ಚಾಮರಾಜನಗರ .02.ಏಪ್ರಿಲ್.25:-ಯಳಂದೂರು: ಹೊನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಹೆಚ್. ಎಂ. ಗುರುಪ್ರಸಾದ್, ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆ
ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಆರ್. ಪುಟ್ಟಬಸವಯ್ಯಹಾಗೂ ಉಪಾಧ್ಯಕ್ಷರಾಗಿದ ಭಾಗ್ಯಮ್ಮ ರವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಹೆಚ್. ಎಂ. ಗುರುಪ್ರಸಾದ್ ಒಬ್ಬರೇ ಹಾಗೂ ಉಪಾಧ್ಯಕ್ಷರಸ್ಥಾನಕ್ಕೆ ನೇತ್ರಾವತಿ ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ರವರು ಚುನಾವಣೆ ಅಧಿಕಾರಿಯಾಗಿ ಭಾಗವಹಿಸಿ ಚುನಾವಣೆ ಪ್ರಕ್ರಿಯೆಗಳನ್ನು ಮುಗಿಸಿ ನಂತರ ಹೆಚ್. ಎಂ. ಗುರುಪ್ರಸಾದ್
ರವರು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿಹಾಗೂ ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾದರೆಂದು ಘೋಷಣೆ ಮಾಡಿದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್. ಎಂ. ಗುರುಪ್ರಸಾದ್ ಅವರು ಮಾತನಾಡಿ ನನಗೆ ದೊರಕಿರುವ ಅಲ್ಪ ಪ್ರಮಾಣದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಾಜಿ ಅಧ್ಯಕ್ಷ ಹ ಆರ್ ಪುಟ್ಟ ಬಸವಯ್ಯ, ಭಾಗ್ಯಮ್ಮ, ಇಂದಿರಾ, ಕೆ ಚಿನ್ನಸ್ವಾಮಿ,ಶಂಕರ್ ರೂಪೇಶ್, ಶಿವಪ್ರಕಾಶ್, ನಾಗರತ್ನಮ್ಮ, ಅನಿತ ನಿರಂಜನ್, ರಾಜೇಶ್, ಜಯಮ್ಮ, ಜಿ ನಾಗರಾಜು, ರಾಧ ಮಹದೇವಸ್ವಾಮಿ, ರಾಧ, ಕುಮಾರ್, ಮುಖಂಡರಾದ ರೇವಣ್ಣ, ತಾಪಂ ಸದಸ್ಯ ನಿರಂಜನ್, ರಾಜಶೇಖರ್, ಹೊನ್ನೂರು ಪ್ರಕಾಶ್, ಸುರೇಶ್,
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರಂಜನ್ ಕುಮಾರ್ , ಕಾರ್ಯದರ್ಶಿ ಲಕ್ಷ್ಮಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿಹಾಜರಿದ್ದರು.
