09/06/2025 1:21 AM

Translate Language

Home » ಲೈವ್ ನ್ಯೂಸ್ » ಸಮಸ್ಯೆ ಹೇಳಿಕೊಂಡ ಜನ: ಪರಿಹಾರಕ್ಕೆ ಸೂಚನೆ:ಶಾಸಕ ಪ್ರಭು ಚವಾಣ.!

ಸಮಸ್ಯೆ ಹೇಳಿಕೊಂಡ ಜನ: ಪರಿಹಾರಕ್ಕೆ ಸೂಚನೆ:ಶಾಸಕ ಪ್ರಭು ಚವಾಣ.!

Facebook
X
WhatsApp
Telegram

ಬೀದರ.31.ಜನವರಿ.25’ಔರಾದ (ಬಾ) ತಾಲ್ಲೂಕಿನ ವಡಗಾಂವ್ (ಡಿ) ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಜನ ತಡ ರಾತ್ರಿಯವರೆಗೂ ಹಾಜರಿದ್ದು ತಮ್ಮ ಸಮಸ್ಯೆ ಹೇಳಿಕೊಂಡರು.

ನಮ್ಮ ಊರಲ್ಲಿ ಇದುವರೆಗೂ ಬಸ್ ನಿಲ್ದಾಣ ಇಲ್ಲ. ಪ್ರಯಾಣಿಕರು ಹಾಗೂ ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಿಸಿಲು, ಮಳೆಯಲ್ಲೇ ನಿಲ್ಲಬೇಕಾಗಿದೆ.

ಹೀಗಾಗಿ ಇಲ್ಲಿ ಬಸ್ ನಿಲ್ದಾಣ ಮಾಡಿಕೊಡಿ’ ಎಂದು ಕೆಲವರು ಮನವಿ ಮಾಡಿದರು.

‘ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಹೀಗಾಗಿ 10 ಕಿ.ಮೀ. ದೂರದ ಮಾಂಜ್ರಾ ನದಿಯಿಂದ ಗ್ರಾಮಕ್ಕೆ ನೀರು ತರುವ ಯೋಜನೆ ಜಾರಿಗೆ ತರಬೇಕು. ವಡಗಾಂವ್ ಜಿಲ್ಲಾ ಪಂಚಾಯಿತಿ ಕ್ಷೇತ್ರ. ಹೀಗಾಗಿ ಇಲ್ಲಿ ನೆಮ್ಮದಿ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರ ಮಂಜೂರು ಮಾಡಬೇಕು’ ಎಂದು ಮನವಿ ಸಲ್ಲಿಸಿದರು.

ಇದು ಗಡಿ ಭಾಗ ಆಗಿರುವುದರಿಂದ ವಡಗಾಂವ್ ಸೇರಿದಂತೆ ಸುತ್ತಲೂ ನಾಲ್ಕೈದು ಗ್ರಾಮಗಳ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣದ ವ್ಯವಸ್ಥೆ ಇಲ್ಲ. ಹೀಗಾಗಿ ಪಿಯು ಕಾಲೇಜು ಮಂಜೂರು ಮಾಡುವಂತೆ ಗ್ರಾಮದ ಜನ ಬೇಡಿಕೆ ಸಲ್ಲಿಸಿದರು.

ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿಲ್ಲ ಎಂದೂ ಜನರು ದೂರು ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗಿರೀಶ್ ಬದೋಲೆ, ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ತಾ.ಪಂ. ಇಒ ಮಾಣಿಕರಾವ್‌ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಹೇಡೆ, ಹಿರಿಯ ಮುಖಂಡ ಶರಣಬಸಪ್ಪ ದೇಶಮುಖ, ಮುಖಂಡ ವಸಂತ ವಕೀಲ್, ಸಾಗರ ಕೊಳ್ಳೂರ್, ಧೊಂಡಿಬಾ ನರೋಟೆ, ಅಧಿಕಾರಿಗಳಾದ ಗಾಯತ್ರಿ, ಧೂಳಪ್ಪ, ಸುಭಾಷ, ರವಿ ಕಾರಬಾರಿ, ವೆಂಕಟರಾವ ಸಿಂಧೆ, ಸ್ಥಳೀಯ ಮುಖಂಡ ಮಲ್ಲಪ್ಪ ನೇಳಗೆ, ಪ್ರಕಾಶ ಮೇತ್ರೆ, ಹಣಮಂತ ನೇಳಗೆ, ಅರಹಂತ ಸಾವಳೆ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಪ್ರಕಾಶ ಜೀರ್ಗಾ, ಗ್ರಾಮಸ್ಥರು ಹಾಗೂ ಸುತ್ತಲಿನ ತಾಂಡಾ ನಿವಾಸಿಗಳು ಇದ್ದರು.

ಅಭಿವೃದ್ಧಿಗೆ ಪ್ರೇರಣೆ: ಶಾಸಕ

ಔರಾದ್: ‘ಗ್ರಾಮ ಸಂಚಾರ ಹಾಗೂ ಗ್ರಾಮ ವಾಸ್ತವ್ಯ ಅಭಿವೃದ್ಧಿ ಕೆಲಸ ಮಾಡಲು ಪ್ರೇರಣೆ ಆಗಿದೆ’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು. ತಾಲ್ಲೂಕಿನ ವಡಗಾಂವ್‌ನಲ್ಲಿ ಗುರುವಾರ ಸಂಜೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ನಾನು 2008ರಿಂದ ಪ್ರತಿ ವರ್ಷ ಗ್ರಾಮ ಸಂಚಾರ ಮಾಡುತ್ತೇನೆ. ಜನರ ಬಳಿ ಹೋಗಿ ಅವರ ಸಮಸ್ಯೆ ಕೇಳುತ್ತೇನೆ. ಹಂತ ಹಂತವಾಗಿ ಅವರ ಬೇಡಿಕೆ ಈಡೇರಿಸುತ್ತೇನೆ. ಜನರ ಕಷ್ಟ-ಸುಖದಲ್ಲೂ ಭಾಗಿಯಾಗುತ್ತೇನೆ. ಈ ಕಾರಣದಿಂದಲೇ ಕ್ಷೇತ್ರದ ಜನ ನನಗೆ ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ’ ಎಂದು ತಿಳಿಸಿದರು. ‘2008ರ ನಂತರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಆಗಿವೆ. ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದೇನೆ. ಜನರಿಗೆ ಕುಡಿಯುವ ನೀರು ರೈತರಿಗೆ ಬ್ಯಾರೇಜ್ ನಿರ್ಮಿಸುವ ಕೆಲಸ ಮಾಡಿದ್ದೇನೆ.

ಎಲ್ಲ ಊರುಗಳಲ್ಲಿ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ’ ಎಂದರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!