ಹನೂರು.22.ಫೆ.25:- ಪಟ್ಟಣದ ಜಿ ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹನೂರು ಪೋಲೀಸ್ ಠಾಣೆಯ ಡಬ್ಲ್ಯೂ ಪಿ ಸಿ ಚೈತ್ರರವರು ಭೇಟಿ ನೀಡಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಸಂಚಾರ ನಿಯಮಗಳ ಹಾಗೂ ಸೈಬರ್ ಸಹಾಯವಾಣಿ 1930 ಮೂಲಕ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ವಿದ್ಯಾರ್ಥಿಗಳು ಈ ದೇಶದ ಆಸ್ತಿ ಇವರ ಸಂರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ.
ಈ ದೇಶದ ಯುವ ಶಕ್ತಿಗಳು ಉತ್ತಮ ಮಾರ್ಗದಲ್ಲಿ ನಡೆದರೆ ಈ ದೇಶ ಪ್ರಬುದ್ಧ ಭಾರತವಾಗುತ್ತದೆ. ಆದರೆ ಇಂದು ಯುವಕರು, ಬಾಲಕಿಯರು ಮಾದಕ ವ್ಯಸನಕ್ಕೆ ತುತ್ತಾಗಿದ್ದಾರೆ ಇದರಿಂದ ಅವರ ಜೀವನ ಸರ್ವನಾಶವಾಗುತ್ತದೆ ಇದರಿಂದ ಹೊರ ಬರಬೇಕಾದರೆ ಅರಿವು ಅಗತ್ಯವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕೂಡ ಬಾಲ್ಯ ವಿವಾಹ ನಡೆಯುತ್ತದೆ ಇದು ಕಾನೂನಿಗೆ ವಿರೋಧವಾಗಿದೆ ಇದರ ಬಗ್ಗೆ ಮಾಹಿತಿಗಳಿದ್ದರೆ ತಿಳಿಸಿ. ಬಾಲ್ಯ ವಿವಾಹದಿಂದ ಬಾಲೆಯರ ಜೀವನ ನಾಶವಾಗುತ್ತದೆ. ಬಾಲ್ಯ ವಿವಾಹ ಮಾಡಿದರೆ ಮದುವೆ ಗಂಡು, ಪೋಷಕರು, ಕಲ್ಯಾಣ ಮಂಟಪಗಳ ಮೇಲೆ ಪ್ರಕರಣಗಳು ದಾಖಲಾಗುತ್ತದೆ.
ಹನೂರು ಸುತ್ತಲಿನ ಪ್ರದೇಶಗಳು ಕಾಡಿಂಚಿನವಾಗಿರುವುದರಿಂದ ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿರುತ್ತದೆ ಇದರಿಂದ ಪೋಕ್ಸೋಗಳ ಪ್ರಕರಣಗಳು ಜಾಸ್ತಿಯಾಗಿದೆ ಇದು ಕಡಿಮೆಯಾಗಬೇಕಾದರೆ ಅರಿವು ಮುಖ್ಯವಾಗಿದೆ.
ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮೋಟರ್ ವಾಹನಗಳು ಬಳಸಬಾರದು.
18 ವರ್ಷ ದಾಟಿದರೆ ಮಾತ್ರ ವಾಹನಗಳನ್ನು ಚಲಾಯಿಸಬೇಕು ಹಾಗೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಯುವಕರು ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಕಡಿಮೆಯಾಗಬೇಕಾದರೆ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದರು.
ಹಾಗೂ ಇನ್ನೂ ಅನೇಕ ವಿಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಲಾಜರಸ್, ಉಪನ್ಯಾಸಕರಾದ ಫರ್ಹಾನ ಬೇಗಂ, ನಂಜುಂಡಯ್ಯ, ಶಿವಕುಮಾರ್, ಸವಿತ, ಕುಸುಮ, ಹರೀಶ್, ಮಹೇಂದ್ರ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
_G Prasankumar kittur