೌರವ್ ಡಿಲಕ್ಸ್ ರೈಲನ್ನು ಪರಿಚಯಿಸಿದೆ. ಈ ರೈಲು ಬದರಿನಾಥ್, ಜೋಶಿಮಠ, ಋಷಿಕೇಶ, ಪುರಿ, ಕೋನಾರ್ಕ್, ರಾಮೇಶ್ವರಂ ಮತ್ತು ದ್ವಾರಕಾದಂತಹ ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಕಾಶಿ ವಿಶ್ವನಾಥ, ಭೀಮಶಂಕರ್ ಮತ್ತು ತ್ರಯಂಬಕೇಶ್ವರದಂತಹ ಇತರ ಧಾರ್ಮಿಕ ಸ್ಥಳಗಳನ್ನು ಒಳಗೊಂಡಿದೆ. ಈ ರೈಲು ಒಟ್ಟು 8 ಸಾವಿರ 425 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ.
ವಿಶೇಷ ರೈಲು ಈ ತಿಂಗಳ 27 ರಂದು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ಹೊರಟು 17 ದಿನಗಳಲ್ಲಿ ದೇಶದ ನಾಲ್ಕು ಧಾಮಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಕ್ರಮಿಸಲಿದೆ ಎಂದು ನಮ್ಮ ವರದಿಗಾರರು ವರದಿ ಮಾಡಿದ್ದಾರೆ. ರೈಲಿನ ಟಿಕೆಟ್ಗಳನ್ನು ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ನೀಡಲಾಗುತ್ತದೆ, ಇದನ್ನು IRCTC ವೆಬ್ಸೈಟ್ನಲ್ಲಿ ಬುಕ್ ಮಾಡಬಹುದು.
