ಚಿಕ್ಕಮಗಳೂರು.15.ಜೂನ್.25:- ರಾಜ್ಯ ಸರಕಾರ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಖಾಸಗಿ ಕಾಲೇಜುಗಳಂತೆ ಆಕರ್ಷಣಿಯವಾಗಿ ಮಾಡಲು ಸಿದ್ಧತೆ. ಈ ನಿಟ್ಟಿನನಲ್ಲಿ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 10 ಸರ್ಕಾರಿ ಪಾಲಿಟೆಕ್ನಿಕ್ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಜಿಲ್ಲೆ ಯಲ್ಲಿ ಚಿಂತಾಮಣಿಯಲ್ಲಿ 2 ಪದವಿ 1 ಪಾಲಿಟೆಕ್ನಿಕ್ ಚಿಕ್ಕಬಳ್ಳಾಪುರದ 1 ಪದವಿ ಕಾಲೇಜು ಸೇರಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸದಸ್ಯರು ಭೇಟಿ ನೀಡಿದ್ದ ವೇಳೆ ಶನಿವಾರ ಅವರನ್ನು ಸ್ವಾಗತಿಸಿದರು.
ಮುಂದಿನ 25 ವರ್ಷಗಳ ಅವಧಿಗೆ ಕಾಲೇಜುಗಳ ಅಭಿವೃದ್ಧಿ ಹೇಗಿರಬೇಕು? ಏನೇನು ಮಾಡಬೇಕು ?ಎಂಬ ಆಲೋಚನೆಯನ್ನು ಇಟ್ಟುಕೊಂಡು ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸದಸ್ಯರನ್ನು ರಾಜ್ಯಕ್ಕೆ ಆಹ್ವಾನಿಸಲಾಗಿದೆ ಎಂದರು.
ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ಗೆ ಚೀನಾ,ಹಾಂಗ್ ಕಾಂಗ್,ಮಲೇಶಿಯಾ, ಜಪಾನ್ ರಾಷ್ಟ್ರ ದವರು ಸದಸ್ಯರಾಗಿದ್ದು ತಂಡದ ಸದಸ್ಯರಾದ ಪೋಕ್ ಏನ್ ಚಾಂಗ್, ಮೊಹಮ್ಮದ್ ಪೈಜ್ ಶೋಲ್ ಅಮೀರ್,ನಹುಂ ಕಿಂ, ಪೂನಂ ಶರ್ಮಾ ಬಾಂಬ್ರಿ ಸೇರಿದಂತೆ ಮತ್ತಿತರರು ಕರ್ನಾಟಕದ ಪ್ರವಾಸ ದಲ್ಲಿದ್ದು ಜಿಲ್ಲೆಗೂ ಬಂದಿದ್ದ ವೇಳೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಂಡಕ್ಕೆ ಶಾಲು ಹೊದಿಸಿ ಹೂವಿನ ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಅವರು ರಾಜ್ಯದ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಹಲವು ಅಂಶಗಳ ವೃದ್ದಿಗೆ ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನಾ ಯೋಜನೆಯನ್ನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನ ಸಹಕಾರದೊಂದಿಗೆ ಸರಕಾರ ಕೈಗೆತ್ತಿಕೊಂಡಿದೆ. ಈ ಸಂಬಂಧ ಬ್ಯಾಂಕಿನ ಪದಾಧಿಕಾರಿಗಳು ರಾಜ್ಯದ ಪ್ರವಾಸದಲ್ಲಿದ್ದಾರೆ ಎಂದರು.
ಸಚಿವ ಎಂ.ಸಿ.ಸುಧಾಕರ್ ಅವಧಿಯಲ್ಲಿ ಕಾಲೇಜು ಅಭಿವೃದ್ಧಿ ಯಾವ ರೀತಿಯಲ್ಲಿ ಆಗಿದೆ ಎಂದು ಬಂದಿರುವ ತಂಡಕ್ಕೆ ಸಂಪೂರ್ಣ ಮಾಹಿತಿಯನ್ನು ಪ್ರವಾದಿ ತಂಡಕ್ಕೆ ವಿವರಿಸಿದರು.
ಈ ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಇದ್ದರು.