ಬೀದರ, ನವೆಂಬರ್.19:- ಕರ್ನಾಟಕವು ವೈವಿದ್ಯೆತೆಗಳಿಂದ ಕೂಡಿದ ನಾಡಾಗಿದ್ದು ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಹಲವಾರು ಸಾಮ್ರಾಜ್ಯಗಳು, ರಾಜ್ಯವಂಶಸ್ಥರು, ಸಂತ ಶರಣರು ಮತ್ತು ದಾರ್ಶನಿಕರಿಗೆ ಜನ್ಮ ನೀಡಿದ ಪುಣ್ಯ ಭೂಮಿ ಇದಾಗಿದೆ. ಸಾಹಿತ್ಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ತನ್ನದೆಯಾದ ರೀತಿಯಲ್ಲಿ ಹೆಸರು ಮಾಡಿದ ನಾಡು ನಮ್ಮದೆಯಾಗಿದೆ. ಸಮಾಜ ಸುಧಾರಣೆಗಾಗಿ ಈ ನಾಡಿನಲ್ಲಿ ಹಲವಾರು ಸಂತ, ಶರಣರು ಶ್ರಮಿಸಿದ್ದಾರೆ. ಅಂತಹ ಮಹನಿಯರಲ್ಲಿ ಕನಕದಾಸರು ಒಬ್ಬರು ಎಂದು ಅರಣ್ಯ, ಪರಿಸರ ಜೀವಿಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೀದರ ವತಿಯಿಂದ ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾಸ ಸಾಹಿತ್ಯದಲ್ಲಿ ಶ್ರೇಷ್ಠ ಹರಿದಾಸರಾಗಿ ತಮ್ಮ ಕೀರ್ತನೆಗಳ ಮೂಲಕ ಅಂದಿನ ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದಿದ ಒಬ್ಬ ಮಹಾನ ಸಂತರಾಗಿದ್ದಾರೆ ಎಂದರು.
ಪೌರಾಡಳಿತ ಹಜ್ ಸಚಿವರಾದ ರಹೀಮಖಾನ ಅವರು ಮಾತನಾಡಿ, ಎಲ್ಲ ಸಮಾಜಗಳಲ್ಲಿ ಮಹಾತ್ಮರಿದ್ದಾರೆ ಅವರ ವಿಚಾರ ಧಾರೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಡವ, ಸಾಹುಕಾರ ಎನ್ನದೇ ಸಮಾಜ ಒಳಿತಿಗಾಗಿ ದುಡಿದ ಮಹಾನರು ಎಂದರು.
ಕರ್ನಾಟಕ ಪದವಿ ಮಹಾವಿದ್ಯಾಲಯ ಬೀದರನ ಸಹಾಯಕ ಪ್ರಾಧ್ಯಾಪಕರಾದ ಡಾ.ಸವಿತಾ ಕೂಡ್ಲಿಕರ ಅವರು ಕನಕದಾಸರ ಜೀವನದ ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಬಂಡೇಪ್ಪ ಖಾಶೆಂಪೂರ ಮತ್ತು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚೀಮಕೊಡ ಮಾತನಾಡಿದರು.
ಔರಾದನ ಆರಾದ್ಯ ಅಮರವಾಡಿ ತಂಡದಿAದ ಭಕ್ತ ಕನಕದಾಸ ಅವರ ಕುರಿತು ನೃತ್ಯ ಪ್ರದರ್ಶಿಸಲಾಯಿತು. ಕಾಳಿದಾಸ ಗೊಂಡ ಯುವಕ ಸಂಘದ ವತಿಯಿಂದ ಏರ್ಪಡಿಸಿದ ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಮಹಮ್ಮದ ಗೌಸ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಾದ ಸಿದ್ರಾಮ ಶಿಂಧೆ, ಕನಕದಾಸ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಬಾಬುರಾವ ಮಲಕಾಪೂರ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಿರಾದಾರ, ಪೀರಪ್ಪ ಯರನಳ್ಳಿ, ಪಂಡಿತರಾವ ಚಿದ್ರಿ, ಅಭಿಮಾನಿಗಳು, ಚಿಂತಕರು ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.
