11/06/2025 6:04 AM

Translate Language

Home » ಲೈವ್ ನ್ಯೂಸ್ » ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಪ್ರೌಢಶಾಲಾ ಇಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಭೇಟಿ.!

ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಪ್ರೌಢಶಾಲಾ ಇಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಭೇಟಿ.!

Facebook
X
WhatsApp
Telegram

ಬಸವಕಲ್ಯಾಣ.20.ಮೇ.25:- ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಪ್ರೌಢಶಾಲಾ ವಿಭಾಗ ಬಸವ ಕಲ್ಯಾಣದಲ್ಲಿ ಇಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದರು.

ಬೇಸಿಗೆ ಶಿಬಿರ ಹಾಗೂ ಮೇ /ಜೂನ್-2025ರ  ಎಸ್ ಎಸ್ ಎಲ್ ಸಿ ಪರೀಕ್ಷೆ -2 ಗೆ ನೊಂದಣಿಯಾದ ಮಕ್ಕಳ ವಿಶೇಷ ತರಗತಿ ವೀಕ್ಷಣೆ ಮಾಡುತ್ತಾ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ನ್ಯೂಟನ್ ಮೋದಲನೇ, ಎರಡನೇ ಮತ್ತು ಮೂರನೇ ನಿಯಮಗಳ ಕುರಿತು ಮಕ್ಕಳಿಗೆ ಪ್ರಶ್ನೆ ಕೇಳಿದರು.

ಹಾಜರಿದ್ದ ವಿದ್ಯಾರ್ಥಿ ಉತ್ತರ ನೀಡಿದರು .ಮಕ್ಕಳು ಈ ಶಿಬಿರ ಮುಖಾಂತರ ಹೆಚ್ಚಿನ ಜ್ಞಾನವನ್ನು ಪಡೆದುಕೋಳ್ಳಬೇಕೆಂದು ನುಡಿದರು.. ತದನಂತರ ಪ್ರಾಯೋಗಿಕವಾಗಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಯಿಂದ  ರಾಕೇಟ್ ಹಾರಿಸುವುದನ್ನು ವೀಕ್ಷಿಸಿದರು .

ಬಸವಕಲ್ಯಾಣ ತಾಲೂಕಿನ ಸಹಾಯಕ ಆಯುಕ್ತರು ಹಾಗೂ ವಿಭಾಗಿಯ ದಂಡಾಧಿಕಾರಿಗಳಾದ ಶ್ರೀ ಮುಕುಲ್ ಜೈನ್ ಮಕ್ಕಳು ತಯ್ಯಾರಿಸಿದ ರಾಕೇಟ್ ಗಳು , ಕೀರಿಟ್ ಗಳನ್ನು ವೀಕ್ಷಿಸಿದರು.

ಈ ಭೇಟೀಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಆಯುಕ್ತರಾದ ಶ್ರೀ ಜಗನ್ನಾಥ ರೆಡ್ಡಿ, ಬಸವಕಲ್ಯಾಣ ತಾಲೂಕಿನ ತಹಶೀಲ್ದಾರರು ಹಾಗೂ ದಂಡಾಧಿಕಾರಿಗಳಾದ ಡಾ.ದತ್ತಾತ್ರೇ ಗಾದಾ , ನಗರ ಸಭೆಯ ಪೌರಾಯುಕ್ತರಾದ ರಾಜು ಬಣಕರ್, ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದಿಲೀಪ ಕುಮಾರ ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯಾ ರುದನೂರ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪ್ರಭಾಕರ ಕಳಮಾಸೆ, ನಗರ ವೈದ್ಯಾಧಿಕಾರಿ ಗಳಾದ ಡಾ.ಅಪರ್ಣಾ, ಪ್ರಭಾರಿ ಉಪ ಪ್ರಾಂಶುಪಾಲರಾದ ಸಂಜೀವಕುಮಾರ ನಡುಕರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಾಲಿವಾನ ಬಿರಾದಾರ, ಸಮೂಹ ಸಂಪನ್ಮೂಲ ವ್ಯಕ್ತಿ ಗಿರಿಧರ ಧನ್ನೂರೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಮಹೇಶ ಬೂವಿ, ಶಿಕ್ಷಕರಾದ ವಿರೇಶ ಹೆಗ್ಗೆ,ರಾಮ ಪಾಟೀಲ್, ಎಂಡಿ ಶರೀಫ್, ಪ್ರವೀಣ ಸೊಮವಂಶಿ, ವಿಜ್ಞಾನ ಸಹಾಯಕರಾದ ಮಹಾದೇವ ಅಲದೇಪ್ಪ , ದ್ವಿತೀಯ ದರ್ಜೆ ಸಹಾಯಕರಾದ ಮಂಗಲಾ, ಸುನೀತಾ ಕುಪ್ಪೆ ಹಾಗೂ ವಿವಿಧ ಶಾಲೆಗಳ ಮಕ್ಕಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!