ಬೀದರ.20.ಫೆಬ್ರುವರಿ.25:-ಸಾರ್ವಜನಿಕರು ಸಲ್ಲಿಸಿರುವ ಎಂಟು ಅರ್ಜಿಗಳನ್ನು ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಬಗೆಹರಿಸುವಂತೆ ಕರ್ನಾಟಕ ಲೋಕಾಯುಕ್ತ ಕಲಬುರಗಿಯ ಎಸ್.ಪಿ. ಉಮೇಶ ಬಿ.ಕೆ.ಸೂಚಿಸಿದರು.
ಅವರು ಇಂದು ಹುಮನಾಬಾದ ತಹಸೀಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುಮನಾಬಾದ ತಾಲ್ಲೂಕಿನ ಚಿನಕೇರಾ ಗ್ರಾಮದ ನಿವಾಸಿಯಾದ ರುಕ್ಮೀಣಿಬಾಯಿ ಶಂಕರ ಸುಮಾರು ತಿಂಗಳಿAದ ರೇಷನ್ ವಿತರಣೆ ಮಾಡದಿರುವ ಕುರಿತು ಹಾಗೂ ವೃದ್ದಾಪ್ಯ ವೇತನ ಕಡಿಮೆ ನೀಡುತ್ತಿರುವ ಬಗ್ಗೆ ಅಳಲು ತೊಡಿಕೊಂಡಾಗ ಸಂಬAಧಪಟ್ಟ ಅಧಿಕಾರಿಗಳು ನಿಯಮದಂತೆ ರೇಷನ್ ವಿತರಣೆ ಮಾಡುವಂತೆ ಸೂಚಿಸಿದಾಗ ಕೂಡಲೇ ರೇಷನ್ ವಿತರಣೆ ಮಾಡಲಾಯಿತು.
ಈ ಸಮಯದಲ್ಲಿ ಎರಡು ಅರ್ಜಿಗಳಿಗೆ ಫಾರಂ ನಂಬರ 1 ಮತ್ತು 2 ಅರ್ಜಿ ನೊಂದಾಯಿಸಿಕೊಳ್ಳಲಾಯಿತ್ತು.
ಈ ಸಂದರ್ಭದಲ್ಲಿ ಬೀದರ ಕ.ಲೋ. ಡಿ.ಎಸ್.ಪಿ. ಹಣಮಂತರಾಯ, ಬೀದರ ಕ.ಲೋ. ಪಿ.ಐ.ಬಾಬಾಸಾಹೇಬ ಪಾಟೀಲ, ಉದಂಡಪ್ಪ, ಹುಮನಾಬಾದ ತಹಸೀಲ್ದಾರರು, ತಾಲ್ಲೂಕ ಮಟ್ಟದ ಅಧಿಕಾರಿಗಳು, ಶಾಂತಲಿAಗಪ್ಪಾ, ಅಡೆಪ್ಪಾ, ಭರತ, ಕಿಶೋರ, ನಾಗಶೆಟ್ಟಿ, ಹಾತಿಸಿಂಗ ಸೇರಿದಂತೆ ಇತರರು ಉಪಸ್ಥಿತರಿದ್ದರು