ಕಮಲನಗರ.01.ಮಾರ್ಚ್.25: ಕಮಲನಗರ ತಾಲೂಕಿನ ಬೆಂಬ್ರಾ ಗ್ರಾಮದಲ್ಲಿ ರೈತ ನರಸೀಂಗರಾವ ನಾಮದೇವೆರಾವ ಲೋಣೆ (44) ಸಾ: ಬೆಂಬ್ರಾ ಇಂದು ದಿನಾಂಕ 27/03/2025 ರಂದು ಬೆಳಗೆ,, 6 ಗಂಟೆಗೆ ಹೊಲಕ್ಕೆ ಹೊಗಿ ಬರುತ್ತೆನೆ ಅಂತ ಹೇಳಿ ಮನೆಯಿಂದ ಹೊಗಿದರು ನಂತರ ನಾನು ನಮ್ಮ ಭಾಗಾದಿ ಅನುಸಯಾ ಕೂಡಿ ಹೊಲಕ್ಕೆ ಹೋಗಿದೆವು ನಾವು ಹೊಲಕ್ಕೆ ಹೋಗುವಷ್ಟರಲ್ಲಿ ನನ್ನ ಗಂಡ ನಮ್ಮ ಹೊಲದಲ್ಲಿ.. ಇದ್ದ ಮಾವಿನ ಮರಕ್ಕೆ ಹಗ್ನ,ದಿಂದ ನೇಣು ಹಾಕಿಕೊಂಡು ಜೊತು ಬಿದಿದನ್ನು ನೋಡಿ ಇನ್ನು ಜೀವ ಇರಬಹುದು ಅಂತ ಇನ್ನರೂ ಕೂಡಿ ಮರದಿಂದ ಇಳಿಸಿ ನೋಡಲು ಮೃತ ಪಟ್ಟಿದರು.
ಮಕ್ಕಳು:- 1) ಒಂ 15 ವರ್ಷ, 2) ಫಾನೇಶ್ವರ 13 ವರ್ಷದವನು ಇರುತ್ತಾನೆ ನಮ್ಮಗೆ ನಮ್ಮೂರ ಶೀವಾರವ ಹೋಲ ಸ.ನಂ 29 ರಲ್ಲಿ.. 3 ಎಕ್ಕರೆ ಜಮೀನು ಇದ್ದು ಅಲ್ಲದೆ ನನ್ನ ಅತ್ತೆ ಮಾವ ಕೊಡಾ ನಮ್ಮ ಹತ್ರಾನೆ ಇರುವುದರಿಂದ ಅವರ ಹೆಸರಿನಲಿ ಇರುವ 2 ಎಕರೆ ಜಮಿನು ಸಾಗುವಳಿ ನನ್ನ ಗಂಡ ಮಾಡುತ್ತಿದ್ದರು.
ನನ್ನ ಗಂಡ ಹೊಲದ ಮೇಲೆ ಮಾಡಿದ ಸಾಲಾ ಹೇಗೆ ತಿರಿಸಬೇಕು ಎಂಬ ಚಿಂತೆಯಲಿ.. ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ವರ್ಷದಿಂದ ವರ್ಷಕ್ಕೆ ಸಾಲದ ಬಡ್ಡಿ ಹೆಚ್ಚಾಗುತ್ತಿತ್ತು. ಮತ್ತೊಂದೆಡೆ ತಮ್ಮ ಜಮೀನಿನಲ್ಲಿ ಸಾಲ ಮಾಡಿ ಬೆಳೆದಿದ್ದ ಬೆಳೆಗಳು ಸರಿಯಾದ ದರ ಸಿಗದೆ ಪ್ರತಿ ಬಾರಿಯೂ ನಷ್ಟದ ಸುಳಿಗೆ ಸಿಲುಕಿದ್ದರು. ಇದರಿಂದ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣ್ ಆಗಿದ್ದಾರೆ.
ಸಂಬಂಧ ಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.