ಚಿತ್ರ ೧೦ ಬೀದರ್೧
ಬೀದರ್ ತಾಲೂಕಿನ ಬಗದಲ್ ಗ್ರಾಮದಲ್ಲಿ ನಡೆದ ತಿಂಗಳ ಅರಿವಿನ ಜ್ಯೋತಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
=====================================
ಬಗದಲ್ ಗ್ರಾಮದಲ್ಲಿ ಕಾರ್ಯಕ್ರಮ || ಪಟ್ಟದ್ದೇವರು ಹೇಳಿಕೆ
ಮಹಿಳಾ ಸಮಾನತೆ ಸಾರಿದ ಬಸವಾದಿ ಶರಣರು
ಬೀದರ್, ೧೨ನೆಯ ಶತಮಾನದಲ್ಲಿ ಬಸವಾದಿ ಶರಣರು ಸ್ತ್ರೀಯರಿಗೆ ಸ್ವಾತಂತ್ರ್ಯ ಕಲ್ಪಿಸಿ ಸಮಾನತೆ ತಂದು ಕೊಟ್ಟರು ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಬಗದಲ್ ಗ್ರಾಮದಲ್ಲಿ ಆಯೋಜಿಸಿದ್ದ ತಿಂಗಳ ಅರಿವಿನ ಜ್ಯೋತಿ ಕಾರ್ಯಕ್ರಮದ ವಾರ್ಷಿಕೋತ್ಸವ ಮತ್ತು ಅಂತರ ರಾಷ್ಟಿçÃಯ ಮಹಿಳಾ ದಿನಾಚರಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಸ್ತ್ರೀ ಕುಲಕ್ಕೆ ದೈವತ್ವದ ಸ್ಥಾನಮಾನ ಕೊಟ್ಟ ಬಸವಾದಿ ಶರಣರ ಆದರ್ಶಗಳು ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್ ಮಾತನಾಡಿ, ಇಂದು ಸ್ತ್ರೀ ಸಮಾನತೆಗೆ ಆದ್ಯತೆ ಸಿಕ್ಕಿದೆ ಅಂದರೆ ಇದಕ್ಕೆ ಮೂಲ ಕಾರಣ ೧೨ನೆಯ ಶತಮಾನದ ಬಸವಾದಿ ಶರಣರು ಎಂದು ತಿಳಿಸಿದರು.
ಇಂದುಮತಿ ಅಕ್ಕ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಮನ್ನಾಎಖ್ಖೆಳ್ಳಿಯ ಬಸವ ಮಹಾಮಠದ ಮೈತ್ರಾದೇವಿ ತಾಯಿ ಸಮ್ಮುಖ ವಹಿಸಿದ್ದರು ಕುಮಾರಿ ಚಿನ್ಮಯಿ ದೀಪ್ತಿ ಅವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನ್ಮಾನ :
ಇದೇವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಇಂದುಮತಿ ಕಾಶಿನಾಥ ಕೋಟೆ,
ನಾಗಶೆಟ್ಟಿ ಚಾಮಾ, ಶರಣಪ್ಪ ಪಿನ್ನಾ, ಶಾಂತಪ್ಪ ಧಡಿಮಾಳ, ವಿದ್ಯಾವತಿ ಸಜ್ಜನಶೆಟ್ಟಿ, ಕರುಣಾ ಶಟಕಾರ, ಸುಗಮ್ಮ ನಾವದಗೇರೆ ಸೇರಿದಂತೆ ಹಲವರು ಇದ್ದರು. ಸಂಗೀತ ಕಲಾವಿದೆ ನಿವೇದಿತಾ ಸ್ವಾಮಿ ವಚನ ಗಾಯನ ನಡೆಸಿ ಕೊಟ್ಟರು.
ಶಿವಲೀಲಾ ಚಟ್ನಹಳ್ಳಿ ಸ್ವಾಗತಿಸಿದರು. ಸಂಗೀತ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಅಂಬುಜಾ ಹಮ್ಮಾ ವಂದಿಸಿದರು.