ಚಾಮರಾಜನಗರ.20.ಮಾರ್ಚ.25:- ಚಾಮರಾಜನಗರ ಜಿಲ್ಲೆಯ ಯಳಂದೂರು.20.ಮಾರ್ಚ.25:- ವಡೆಗೆರೆ ಸಮೀಪ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ 130 ಗ್ರಾಂ ಒಣ ಗಾಂಜಾವನ್ನು ವಶಪಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಬಿಳಿಗಿರಿರಂಗನಬೆಟ್ಟದಿಂದ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಯಳಂದೂರು ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಾಜುದ್ದೀನ್ ರವರ ನೇತೃತ್ವದ ತಂಡ ವಡಗೆರೆ ಸಮೀಪ ದಾಳಿಮಾಡಿ 138 ಗ್ರಾಂ ಒಣಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಬಿಳಿಗಿರಿರಂಗನ ಬೆಟ್ಟದ ಸೀಗೆಬೆಟ್ಟ ಪೋಡಿನ ಕುಮಾರ ಎಂಬುವನಾಗಿದ್ದಾನೆ ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಅಮೃತೇಶ್, ಸಮಾಜ ಕಲ್ಯಾಣ ಇಲಾಖೆಯ ವಿಜಯ್ , ಪೋಲೀಸ್ ಸಿಬ್ಬಂದಿಗಳಾದ ಜಡೇಸ್ವಾಮಿ, ಶಾಕೃನಾಯಕ್, ನಾಗೇಂದ್ರ, ವಾಸುದೇವ್ ರವರು ಹಾಜರಿದ್ದರು.
_ಜಿ ಪ್ರಸನ್ನ ಕುಮಾರ್ ಕಿತ್ತೂರ