19/04/2025 5:48 PM

Translate Language

Home » ಲೈವ್ ನ್ಯೂಸ್ » ಸಿದ್ದರಾಮೇಶ್ವರರಿಂದ ಸಮಾಜಮುಖಿ ಕೆಲಸ: ಸಾಹಿತಿ ರಾಮಲಿಂಗ ಬಿರಾದಾರ

ಸಿದ್ದರಾಮೇಶ್ವರರಿಂದ ಸಮಾಜಮುಖಿ ಕೆಲಸ: ಸಾಹಿತಿ ರಾಮಲಿಂಗ ಬಿರಾದಾರ

Facebook
X
WhatsApp
Telegram

ಬೀದರ.12.ಫೆ.25:- ಇಂದುವಚನಾಮೃತ ಕನ್ನಡ ಸಂಘದಿಂದ ಭಾನುವಾರ ಸಂಜೆ ಶಿವಯೋಗಿ ಸಿದ್ದರಾಮೇಶ್ವರರಿಗೆ ಮಾನವ ಕುಲದ ಉದ್ಧಾರದ ಬಗ್ಗೆ ಅಪಾರ ಕಾಳಜಿ ಇತ್ತು.

ಹೀಗಾಗಿಯೇ ಅನೇಕ ಕೆರೆಗಳನ್ನು ಕಟ್ಟಿಸಿ ಸಮಾಜಮುಖಿ ಕೆಲಸ ಮಾಡಿದ್ದರು’ ಎಂದು ಸಾಹಿತಿ ರಾಮಲಿಂಗ ಬಿರಾದಾರ ಹೇಳಿದರು.

ವಚನಾಮೃತ ಕನ್ನಡ ಸಂಘದಿಂದ ಭಾನುವಾರ ಸಂಜೆ ನಗರದಲ್ಲಿ ಏರ್ಪಡಿಸಿದ್ದ ಸಿದ್ದರಾಮೇಶ್ವರರ ಕುರಿತ ಉಪನ್ಯಾಸ, ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಮನುಷ್ಯರಷ್ಟೇ ಅಲ್ಲ, ಪಶು, ಪಕ್ಷಿಗಳ ಬಗ್ಗೆಯೂ ಕಳಕಳಿ ಹೊಂದಿದ್ದರು ಎಂದರು.

ಕವಯತ್ರಿ ಸಾವಿತ್ರಿ ಮರೂರಕರ್ ಮಾತನಾಡಿ, 12ನೇ ಶತಮಾನದ ಶರಣರು ಬಸವಣ್ಣನವರ ಮಾರ್ಗದರ್ಶನದಲ್ಲಿ ಎಲ್ಲ ವರ್ಗದವರ ಕಲ್ಯಾಣಕ್ಕೆ ಶ್ರಮಿಸಿದ್ದರು. ವಚನ ಸಾಹಿತ್ಯ ರಚಿಸಿದ್ದರು ಎಂದು ಹೇಳಿದರು.

ಲೇಖಕಿಯರಾದ ರೇಣುಕಾ ಎನ್.ಬಿ., ಮಹಾನಂದಾ ಮಡಕಿ, ವೀರಶೆಟ್ಟಿ ಬಾವಗೆ, ಸೂರ್ಯಕಲಾ ಹೊಡಮನಿ, ಶ್ರೀದೇವಿ ಸೋಮಶೆಟ್ಟಿ, ಮಲ್ಲೇಶ್ವರಿ ಗಂದಿಗುಡೆ, ರಾಜೇಶ್ವರಿ ಹೂಗಾರ, ವಿದ್ಯಾವತಿ ಬಲ್ಲೂರ, ಸುನೀತಾ ದಾಡಗೆ, ಶ್ರೀದೇವಿ ಪಾಟೀಲ, ನಂದಿನಿ ಮಠಪತಿಯವರು ಸಿದ್ದರಾಮೇಶ್ವರರ ಕುರಿತ ಕವಿತೆಗಳನ್ನು ಓದಿದರು.

ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ಮ್ಯೂಸಿಕ್ ಅಕಾಡೆಮಿಯವರು ನಾಡಗೀತೆ ಹಾಡಿದರು. ಜಯದೇವಿ ಯದಲಾಪೂರೆ ನಿರೂಪಿಸಿದರು. ಅಲಕಾವತಿ ಹೊಸದೊಡ್ಡೆ ಸ್ವಾಗತಿಸಿದರು. ಗಂಗಶೆಟ್ಟಿ ಖಾನಪೂರ ವಂದಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!