ಹನೂರು26. ಜೂನ್.25:- :ಭೀಮ್ ಸೇನಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹನೂರು ತಾಲ್ಲೂಕು ಶಾಖೆ ವತಿಯಿಂದ ಶಾಹು ಮಹಾರಾಜ್ ರವರ 151 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿತ್ತು.
ಮನೋರಖ್ಖಿತ ಬಂತೇಜಿ ರವರು ಬುದ್ದ, ಶಾಹು ಮಹಾರಾಜ್ , ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶಾಹು ಮಹಾರಾಜ್ ರವರು ಮಹಾರಾಷ್ಟ್ರದ ಕೊಲ್ಹಾಪುರ ರಾಜ ಸಂಸ್ಥಾನದ ಮೊದಲ ಮಹಾರಾಜರಾಗಿದ್ದರು ಮಹಾರಾಷ್ಟ್ರದ ಇತಿಹಾಸದಲ್ಲಿ ಅಮೂಲ್ಯ ರತ್ನವಾಗಿದ್ದರು.
ಇವರನ್ನು ನಿಜವಾದ ಪ್ರಜಾಪ್ರಭುತ್ವವಾದಿ ಮತ್ತು ಸಾಮಾಜಿಕ ಸುಧಾರಕ ಎಂದು ಪರಿಗಣಿಸಲಾಗುತ್ತದೆ. ತಮ್ಮ ಆಳ್ವಿಕೆಯಲ್ಲಿ ಅನೇಕ ಪ್ರಗತಿಪರ ನೀತಿಗಳೊಂದಿಗೆ ಸಮರ್ಥ ಆಡಳಿತವನ್ನು ಮಾಡಿದರು.
ತಮ್ಮ ರಾಜ್ಯದಲ್ಲಿ ದೀನ ದಲಿತರ ಪರವಾಗಿ ಕೆಲಸ ಮಾಡಿದರು. ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಪ್ರಾಥಮಿಕ ಶಿಕ್ಷಣವನ್ನು ಪಡೆಯಬೇಕೆಂಬುವುದು ಆದ್ಯತೆಗಳಲ್ಲಿ ಒಂದಾಗಿತ್ತು.
ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರಿಗೆ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡಿದರು ಇವರಿಗೆ ವೃತ್ತಿಜೀವನದಲ್ಲಿ ಸಹಾಯ ಮಾಡಿದರು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳನ್ನು ಸ್ಥಾಪಿಸಿದರು ಮತ್ತು ರಾಜ್ಯದಲ್ಲಿ ಶಿಕ್ಷಣವನ್ನು ಹರಡಲು ಸಹಾಯ ಮಾಡಿದರು.
ಸಮಾಜ ಸುಧಾರಕ ಜ್ಯೋತಿಬಾ ಫುಲೆಯವರ ಕೊಡುಗೆಗಳಿಂದ ಹೆಚ್ಚು ಪ್ರಭಾವಿತರಾದ ಶಾಹು ಮಹಾರಾಜರು ಒಬ್ಬ ಆದರ್ಶ ನಾಯಕ .
ವಿದ್ಯಾರ್ಥಿಗಳು ಉತ್ತಮ ಜ್ಞಾನವನ್ನು ಪಡೆದು ಸಂಪನ್ಮೂಲ ವ್ಯಕ್ತಿಗಳಾಗಬೇಕು.
ಖಾಸಗೀಕರಣ, ಜಾಗತೀಕರಣ, ಉದಾರೀಕರಣದ ಆಗುಹೋಗುಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಧಮ್ಮ ಧೀಕ್ಷಾ ಬಂತೇಜಿ, ಭೀಮ್ ಸೇನಾ ಅಧ್ಯಕ್ಷರಾದ ರಮೇಶ್, ಕಾರ್ಯದರ್ಶಿ ಉಪನ್ಯಾಸಕ ನಂಜುಂಡಯ್ಯ, ಸಂಘಟನಾ ಕಾರ್ಯದರ್ಶಿ ಮಧುಸೂದನ್, ಉಪನ್ಯಾಸಕ ಶಿವಕುಮಾರ್, ಮಹಿಳಾ ಘಟಕ ಅಧ್ಯಕ್ಷರಾದ ಸಾವಿತ್ರಿ, ಶಿವಮ್ಮ, ಪ್ರಜಾವಿಮೋಚನ ಚಳುವಳಿಯ ಮಹದೇವ, ಸಾಕಯ್ಯ, ಉಪನ್ಯಾಸಕ ಮಹೇಂದ್ರ, ಮೇಲ್ವಿಚಾರಕ ಪ್ರಕಾಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
