Home » ಲೈವ್ ನ್ಯೂಸ್ » ರಾಜ್ಯ ಸರ್ಕಾರ 2026ನೇ ಸಾಲಿನ ‘ಜಯಂತಿ ಆಚರಣೆ’ಗಳ ಪಟ್ಟಿ

ರಾಜ್ಯ ಸರ್ಕಾರ 2026ನೇ ಸಾಲಿನ ‘ಜಯಂತಿ ಆಚರಣೆ’ಗಳ ಪಟ್ಟಿ

Facebook
X
WhatsApp
Telegram

ಬೆಂಗಳೂರು.02.ಜನವರಿ.26: 2026ನೇ ಸಾಲಿನ ಜನವರಿಯಿಂದ ಡಿಸೆಂಬರ್ ಮಾಹೆಯಲ್ಲಿ ಆಚರಿಸಬೇಕಾದ ಜಯಂತಿಗಳ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು ಸದರಿ ಜಯಂತಿಗಳನ್ನು ಉಲ್ಲೇಖಿತ ಮಾರ್ಗಸೂಚಿಯನ್ವಯ ಆಚರಣೆ ಮಾಡಬೇಕೆಂದು ಈ ಮೂಲಕ ಕೋರಿದೆ.

2026ನೇ ಸಾಲಿನ ‘ಜಯಂತಿ ಆಚರಣೆ’ಗಳ ಪಟ್ಟಿ & ಜಯಂತಿಗಳ ಆಚರಣೆಗೆ ಮಾರ್ಗ ಸೂಚಿಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಯಂತಿಗಳನ್ನು ಅರ್ಥ ಪೂರ್ಣವಾಗಿ ಆಚರಿಸುವುದು.


ಜಿಲ್ಲಾಧಿಕಾರಿಗಳು ಅಥವಾ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ಜಯಂತಿಗೆ ಸಂಬಂಧಿಸಿದಂತೆ ಎಲ್ಲಾ ಸಮಾಜಗಳ ಮುಖಂಡರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಪೂರ್ವ ಸಿದ್ಧತೆ ಮಾಡಿಕೊಳ್ಳವುದು.


ಆಹ್ವಾನ ಪತ್ತಿಕ, ಕರಪತ್ರ, ಬ್ಯಾನರ್, ವೇದಿಕೆ ವಿನ್ಯಾಸ, ಭಾವಚಿತ್ರದ ವ್ಯವಸ್ಥೆ, ಹೂವಿನ ಹಾರ, ಪೂಜಾ ವ್ಯವಸ್ಥೆ, ಫೋಟೋ, ವೇದಿಕೆಗೆ ಸಂಬಂಧಿಸಿದ ಇತರೆ ವ್ಯವಸ್ಥೆಯನ್ನು ಜಯಂತಿಯ ಅನುದಾನದಿಂದ ಭರಿಸುವುದು. ಸ್ವಯಂ ಪ್ರೇರಿತರಾಗಿ ಪ್ರಾಯೋಜಕರು ಮುಂದೆ ಬಂದಲ್ಲಿ ಸದರಿಯವರ ಸೇವೆಯನ್ನು ಪಡೆಯಬಹುದಾಗಿದೆ.


ವೇದಿಕೆ ಕಾರ್ಯಕ್ರಮದಲ್ಲಿ ಆಯಾ ಜಯಂತಿಯ ಮಹನೀಯರ ಜೀವನ-ಸಾಧನೆ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಏರ್ಪಡಿಸುವುದು.


ವೇದಿಕೆಯ ಗಣ್ಯರಿಗೆ ಹೂಗುಚ್ಚದ ಬದಲಿಗೆ ಆಯಾ ಜಯಂತಿ ಮಹನೀಯರ ಕುರಿತ ಪುಸ್ತಕಗಳನ್ನು ನೀಡುವುದು ಸೂಕ್ತವಾಗಿರುತ್ತದೆ.


ಆಯಾ ಜಯಂತಿಯ ಆಹ್ವಾನ ಪತ್ರಿಕೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಯಂತಿ/ಉತ್ಸವ ಸಮಿತಿ ಅವರ ಸೂಚನೆ ಅನ್ವಯ ಶಿಷ್ಠಾಚಾರಕ್ಕೆ ಅನುಗುಣವಾಗಿ ಅತ್ತಿಥಿ ಗಣ್ಯರನ್ನು ಆಹ್ವಾನಿಸುವುದು.


ಜಯಂತಿಯ ಆಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಂದ (ಮಹಾನಗರಪಾಲಿಕೆಗಳು, ನಗರಸಭೆ, ಪಟ್ಟಣ, ಪಂಚಾಯತಿಗಳಲ್ಲಿ) ಎಲ್ಲಾ ಸಮಾಜಗಳ ಮುಖಂಡರು ಮತ್ತು ಸಂಘ ಸಂಸ್ಥೆಯ ಸಹಕಾರ ಪಡೆಯುವುದು.


ಪೂರ್ವಭಾವಿ ಸಭೆಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯಕ್ರಮವನ್ನು ರೂಪಿಸುವುದು.


ಪೂರ್ವಭಾವಿ ಸಭೆಗಳಲ್ಲಿ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗುವ ನಿರ್ಣಯದಂತೆ ಜಯಂತಿಯನ್ನು ಮಹನೀಯರ ಸಂದೇಶವನ್ನು ಸಮಾಜಕ್ಕೆ ತಲುಪಿಸುವಂತೆ ಆಚರಿಸುವುದು.


ಜಯಂತಿಗಳನ್ನು ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವುದು ಜಿಲ್ಲಾಡಳಿತದ ಪೂರ್ಣ ಜವಾಬ್ದಾರಿಯಾಗಿರುತ್ತದೆ.


ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಪ್ರಚುರ ಪಡಿಸಬೇಕು.


ಪ್ರತಿ ಜಯಂತಿಯ ಸಂದರ್ಭದಲ್ಲಿ ವಿಶೇಷವಾಗಿ ಆ ಮಹಾಪುರುಷರ ವಿಶೇಷತೆಗಳನ್ನು ತಿಳಿಪಡಿಸುವಂತೆ ಅನುರೂಪವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು.


ಪ್ರತಿ ಆಚರಣೆ ಮುಗಿದ ಒಂದು ತಿಂಗಳ ಒಳಗಾಗಿ ಕಾರ್ಯಕ್ರಮದ ವರದಿ ಮತ್ತು ದಾಖಲೆಗಳನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರನ್ನು ಆಹ್ವಾನಿಸುವ ಸಂದರ್ಭದಲ್ಲಿ ಎಲ್ಲಾ ಕಲಾವಿದರಿಗೂ ಅವಕಾಶ ದೊರೆಯುವಂತೆ ಅವರ್ತನ ಪದ್ಧತಿಯಲ್ಲಿ ಕಲಾ ತಂಡಗಳನ್ನು ಗುರುತಿಸಿ ಅವಕಾಶ ನೀಡುವುದು.


ಕಾರ್ಯಕ್ರಮದ ಆಹ್ವಾನ ಪತ್ರಿಕೆ, ವೇದಿಕೆ ಮತ್ತು ಇತರ ಪ್ರಚಾರ ಸಾಮಾಗ್ರಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರನ್ನು ಕಡ್ಡಾಯವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳುವುದು.


ಜಯಂತಿಗಳಿಗೆ ಮಂಜೂರಾಗಿ ಬಿಡುಗಡೆಯಾದ ಹಣವನ್ನು ಅದೇ ಉದ್ದೇಶಕ್ಕಾಗಿಯೇ ಬಳನತಕ್ಕದ್ದು. ಹಾಗೆ ಅಯಾ ಆರ್ಥಿಕ ವರ್ಷದಲ್ಲಿ ಬಳಸದೆ ಉಳಿದ ಹಣವನ್ನು ಸರ್ಕಾರಕ್ಕೆ ಅಧ್ಯರ್ಪಣೆ ಮಾಡಿ ಸಹಾಯಕ ನಿರ್ದೇಶಕರು ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology